ಮುಂಬೈ: ಸೈಬರ್ ಕ್ರೈಂ ಪ್ರಕರಣ ದಿನವೂ ವರದಿಯಾಗುತ್ತಿದೆ. ಬ್ಯಾಂಕ್ ಖಾತೆಗೆ ಕನ್ನ ಹಾಕಿ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮುಂಬೈನಲ್ಲಿ ಇಂಥದ್ದೇ ಒಂದು ಪ್ರಕರಣ ಜರುಗಿದ್ದು, ಆನ್ಲೈನ್ನಲ್ಲಿ ಪಿಜ್ಜಾ ಮತ್ತು ಡ್ರೈ ಫ್ರೂಟ್ ಆರ್ಡರ್ ಮಾಡಿದ ವೃದ್ಧೆಯೊಬ್ಬರು 11 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಇದೀಗ ಸೈಬರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಮುಂಬೈನ ಅಂಧೇರಿಯಲ್ಲಿ ವಾಸವಿರುವ ವೃದ್ಧೆ ಕಳೆದ ವರ್ಷ ಜುಲೈನಲ್ಲಿ ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಈ ವೇಳೆ 9,999 ರೂಪಾಯಿ ಕಳೆದುಕೊಂಡಿದ್ದರು. ಮತ್ತೆ ಅಕ್ಟೋಬರ್ 29ರಂದು ಡ್ರೈಫ್ರೂಟ್ ಆರ್ಡರ್ ಮಾಡಿ 1,496 ರೂಪಾಯಿ ಕಳೆದುಕೊಂಡಿದ್ದರು.
ಕಳೆದುಕೊಂಡ ಹಣವನ್ನು ಮತ್ತೆ ಪಡೆಯಲು ವೃದ್ಧೆ ಗೂಗಲ್ ಸಹಾಯ ಪಡೆದಿದ್ದಾರೆ. ಗೂಗಲ್ನಲ್ಲಿ ಸಿಕ್ಕ ಫೋನ್ ನಂಬರ್ ಒಂದಕ್ಕೆ ವೃದ್ಧೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಹಣವನ್ನು ಅಕೌಂಟ್ಗೆ ಮರಳಿಸುವ ಭರವಸೆಯನ್ನು ನೀಡಿದ್ದಾನೆ. ಫೋನ್ನಲ್ಲಿ ಅಪ್ಲಿಕೇಶನ್ ಒಂದನ್ನು ಡೌನ್ಲೋಡ್ ಮಾಡುವಂತೆ ಹೇಳಿದ್ದಾನೆ. ಹೇಳಿದಂತೆಯೇ ವೃದ್ಧೆ ಆ್ಯಪ್ ಡೌನ್ಲೋಡ್ ಮಾಡಿದ್ದಾರೆ.
ಇದಾದ ಬಳಿಕ ಸೈಬರ್ ಖದೀಮರು ಅಪ್ಲಿಕೇಶನ್ ಸಹಾಯದಿಂದ ವೃದ್ಧೆಯ ಬ್ಯಾಂಕ್ ಖಾತೆಯ ನಂಬರ್ ಮತ್ತು ಪಾಸ್ವರ್ಡ್ ಸೇರಿದಂತೆ ಅನೇಕ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಹಂತ ಹಂತವಾಗಿ ಹಣವನ್ನು ಖಾತೆಯಿಂದ ಎಗರಿಸಿದ್ದಾರೆ. ನವೆಂಬರ್ 14 ರಿಂದ ಡಿಸೆಂಬರ್ 1ರವರೆಗೂ ಸುಮಾರು 11 ಲಕ್ಷದ 78 ಸಾವಿರ ಹಣವನ್ನು ವೃದ್ಧೆಯ ಬ್ಯಾಂಕ್ ಖಾತೆಯಿಂದ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ತಾನೂ ಮತ್ತೊಮ್ಮೆ ಮೋಸ ಹೋಗಿರುವುದನ್ನು ಇತ್ತೀಚೆಗಷ್ಟೇ ಅರಿತ ವೃದ್ಧೆ ಸೈಬರ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಡೆದ ಎಲ್ಲ ಘಟನೆಯನ್ನು ಪೊಲೀಸರ ಎದುರು ವೃದ್ಧೆ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಗೂಗಲ್ನಲ್ಲಿ ಕಾಣುವ ಫೋನ್ ನಂಬರ್ಗೆ ಕರೆ ಮಾಡಬೇಡಿ ಸೈಬರ್ ವಂಚಕರು ಕಾದು ಕುಳಿತಿರುತ್ತಾರೆ ಎಂದು ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್)
ಮಗಳ ಸಾವಿನ ನೋವಲ್ಲೇ ಜನತೆಯ ಬಳಿ ಅಮೃತಾ ನಾಯ್ಡು ಮಾಡಿರುವ ಮನವಿಯು ಕಣ್ಣೀರು ತರಿಸುವಂತಿದೆ
ಇದು ಅತ್ಯಾಚಾರಿಗಳನ್ನು ಪ್ರೀತಿಸೋ ಸಮಾಜ: ನಟಿ ಪಾರ್ವತಿ ನೋವಿಗೆ ಗಾಯಕಿ ಚಿನ್ಮಯಿ ಸಾಂತ್ವಾನ
ಸಂಗೀತಗಾರನ ಎದುರಲ್ಲೇ ವಾದ್ಯವನ್ನು ಸುಟ್ಟ ತಾಲಿಬಾನಿಗಳು: ಕಲಾವಿದನ ಕಣ್ಣೀರು ನೋಡಿ ರಕ್ಕಸರ ನಗು