More

    ದರ್ಶನ್​ ಹಲ್ಲೆ ಪ್ರಕರಣ: ಜೂನ್​ 24ರ ಮಿಡ್​ನೈಟ್​ ರಹಸ್ಯ ಬಿಚ್ಚಿಟ್ಟ ಹೋಟೆಲ್​ ಸೆಕ್ಯುರಿಟಿ ಗಾರ್ಡ್​!

    ಮೈಸೂರು: ಸಂದೇಶ್​ ಪ್ರಿನ್ಸ್​ ಹೋಟೆಲ್​ನಲ್ಲಿ ಸಪ್ಲೈಯರ್​ ಮೇಲೆ ನಟ ದರ್ಶನ್​ ಹಲ್ಲೆ ಮಾಡಿದ್ದಾರೆನ್ನಲಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಜೂನ್​ 24ರಂದು ಹೋಟೆಲ್​ನಲ್ಲಿ ನಡೆದ ಘಟನೆಯನ್ನು ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟಿದ್ದಾರೆ.

    ಹೋಟೆಲ್​ನ ಸ್ವಿಮ್ಮಿಂಗ್​ ಫೂಲ್​ ಏರಿಯಾದಲ್ಲಿ ಇರುವ ಜಾಗದಲ್ಲಿ ಹತ್ತರಿಂದ ಹದಿನೈದು ಜನರನ್ನು ಕರೆಸಿಕೊಂಡು ಮಿನಿ ಡ್ರಿಂಕ್ಸ್​ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಯೆಲ್ಲ ಮುಗಿಯಿತು. ತುಂಬಾ ಮದ್ಯಪಾನ ಮಾಡಿದ್ದರು. ಯಾವುದೋ ಒಂದು ಐಟಂ ಕೊಡಲಿಲ್ಲ ಅಂತಾ ಮದ್ಯದ ಅಮಲಿನಲ್ಲಿ ಸಪ್ಲೈಯರ್​ಗೆ ಹೊಡೆದರು. ಅದರಿಂದ ಸಪ್ಲೈಯರ್​ ಕೂಡ ಕಣ್ಣೀರಾಕಿದರು. ಕಪಾಳ ಮತ್ತು ಕಿವಿ ಸೇರಿಸಿ ಹೊಡೆದಿದ್ದರಿಂದ ನೋವಿನಿಂದ ಸಪ್ಲೈಯರ್​ ಅಳುತ್ತಿದ್ದ ಎಂದು ಸೆಕ್ಯುರಿಟಿ ಗಾರ್ಡ್​ ಹೇಳಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೊಡೆದಿದ್ದು ಮಾತ್ರವಲ್ಲದೆ, ಕೆಟ್ಟದಾಗಿ ನಿಂದಿಸಿದರು. ಸೆಕ್ಯುರಿಟಿಗಳಿಗೂ ಬೈದರು. ಅಲ್ಲದೆ, ತನ್ನ ಬಳಿಯಿದ್ದ ಹಣವನ್ನು ಎರಚಿ ಹೋಟೆಲ್​ ಮಾಲೀಕರ ವಿರುದ್ಧವೂ ಕೂಗಾಡಿದರು ಎಂದು ಸೆಕ್ಯೂರಿಟಿ ಗಾರ್ಡ್​ ಹೇಳಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಅಂದು ರಾತ್ರಿ ದರ್ಶನ್​ ಅವರ ವರ್ತನೆ ಹೇಗಿತ್ತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಘಟನೆ ನಡೆದ ದಿನದಂದು ಇವರೆಲ್ಲರೂ ಪ್ರತ್ಯಕ್ಷದರ್ಶಿಗಳಾಗಿದ್ದರಂತೆ.

    ದರ್ಶನ್​ ಹೇಳಿಕೆ ಕುತೂಹಲ
    ದರ್ಶನ್​ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದು, ಇದಕ್ಕೆಲ್ಲ ದರ್ಶನ್​ ಅವರೇ ಉತ್ತರ ನೀಡಬೇಕಾಗುತ್ತದೆ. ಏಕೆಂದರೆ ಅವರನ್ನು ಬೆಂಬಲಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರದ್ದು ಏನೂ ತಪ್ಪಿಲ್ಲ ಎಂದು ಈಗಲೂ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದು, ದರ್ಶನ್​ ಪ್ರಕರಣ ಕುರಿತು ನೀಡುವ ಸಮರ್ಥನೆ ಮೇಲೆ ಇಡೀ ಪ್ರಕರಣ ನಿಂತಿದೆ.

    ಅಪಘಾತದಿಂದ ಹೊರಬಿತ್ತು ಗಾಂಜಾ ಸಾಗಾಣಿಕೆ ಜಾಲ!

    ‘ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳೇ, ಪರೀಕ್ಷಾ ಕೇಂದ್ರಗಳು ಸುರಕ್ಷಿತ ತಾಣ- ನಿಶ್ಚಿಂತೆಯಿಂದ ಬನ್ನಿ’

    ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts