ಬೆಂಗಳೂರು: ಇತ್ತೀಚೆಗಷ್ಟೇ ಮುಗಿದ ಬಿಗ್ಬಾಸ್ ಸೀಸನ್ 8ರಲ್ಲಿ ಭಾರೀ ಸದ್ದು ಮಾಡಿದ ಎರಡು ಜೋಡಿ ಅಂದ್ರೆ ಒಂದು ಅರವಿಯಾ (ಅರವಿಂದ್ ಮತ್ತು ದಿವ್ಯಾ ಉರುಡುಗ) ಇನ್ನೊಂದು ಬಿಗ್ಬಾಸ್ ವಿನ್ನರ್ ಮಂಜು ಪಾವಗಡ-ದಿವ್ಯಾ ಸುರೇಶ್ ಜೋಡಿ. ಬಿಬಿಕೆ 8ರ ಆರಂಭದಿಂದಲೂ ಲ್ಯಾಗ್ ಮಂಜು ಮತ್ತು ದಿವ್ಯಾ ಸುರೇಶ್ ತುಂಬಾ ಕ್ಲೋಸ್ ಆದರು. ಎಷ್ಟರ ಮಟ್ಟಿಗೆ ಅಂದ್ರೆ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಬಿಗ್ ಮನೆಯಲ್ಲಿ ಮತ್ತು ಹೊರಗಡೆ ವೀಕ್ಷಕರ ನಡುವೆಯೂ ಭಾರಿ ಚರ್ಚೆಯಾಯಿತು.
ಒಬ್ಬರ ಬಗ್ಗೆ ಇನ್ನೊಬ್ಬರು ತುಂಬಾ ಒಳ್ಳೆಯ ಮಾತುಗಳನ್ನಾಡುವುದು ಸೇರಿ ಶೋ ಆರಂಭದಿಂದಲೂ ಕೊನೆಯವರೆಗೂ ಇಬ್ಬರು ಹೆಚ್ಚು ಸಮಯ ಒಟ್ಟಿಗೆ ಕಳೆದಿದ್ದಾರೆ. ಕರೊನಾ ಲಾಕ್ಡೌನ್ನಿಂದ ಬಿಗ್ಬಾಸ್ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದಾಗ ಮಂಜು, ದಿವ್ಯಾರಿಂದ ಸ್ವಲ್ಪ ಅಂತರ ಕಾಯ್ದುಕೊಂಡರು. ಈ ವೇಳೆ ದಿವ್ಯಾ ತುಂಬಾ ಭಾವುಕರಾಗಿದ್ದು ಉಂಟು. ನಂತರ ಇಬ್ಬರು ಮತ್ತೆ ಕ್ಲೋಸ್ ಆಗಿದ್ದು ಉಂಟು ಕೊನೆಯಲ್ಲಿ ದಿವ್ಯಾ ಸುರೇಶ್ ಲ್ಯಾಗ್ ಮಂಜುಗಾಗಿ ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜಿಸಿದ್ದು ಇಬ್ಬರ ನಡುವಿನ ಸಂಬಂಧಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿತ್ತು.
ಇನ್ನು ಬಿಬಿಕೆಯಿಂದ ದಿವ್ಯಾ ಸುರೇಶ್ ಎಲಿಮಿನೇಟ್ ಆಗಿ ಹೊರಬಂದಾಗಲೂ ಮಂಜು ಪರವೇ ಹೆಚ್ಚು ಮಾತನಾಡಿದರು. ಮಂಜುನೇ ಗೆಲ್ಲಬೇಕೆಂದು ಬಯಸಿದರು. ಅವರಿಗೆ ಮತ ಚಲಾಯಿಸುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡರು. ಕೊನೆಗೂ ಬಿಗ್ಬಾಸ್ನಲ್ಲಿ ಮಂಜು ವಿನ್ನರ್ ಎಂದು ಘೋಷಿಸಿದಾಗ ಮಂಜುಗಿಂತ ಹೆಚ್ಚು ಖುಷಿಯಾಗಿದ್ದೇ ದಿವ್ಯಾ. ಸಿಕ್ಕಾಪಟ್ಟೆ ಖುಷಿಯಾಗಿ ವೇದಿಕೆ ಮೇಲೆ ದಿವ್ಯಾ ಕುಣಿದು ಕುಪ್ಪಳಿಸಿದರು. ಇದನ್ನು ನೋಡಿದ ವೀಕ್ಷಕರು ದಿವ್ಯಾ ಮತ್ತು ಮಂಜು ನಡುವೆ ಲವ್ ಇದೆ ಎಂದಿದ್ದರು.
ಬಿಬಿಕೆ 8ನೇ ಆವೃತ್ತಿ ಮುಗಿದ ಬಳಿಕವೂ ದಿವ್ಯಾ ಮತ್ತು ಮಂಜು ಅನೇಕ ಸನ್ನಿವೇಶಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಜನರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಅಲ್ಲದೆ, ಪಾರ್ಕ್ ಒಂದರಲ್ಲಿ ಇಬ್ಬರು ಒಟ್ಟಿಗೆ ಮ್ಯೂಸಿಕ್ ಒಂದಕ್ಕೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ ವಿಡಿಯೋ ಕೂಡ ವೈರಲ್ ಆಗಿತ್ತು. ಇನ್ನು ಸಾಮಾಜಿಕ ಜಾಲತಾಣದಲ್ಲಂತೂ ಇಬ್ಬರ ಫೋಟೋಗಳು ಸದಾ ಹರಿದಾಡುತ್ತಲೇ ಇರುತ್ತದೆ. ಅಲ್ಲದೆ, ಮಂಜು-ದಿವ್ಯಾ ಹೆಸರಿನಲ್ಲಿ ಫ್ಯಾನ್ಸ್ ಪೇಜ್ ಸಹ ಕ್ರಿಯೆಟ್ ಆಗಿದ್ದು, ಬಿಗ್ಬಾಸ್ ಜೋಡಿಯ ಖ್ಯಾತಿಗೆ ಕನ್ನಡಿ ಹಿಡಿದಂತಾಗಿದೆ.
ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಸ್ಪರ್ಧಿಗಳು ಭಾಗವಹಿಸಿದ್ದರು. ಅಲ್ಲದೆ, ಸ್ಪರ್ಧಿಗಳ ಕುಟುಂಬದ ಸದಸ್ಯರು ಕೂಡ ಪಾಲ್ಗೊಂಡಿದ್ದರು. ದಿವ್ಯಾ ಅವರ ತಾಯಿ ಮತ್ತು ಸಹೋದರ ಜತೆಯಲ್ಲಿ ನಿಂತು ಮಂಜು ಪಾವಗಡ ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದರು. ಫೋಟೋವನ್ನು ದಿವ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಬಗ್ಗೆ ಬರೆದುಕೊಂಡಿರುವ ದಿವ್ಯಾ ಈ ಫ್ರೇಮ್ನಲ್ಲಿರುವ ಮೂರು ಜನ ನನ್ನ ಜೀವನದ ನಿಜವಾದ ಶಿಕ್ಷಕರು ಎಂದಿದ್ದರು. ನೀವು ಮೂವರು ನನಗೆ ತುಂಬಾ ಸ್ಫೂರ್ತಿ ನೀಡಿದ್ದೀರಿ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದೀರಿ ಎಂದು ಶಿಕ್ಷಕರ ದಿನದಂದು ಫೋಟೋಮ ಪೋಸ್ಟ್ ಮಾಡಿ ವಿಶ್ ಮಾಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ತಾಜಾ ಬೆಳವಣಿಗೆಯೆಂದರೆ ದಿವ್ಯಾ ಸುರೇಶ್ ಮನೆಯಲ್ಲೂ ಸಹ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ತುಂಬಾ ಅದ್ಧೂರಿಯಾಗಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲೂ ವಿಶೇಷ ಅತಿಥಿಯಾಗಿ ಮಂಜು ಪಾವಗಡ ದಿವ್ಯಾ ಸುರೇಶ್ ಮನೆಗೆ ಭೇಟಿ ನೀಡಿದ್ದರು. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಮಂಜು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಂಜು ಬಿಳಿ ಪಂಚೆ ಮತ್ತು ಶರ್ಟ್ಸ್ನಲ್ಲಿ ಮಧುಮಗನಂತೆ ಕಾಣುತ್ತಿರುವುದನ್ನು ನೋಡಿ ಇಬ್ಬರ ಅಭಿಮಾನಿಗಳು ನೀವಿಬ್ಬರೂ ಮದುವೆ ಆಗಿ ಎಂದು ಸಲಹೆ ನೀಡಿದ್ದಾರೆ. ಇಬ್ಬರ ಬಾಂದವ್ಯ ಚೆನ್ನಾಗಿದೆ. ಇದು ಹೀಗೆ ಕೊನೆಯವರೆಗೂ ಇರಲಿ ಎಂದಿದ್ದಾರೆ.
DSP ಜತೆ ಮಹಿಳಾ ಕಾನ್ಸ್ಟೇಬಲ್ ಅಶ್ಲೀಲತೆ, ಮಗನ ದುರ್ಬಳಕೆ: ವಿಡಿಯೋ ವೈರಲ್ ಬೆನ್ನಲ್ಲೇ ಇಬ್ಬರಿಗೂ ಶಾಕ್!
ಇಷ್ಟೊಂದು ಮಿಸ್ಟೇಕ್ ಮಾಡಿದ್ರಾ ನಟ ಸಾಯಿ ಧರಮ್ ತೇಜ್? ತನಿಖೆಯಲ್ಲಿ ಬೈಕ್ ಕುರಿತ ಸ್ಫೋಟಕ ಮಾಹಿತಿ ಬಯಲು!