ಇರಿತ್ತಿ: ಚಲಿಸುವ ಬಸ್ ಮೇಲೆ ಕೋತಿಗಳು ತೆಂಗಿನಕಾಯಿ ಎಸೆದ ಪರಿಣಾಮ ಬಸ್ಸಿನ ವಿಂಡ್ಶೀಲ್ಡ್ ಅಥವಾ ಮುಂಭಾಗದ ಗಾಜು ಪುಡಿ ಪುಡಿಯಾಗಿದ್ದು, ಪ್ರಯಾಣಿಕರಿಬ್ಬರು ಗಾಯಗೊಂಡಿರುವ ವಿಚಿತ್ರ ಘಟನೆ ಕೇರಳದ ಇರಿತ್ತಿಯಲ್ಲಿ ನಡೆದಿದೆ.
ಸೆಂಟ್ ಜ್ಯೂಡ್ ಹೆಸರಿನ ಖಾಸಗಿ ಬಸ್ ಇರಿತ್ತಿ ಮತ್ತು ನೆರುಂಪೊಯಿಲ್ ನಡುವೆ ಸಂಚರಿಸುವಾಗ ಮಾರ್ಗ ಮಧ್ಯೆ ಮಂಗಗಳ ಗುಂಪು ದಾಳಿ ಮಾಡಿದೆ. ರಸ್ತೆ ಪಕ್ಕದ ತೆಂಗಿನಮರದ ಮೇಲೆ ಮಂಗಗಳು ಬೀಡು ಬಿಟ್ಟಿದ್ದ ವೇಳೆ ಬಸ್ ವೇಗವಾಗಿ ಚಲಿಸಿದೆ. ಇದರಿಂದ ಉದ್ರಿಕ್ತಗೊಂಡ ಮಂಗಗಳ ಗುಂಪು ಬಸ್ಸಿನತ್ತ ತೆಂಗಿನಕಾಯಿಗಳನ್ನು ತೂರಿದೆ. ಇದರಿಂದ ಬಸ್ಸಿನ ವಿಂಡ್ಶೀಲ್ಡ್ ಅಥವಾ ಮುಂಭಾಗದ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ.
ಇನ್ನು ಈ ಘಟನೆಯಿಂದ ಬಸ್ ಸೇವೆ ಸುಮಾರು ಅರ್ಧ ದಿನ ಸ್ಥಗಿತಗೊಂಡಿತು. ಬಸ್ ಮಾಲೀಕ ಜಾನ್ಸನ್ ವಿಂಡ್ಶೀಲ್ಡ್ ಬದಲಿಸಲು 17 ಸಾವಿರ ರೂ. ಖರ್ಚು ಮಾಡಿದ್ದಾರೆ. ಇತ್ತ ಮಂಗಗಳು ಮಾಡಿದ ಕೆಲಸದ ಹೊಣೆಯನ್ನು ಹೊರಲು ನಿರಾಕರಿಸಿರುವ ಅರಣ್ಯ ಇಲಾಖೆ ಬಸ್ ಮಾಲೀಕರಿಗೆ ಪರಿಹಾರ ನೀಡಲು ಶೂನ್ಯ ಅವಕಾಶವನ್ನು ಉಲ್ಲೇಖಿಸಿದ್ದಾರೆ.
ಮಂಗಗಳ ನಿರಂತರ ದಾಳಿಯಿಂದಾಗಿ, ಈ ಪ್ರದೇಶದ ಮೂಲಕ ಕೇವಲ ಒಂದು ಬಸ್ ಸೇವೆಯನ್ನು ಮಾತ್ರ ನಡೆಸಲಾಗುತ್ತದೆ. ಸ್ಥಳೀಯರು, ಪ್ರಯಾಣಿಕರು ಮತ್ತು ಪಾದಚಾರಿಗಳು ಸಹ ದಿನೇ ದಿನೇ ಕೋತಿಗಳ ದಾಳಿಯನ್ನು ಎದುರಿಸುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಪರಿಹರಿಸಲು ಇನ್ನೂ ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಂಡಿಲ್ಲ. ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ ಎಂಬುದ ಇಲ್ಲಿನ ಜನರ ಆಸಯವಾಗಿದೆ. (ಏಜೆನ್ಸೀಸ್)
ಮದುವೆಗೂ ಮುನ್ನವೇ ಒಪ್ಪಂದವೊಂದಕ್ಕೆ ಸಹಿ ಹಾಕಿ ತನ್ನ ಹಕ್ಕನ್ನು ಕಳೆದುಕೊಂಡರಾ ನಟಿ ಸಮಂತಾ?
ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!
ಹಿರಿಯರಿಗೆ ಸಂಧ್ಯಾಸುರಕ್ಷೆ; ಮಾಸಿಕ 200 ರೂ. ಪಿಂಚಣಿ ಹೆಚ್ಚಳಕ್ಕೆ ಸಂಪುಟ ಅಸ್ತು
ನಾಲ್ಕು ವರ್ಷದಿಂದ ಅಲೆದಾಟ ಸೌಲಭ್ಯಕ್ಕಾಗಿ ಪರದಾಟ; ಸಿಗದ ಬಿಪಿಎಲ್ ಕಾರ್ಡ್, ತಪ್ಪದ ಜನರ ಗೋಳು..