ಮಂಡ್ಯ: ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ದುರಂತ ಸಾವಿಗೀಡಾಗಿರುವ ಘಟನೆ ನಾಗಮಂಗಲ ತಾಲೂಕಿನ ಗುಡ್ಡೇನಹಳ್ಳಿ ಕ್ರಾಸ್ ಬಳಿ ಶನಿವಾರ (ಸೆ.4) ರಾತ್ರಿ ನಡೆದಿದೆ.
ಆನಂದ್ (62), ಆರಾಧ್ಯ (10) ಹಾಗೂ ಗೌರವ್ (5) ಮೃತ ದುರ್ದೈವಿಗಳು. ಅಪಘಾತದಲ್ಲಿ ಗಾಯಗೊಂಡಿರುವ ಮೋನಿಕಾ ಸ್ಥಿತಿ ತುಂಬಾ ಗಂಭೀರವಾಗಿದೆ. ಸ್ಕೂಟರ್ನಲ್ಲಿ ಸೊಸೆ ಮತ್ತು ಮೊಮ್ಮಕ್ಕಳನ್ನು ಮಾವ ಆನಂದ್ ಮನೆಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.
ಗುಡ್ಡೇನಹಳ್ಳಿಯಿಂದ ಹೊಣಕೆರೆಗೆ ಬರುವ ವೇಳೆ ಅಪಘಾತವಾಗಿದೆ. ಈ ವೇಳೆ ಆನಂದ್ ಮತ್ತು ಆರಾಧ್ಯ ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಗೌರವ್ ಕೊನೆಯುಸಿರೆಳೆದಿದ್ದಾನೆ. ಗಂಭೀರಗೊಂಡಿರುವ ಮೋನಿಕಾಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಕೌನ್ ಬನೇಗಾ ಕರೋಡ್ಪತಿಯಲ್ಲಿ 25 ಲಕ್ಷ ರೂಪಾಯಿ ಗೆದ್ದ ಗಂಗೂಲಿ-ಸೆಹ್ವಾಗ್
ಓವಲ್ ಟೆಸ್ಟ್ನಲ್ಲಿ ಹಲವು ದಾಖಲೆಗಳ ಒಡೆಯರಾದ ಹಿಟ್ಮ್ಯಾನ್ ರೋಹಿತ್ ಶರ್ಮ
ಭೂಮಿಯಲ್ಲಿ ಭಾರಿ ಸದ್ದು, ಅಲುಗಾಡಿದ ಬೃಹತ್ ಕಟ್ಟಡಗಳು, ಭಯದಿಂದ ಮನೆಯಿಂದ ಹೊರ ಬಂದ ಜನ, ಗುಮ್ಮಟನಗರಿಯಲ್ಲಿ ಭೂಕಂಪನ !