ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ರೂಪಾಂತರಿ ಒಮಿಕ್ರಾನ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ (ಡಿ. 28) ಯಿಂದಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಮೊದಲ ದಿನವೇ ರಾಜ್ಯದ ಅಲ್ಲಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ, ಬಿಗಾಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕೂಡ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ದಿವ್ಯಾ ಸುರೇಶ್ ಸೀಸನ್ 8ರ ಬಿಗ್ಬಾಸ್ ಸ್ಪರ್ಧಿ. ನಿನ್ನೆ ರಾತ್ರಿ ಪೊಲೀಸರ ಜತೆ ಕಿರಿಕ್ ಮಾಡಿಕೊಂಡಿದ್ದಾರೆ. ನೈಟ್ ಕರ್ಫ್ಯೂ ಉಲ್ಲಂಘಿಸಿದ್ದಲ್ಲದೆ, ಕರ್ಫ್ಯೂ ಇದೆ ಮನೆಗೆ ಹೋಗಿ ಎಂದು ಬುದ್ಧಿವಾದ ಹೇಳಿದ ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಆವಾಜ್ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ.
ಇನ್ನೇನು ಕೆಲವೇ ದಿನಗಳಲ್ಲಿ 2022ರ ಹೊಸ ವರ್ಷ ಆರಂಭವಾಗಲಿದೆ. ಇತ್ತ ಒಮಿಕ್ರಾನ್ ಪ್ರಕರಣ ಸಂಖ್ಯೆ ಹೆಚ್ಚಾಗಿದ್ದು, ಹೊಸ ವರ್ಷಕ್ಕೆ ಹೆಚ್ಚಾಗಿ ಜನ ಸೇರುವುದರಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದರಿತು ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದೆ. ಹೀಗಾಗಿ ನಗರದ ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿದೆ. ಈ ವೇಳೆ ಪೊಲೀಸರಿಗೆ ಸಹಕಾರ ನೀಡದೆ ದಿವ್ಯಾ ಸುರೇಶ್ ಕಿರಿಕ್ ಮಾಡಿಕೊಂಡಿದ್ದಾರೆ.
ಕರ್ಫ್ಯೂ ಇದೆ ಮನೆಗೆ ಹೋಗಿ ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ದಿವ್ಯಾ ಸುರೇಶ್, ಸ್ಥಳದಲ್ಲೇ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ರಂಪಾಟ ಮಾಡಿದ್ದಾರೆ. ಈ ವೇಳೆ ಮಾಧ್ಯಮದವರು ವಿಡಿಯೋ ಶೂಟ್ ಮಾಡಲು ಮುಂದಾದಾಗ ಕ್ಯಾಮೆರಾವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೆ, ಕ್ಯಾಮೆರಾ ಒಡೆದು ಹಾಕುವುದಾಗಿಯೂ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಸ್ಥಳದಲ್ಲಿ ದಿವ್ಯಾರ ಬಾಯ್ಫ್ರೆಂಡ್ ಕೂಡ ಇದ್ದ. ನಾನು ಬಿಜೆಪಿ ಪಕ್ಷದವನು ಎಂದು ಹೇಳಿ ಪೊಲೀಸರಿಗೆ ಅವಾಜ್ ಹಾಕಿದ್ದಾನೆ.
ಸೇಲ್ಸ್ಮನ್ ಆಗಿದ್ದ ಪಿಯೂಷ್ ಜೈನ್ 300 ಕೋಟಿ ಒಡೆಯನಾಗಿದ್ಹೇಗೆ? ಇಲ್ಲಿದೆ ಯಾರಿಗೆ ಗೊತ್ತಿರದ ಸಂಗತಿ
ಧೋನಿಯಂತೆ ಕೊಹ್ಲಿ ಮೃಧುವಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ವಿರಾಟ್ ಕೊಂಡಾಡಿದ ಭಜ್ಜಿ
ಕೋವಿಡ್ನಿಂದ ತಬ್ಬಲಿಗಳಾದವರಿಗೆ ಖಿನ್ನತೆ; ರಾಜ್ಯ ಕೇಂದ್ರ ಸರ್ಕಾರಗಳ ನೆರವಿನ ಹೊರತಾಗಿಯೂ ಭಾವನಾತ್ಮಕ ಸಂಬಂಧಕ್ಕೆ ಹಂಬಲ