ಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆಯ ಯುವ ನಟ ಹಾಗೂ ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬಾರ್ ಅವರಿಗೆ ಮಾತೃ ವಿಯೋಗವಾಗಿದೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಜಾತ ವೀರಪ್ಪ ಅಂಬಾರ್ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ (ಜುಲೈ 15) ರಾತ್ರಿ ವಿಧಿವಶರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಕಾಸರಗೋಡಿನ ಉಪ್ಪಳ ಸಮೀಪದ ಐಲದಲ್ಲಿ ನಡೆಯಲಿದೆ.
ಸುಜಾತ ಅವರ ಪತಿ ವೀರಪ್ಪ ಅಂಬಾರ್ ಸಂಘ ಪರಿವಾರದ ಹಿರಿಯ ಮುಖಂಡರಲ್ಲಿ ಒಬ್ಬರು. ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತ ಅವರು ಸಾಮಾಜಿಕ ಸೇವೆಯಲ್ಲೂ ತೊಡಗಿಕೊಂಡಿದ್ದರು. ಇದೀಗ ಸುಜಾತ ಅವರನ್ನು ಕಳೆದುಕೊಂಡ ಪೃಥ್ವಿ ಅಂಬರ್ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ದಿಯಾ ಸಿನಿಮಾ ಮೂಲಕ ಭರವಸೆಯ ನಾಯಕ ನಟನಾಗಿ ಪೃಥ್ವಿ ಅಂಬಾರ್ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಬೈರಾಗಿ ಮತ್ತು ಶುಗರ್ಲೆಸ್ ಸಿನಿಮಾ ಬಿಡುಗಡೆಯಾಗಿದೆ. ಸಾಲು ಸಾಲು ಚಿತ್ರಗಳಲ್ಲಿ ಪೃಥ್ವಿ ನಟಿಸುತ್ತಿದ್ದಾರೆ. ಇದೀಗ ತಾಯಿಯನ್ನು ಕಳೆದುಕೊಂಡಿರುವ ಪೃಥ್ವಿ ಅಂಬಾರ್ ದುಃಖ ಸಾಗರದಲ್ಲಿ ಮುಳುಗಿದ್ದಾರೆ.
ಜನಾಕ್ರೋಶಕ್ಕೆ ಮಣಿದ ಸರ್ಕಾರ: ಸರ್ಕಾರಿ ಕಚೇರಿಗಳಲ್ಲಿ ಫೋಟೋ-ವಿಡಿಯೋ ಶೂಟಿಂಗ್ ಬ್ಯಾನ್ ಆದೇಶ ವಾಪಸ್
ನಟ ರಾಘವ ಲಾರೆನ್ಸ್ ತಲೈವಾ ರಜಿನಿಕಾಂತ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದು ಇದೇ ಕಾರಣಕ್ಕೆ…
ಕಾರುಗಳ ಕಳ್ಳಸಂಚಾರ, ಅಪಘಾತ ವಿಮೆ ಕ್ಲೇಮ್ಗೂ ಅಡ್ಡದಾರಿ: ವೈಟ್ಬೋರ್ಡ್ ವಾಹನ ಟ್ಯಾಕ್ಸಿಯಾಗಿ ಬಳಕೆ..