ಮುಂಬೈ: ಈ ಹಿಂದೆ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಸೂಪರ್ಸ್ಟಾರ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ವೋಡ್ಕಾ ಅಥವಾ ನೀರು ಕುಡಿದಿದ್ದರೆ ಎಂಬುದರ ಯಾವುದೇ ಸ್ಪಷ್ಟತೆ ಇಲ್ಲ ಎಂಬುದು ಅಂತಿಮ ತೀರ್ಪಾಗಿತ್ತು. ಏಕೆಂದರೆ ಆ ದಿನ ಅವರು ಕುಡಿದದ್ದು ಸಾಕಷ್ಟು ಪಾರದರ್ಶಕವಾಗಿತ್ತು. ಹೀಗಾಗಿ ಪ್ರಕರಣದಿಂದ ಸೂಪರ್ಸ್ಟಾರ್ ಮುಕ್ತಿ ಪಡೆದಿದ್ದರು. ಇದೀಗ ಎಸ್ಐಟಿ ಸಂಶೋಧನೆಗಳೊಂದಿಗೆ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಪ್ರಕರಣವೂ ಸಹ ಇದೇ ರೀತಿಯ ಟ್ವಿಸ್ಟ್ ಅನ್ನು ತೆಗೆದುಕೊಂಡಂತೆ ತೋರುತ್ತಿದೆ.
2021ರ ಅಕ್ಟೋಬರ್ 2 ರಂದು, ಎನ್ಸಿಬಿ ಅಧಿಕಾರಿಗಳ ತಂಡವು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿತು ಮತ್ತು ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಶಾರುಖ್ ಅವರ ಮಗ ಆರ್ಯನ್ ಮತ್ತು ಇತರ 14 ಜನರನ್ನು ತನ್ನ ಕಸ್ಟಡಿಗೆ ತೆಗೆದುಕೊಂಡಿತು. ಇದಾದ ನಂತರ ಶಾರುಖ್ ಅವರ ಮಗ ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಯಿತು. ಆದರೆ ಆರ್ಯನ್ ಕೆಲವು ಜನರೊಂದಿಗೆ ಮಾಡಿದ ವಾಟ್ಸ್ಆ್ಯಪ್ ಚಾಟ್ಗಳಿಂದ ಆರ್ಯನ್ ಡ್ರಗ್ ದಂಧೆಯ ಭಾಗವಾಗಿಲ್ಲ ಎಂದು ತಿಳಿದುಬಂದಿದೆ.
ಅಂತಿಮವಾಗಿ ಈ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿ ಇರುವಂತೆ ಮಾಡಲಾಯಿತು. ಕೊನೆಗೆ ಆರ್ಯನ್ ಖಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಎನ್ಸಿಬಿ ಮಾಡಿದ ಒಂದು ಸಣ್ಣ ಎಡವಟ್ಟು ಎಂಬುದು ಇದೀಗ ಬೆಳಕಿಗೆ ಬಂದಿದೆ. ಸಂಪೂರ್ಣ ವಿಷಯದ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ಹಡಗಿನ ಮೇಲೆ ದಾಳಿ ಮಾಡಿದ ಎನ್ಸಿಬಿ ಅಧಿಕಾರಿಗಳು ತಮ್ಮ ದಾಳಿಯನ್ನು ಕ್ಯಾಮೆರಾದಲ್ಲಿ ದಾಖಲಿಸಿಲ್ಲ ಎಂದು ಕಂಡುಹಿಡಿದಿದೆ.
ಎನ್ಸಿಬಿ ಕೈಪಿಡಿಯ ಪ್ರಕಾರ ದಾಳಿಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುವುದು ಕಡ್ಡಾಯವಾಗಿದೆ ಮತ್ತು ನ್ಯಾಯಾಲಯವು ಎನ್ಸಿಬಿಯ ಶೋಧನೆಯ ಆವೃತ್ತಿಯನ್ನು ಸ್ವೀಕರಿಸಲು ಇದು ಕಡ್ಡಾಯವಾಗಿದೆ. ಎನ್ಸಿಬಿ ಅಧಿಕಾರಿಗಳ ಈ ಒಂದು ಸಣ್ಣ ಎಡವಟ್ಟಿನಿಂದಾಗಿ ಇದೀಗ ಆರ್ಯನ್ ಖಾನ್ ಅವರನ್ನು ಈ ಪ್ರಕರಣದಿಂದ ಶಾಶ್ವತವಾಗಿ ಮುಕ್ತಗೊಳಿಸುವಂತೆ ಮಾಡಿದೆ. ಇದು ಖಚಿತವಾಗಿ ಸ್ಟಾರ್ಕಿಡ್ಗೆ ಪ್ರಮುಖ ಪರಿಹಾರವಾಗಿದೆ. (ಏಜೆನ್ಸೀಸ್)
ಜೀವಂತ ಅಥವಾ ಶವ! ಪುತಿನ್ ಜೀವಕ್ಕೆ ರಷ್ಯಾ ಉದ್ಯಮಿ ಆಫರ್ ಮಾಡಿದ ಮೊತ್ತ ಕೇಳಿದ್ರೆ ದಂದಾಗ್ತೀರಾ!
ಯುರೋಪ್ನ ಅತಿ ದೊಡ್ಡ ಅಣು ಸ್ಥಾವರ ಝಪೊರಿಝಿಯಾ ಮೇಲೆ ರಷ್ಯಾ ದಾಳಿ: ವಿಶ್ವಸಂಸ್ಥೆಯಿಂದ ತುರ್ತು ಸಭೆ
ಉತ್ತರ ಕನ್ನಡದ ದಾಂಡೇಲಿಯಲ್ಲಿ ಸೈಕಲ್ ಅಪಘಾತದಲ್ಲಿ ಯುವ ವೈದ್ಯೆ ದುರಂತ ಸಾವು