More

    ಇಂಥಾ ಸರ್ಕಾರ ಇದ್ದರೆಷ್ಟು-ಹೋದರೆಷ್ಟು?! ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಆಕ್ರೋಶ

    ಮೈಸೂರು: ಇಂಥಾ ಸರಕಾರ ಇದ್ದರೆಷ್ಟು-ಹೋದರೆಷ್ಟು? ಎಂದು ಹೇಳುವ ಮೂಲಕ ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಹರ್ಷವರ್ಧನ್​ ಕಿಡಿಕಾರಿದ್ದಾರೆ.

    ಪ್ರವೀಣ್ ಹತ್ಯೆ ಖಂಡಿಸಿ, ಮೈಸೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ಹರ್ಷವರ್ಧನ್, ಈ ವೇಳೆ ತಮ್ಮದೇ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದರು.

    ಯಾವುದೇ ಸರ್ಕಾರವಾಗಲಿ ಕಾನೂನು ಸುವ್ಯವಸ್ಥೆ ಕಾಪಾಡ ಬೇಕು. ಜನರ ಜೀವ ಉಳಿಸಲು ಕ್ರಮ ಕೈಗೊಳ್ಳಬೇಕು. ಅದು ಸಾಧ್ಯವಾಗದೆ ಇದ್ದರೆ, ಅಂತಹ ಸರಕಾರ ಇದ್ದರೆಷ್ಟು ಹೋದರೆಷ್ಟು. ಸರ್ಕಾರದ ರಚನೆಗೆ ನಮ್ಮ ಪಕ್ಷದ ಕಾರ್ಯಕರ್ತರ ಬೆವರು ಮತ್ತು ಶ್ರಮವಿದೆ. ಇದರ ಜೊತೆಗೆ ರಕ್ತ ಬೆರೆಸುವುದು ಬೇಡ. ಸಿಎಂ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

    ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರ ಕೂಡ ಕೇರಳದ ಗಡಿ ಭಾಗದಲ್ಲಿದೆ. ಈ ಕ್ಷೇತ್ರದ ಭಾಗಗಳಲ್ಲೂ ಇಂತಹ ಘಟನೆ ನಡೆಯಲ್ಲ ಎಂಬುದಕ್ಕೆ ಗ್ಯಾರಂಟಿ ಏನು. ಇಂತಹ ದುಷ್ಟ ಶಕ್ತಿಗಳನ್ನು ಸರ್ಕಾರ ಸಮರ್ಥವಾಗಿ ಮಟ್ಟಹಾಕ ಬೇಕು ಎಂದು ಮೈಸೂರಿನಲ್ಲಿ ಶಾಸಕ ಹರ್ಷವರ್ಧನ್ ಹೇಳಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಪುಷ್ಪ ಚಿತ್ರ ಮಾಡಿರುವ ಈ ಒಂದು ಎಡವಟ್ಟನ್ನು ಎತ್ತಿ ತೋರಿಸಿದ ರಾಮರಾವ್​ ಆನ್​ ಡ್ಯೂಟಿ ಸಿನಿಮಾ!

    ಮಾಜಿ ಸಚಿವ ಪಾರ್ಥ ಚಟರ್ಜಿ-ನಟಿ ಅರ್ಪಿತಾ ನಡುವೆ ಲೈಂಗಿಕ ಸಂಬಂಧ? ಸುಳಿವು ಕೊಟ್ಟ ಲೈಂಗಿಕ ಆಟಿಕೆಗಳು

    ರಾಜೀನಾಮೆಗೆ ಆಗ್ರಹಿಸಿ ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts