ಹೈದರಾಬಾದ್: ನಿನ್ನೆಯಷ್ಟೇ ಬಿಡುಗಡೆಯಾದ ನಟ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ “ಪುಷ್ಪ” ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್ಆಫೀಸ್ನಲ್ಲೂ ಚಿತ್ರ ಸದ್ದು ಮಾಡುತ್ತಿದೆ. ಈ ಚಿತ್ರದ ಐಟಂ ಸಾಂಗ್ನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. “ಹೂಂ ಅಂತೀರಾ – ಊಹೂ ಅಂತೀರಾ” ಹಾಡಿನಲ್ಲಿ ಮೈಚಳಿ ಬಿಟ್ಟು ನಟಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಆದರೆ, ಈ ಹಾಡಿಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ಹಾಡಿನ ಸಾಲುಗಳು ಪುರುಷರನ್ನು ಅವಮಾನಿಸುವಂತಿವೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಅದೇ ಐಟಂ ಹಾಡಿಗೆ ಪುರುಷ ವರ್ಷನ್ ಮೂಲಕ ಯುವಕರು ತಿರುಗೇಟನ್ನು ನೀಡಿದ್ದಾರೆ.
”ಹೂಂ ಅಂತೀರಾ – ಊಹೂ ಅಂತೀರಾ” ಹಾಡಿನ ಸಾಹಿತ್ಯದಲ್ಲಿ ಮತ್ತು ದೃಶ್ಯಗಳಲ್ಲಿ ಪುರುಷರನ್ನು ಕಾಮಪ್ರಚೋದಕರೆಂಬಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ, ಈ ಹಾಡಿನ ವಿರುದ್ಧ ಪ್ರಕರಣವೊಂದು ದಾಖಲಿಸಲಾಗಿದೆ. ”ಸೀರೆ ತೊಟ್ಟರು, ಶಾರ್ಟಸ್ ತೊಟ್ಟರು ಗಂಡಸರು ನೋಡುತ್ತಾರೆ. ಗಂಡಸರು ನಾಚಿಕೆ ಬಿಟ್ಟವರು” ಎಂಬ ಸಾಲುಗಳು ಹಾಡಿನ ಆರಂಭದಲ್ಲೇ ಕೇಳಿಬರುತ್ತವೆ. ಹೀಗಾಗಿ ಹಾಡನ್ನು ನಿಷೇಧಿಸುವಂತೆ ಪುರುಷ ಸಂಘದವರು ಆಂಧ್ರಪ್ರದೇಶದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಸಮಂತಾ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.
ಏನೇ ಪ್ರಯತ್ನ ಮಾಡಿದರೂ ಕೂಡ ಹಾಡನ್ನು ನಿಷೇಧಿಸಲು ಸಾಧ್ಯವಾಗಿಲ್ಲ. ಆದರೆ, ಹಾಡಿಗೆ ಪ್ರತಿಯಾಗಿ ಪುರುಷ ವರ್ಷನ್ ಮೂಲಕ ಸಮಂತಾ ಹಾಗೂ ಪುಷ್ಪ ತಂಡಕ್ಕೆ ತಿರುಗೇಟು ನೀಡಲಾಗಿದೆ. “ಊ ಅಂಟಾವಾ ಪಾಪಾ” ಎಂಬ ಸಾಲಿನಿಂದ ಹಾಡು ಆರಂಭವಾಗುತ್ತದೆ. ನಿಮಗೆ ಸಿಕ್ಸ್ ಪ್ಯಾಕ್ ಇರುವ ಹುಡಗನೇ ಬೇಕು. ಬೈಕ್ ಇರುವ ಹುಡಗನೇ ಬೇಕು. ಒಂದು ವೇಳೆ ಕಾರು ಇದ್ರೆ ಬೈಕ್ ಇರುವ ಹುಡಗನನ್ನು ಬಿಟ್ಟು ಹೋಗ್ತೀರಾ, ನಿಮಗೆ ಒಳ್ಳೆಯ ಮನಸ್ಸಿಗಿಂತ ಹಣಾನೇ ಮುಖ್ಯ. ಒಟ್ಟಿನಲ್ಲಿ ನಿಮ್ಮ ಟಾರ್ಗೆಟ್ ನಾವೇ.. ಏಕೆಂದರೆ, ನಿಮ್ಮ ಬುದ್ಧಿಯೇ ವಕ್ರ ಬುದ್ದಿ ಎಂಬ ಅರ್ಥದಲ್ಲಿ ಸಾಹಿತ್ಯ ಬರೆದು ಸಮಂತಾ ಐಟಂ ಸಾಂಗ್ಗೆ ತಿರುಗೇಟು ನೀಡಲಾಗಿದೆ. ಇದೀಗ ಈ ಹಾಡು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿದ್ದು, ಭಾರೀ ವೈರಲ್ ಆಗುತ್ತಿದೆ. ಪ್ರಶಾಂತ್ ಎಂಬುವರು ಹಾಡನ್ನು ಬರೆದಿದ್ದು, ರಮಣಾ ಎಂಬುವರು ಹಾಡಿದ್ದಾರೆ.
ಇನ್ನು ಪುಷ್ಪ ಚಿತ್ರದಲ್ಲಿ ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದು, ಸಾಹಿತ್ಯವನ್ನು ವಿವೇಕ ಮತ್ತು ಚಂದ್ರಬೋಸ್ ಬರೆದಿದ್ದಾರೆ. ಈ ಹಾಡಿನಲ್ಲಿ ”ಸೀರೆ ತೊಟ್ಟರು, ಶಾರ್ಟಸ್ ತೊಟ್ಟರು ಗಂಡಸರು ನೋಡುತ್ತಾರೆ. ಗಂಡಸರು ನಾಚಿಕೆ ಬಿಟ್ಟವರು” ಎಂಬ ಸಾಲುಗಳು ಹಾಡಿನ ಆರಂಭದಲ್ಲೇ ಕೇಳಿಬರುತ್ತವೆ. ಜೊತೆಗೆ, ಹಾಡಿನ ಕೋರಸ್ ಸಾಲುಗಳಲ್ಲಿ ಸಹ ”ಗಂಡಸರ ಬುದ್ಧಿಯೇ ನಿಚ” ಎಂಬ ಅರ್ಥವನ್ನು ಮೂರು ಬಾರಿ ಸಾರುತ್ತಿವೆ. ಸದ್ಯ, ಇಂತಹ ಸಾಲುಗಳೆ ಹಲವು ಪುರುಷರ ಕೆಂಗಣ್ಣಿಗೆ ಕಾರಣವಾಗಿದೆ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಐಟಂ ಹಾಡನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ಇದಕ್ಕೆ ಬಾಲಿವುಡ್ ಜನಪ್ರಿಯ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಗಂಡ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದು, ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು ಸಮಂತಾ. ಇದೀಗ, ಈ ಹಾಡಿಂದ ಮತ್ತೆ ಸಮಂತಾಗೆ ಹೊಸ ತಲೆ ಬಿಸಿ ಆರಂಭವಾದಂತಿದೆ. (ಏಜೆನ್ಸೀಸ್)
ಸಮಂತಾ ಐಟಂ ಹಾಡಿನ ವಿರುದ್ಧ ಪುರುಷ ಸಂಘದವರ ದೂರು; ಅಂತಹದ್ದು ಏನಿದೆ ಈ ಹಾಡಿನಲ್ಲಿ?
ಮದ್ವೆಯಾದ ಎರಡೇ ವರ್ಷದಲ್ಲಿ ಗಂಡ ನಾಪತ್ತೆ: ಮತ್ತೊಂದು ಮದ್ವೆಯಾದವಳಿಗೆ 12 ವರ್ಷದ ಬಳಿಕ ಶಾಕ್!