ವಿಜಯನಗರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರಿಗೆ ಕೆಎಸ್ಆರ್ಟಿಸಿ ಗೌರವ ಸೂಚಿಸಲು ಹೋಗಿ ಎಡವಟ್ಟು ಮಾಡಿಕೊಂಡಿದೆ.
ಬಸ್ ಟಿಕೆಟ್ ಮೇಲೆ ಮಾತಾ ಮಂಜಮ್ಮ ಜೋಗತಿ ಹೆಸರು ಮುದ್ರಣ ಮಾಡಲಾಗಿದೆ. ಗೌರವ ಸಲ್ಲಿಸಲು ಹೋಗಿ ಸಾರಿಗೆ ಇಲಾಖೆ ತಪ್ಪು ಮುದ್ರಣ ಮಾಡಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜಯನಗರ ಜಿಲ್ಲೆಯ ತೃತೀಯ ಲಿಂಗಿ ಮಾತಾ ಮಂಜಮ್ಮ ಜೋಗತಿಯವರಿಗೆ ಸಾರಿಗೆ ಇಲಾಖೆಯಿಂದ… ಅಂತಾ ಸಾರಿಗೆ ಇಲಾಖೆ ಟಿಕೆಟ್ ಮೇಲೆ ಬರೆದಿದೆ. ಟಿಕೆಟ್ನಲ್ಲಿ ಗೌರವ ಅಥವಾ ಅಭಿನಂದನೆ ಅಂತಾ ಸೂಚಿಸದೇ, ವಾಕ್ಯ ಪೂರ್ಣಗೊಳಿಸದೇ ಅರ್ಧಕ್ಕೆ ಮೊಟಕುಗೊಳಿಸುವ ಮೂಲಕ ಸಾರಿಗೆ ಇಲಾಖೆ ಅಗೌರವ ಸೂಚಿಸಿದೆ.
ಇದೀಗ ಹೊಸಪೇಟೆಯಿಂದ ಸಂಡೂರು ಘಟಕಕ್ಕೆ ಹೋಗಬೇಕಾದರೆ ಪಡೆದಿರುವ ಟಿಕೆಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಾತಾ ಶ್ರೀ ಮಂಜಮ್ಮ ಜೋಗತಿಯವರಿಗೆ ಇತ್ತಿಚೀಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. (ದಿಗ್ವಿಜಯ ನ್ಯೂಸ್)
ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ
2 ಸಾವಿರ ಮುಟ್ಟಲ್ಲ 3 ಸಾವಿರನೇ ಬೇಕು ಅಂದಿದ್ದ ಲೇಡಿ ಪಿಡಿಒ ಮತ್ತೊಂದು ಕರಾಳ ಮುಖ ಬಯಲು
ಜನುಮದ ಜೋಡಿ ಚಿತ್ರಕ್ಕೆ ಇದೀಗ 25 ವರ್ಷ; 1996ರ ನ. 15ರಂದು ಬಿಡುಗಡೆ ಆಗಿತ್ತು..
ಫೈನಲ್ಗೆ ಮುನ್ನ ಬಲ ಪಕ್ಕದಲ್ಲಿ ನಿಂತ ನಾಯಕರಿಗೆ ಒಲಿಯುತ್ತೆ ಐಸಿಸಿ ಟ್ರೋಫಿ!