More

    ಕರ್ನಾಟಕ ವಿಧಾನಸಭೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ: ಮಾಜಿ ಸಿಎಂ ಬಿಎಸ್​ವೈಗೆ ಪ್ರದಾನ

    ಬೆಂಗಳೂರು: ಲೋಕಸಭೆ ಮಾದರಿಯಂತೆ ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಸ್ಪೀಕರ್​ ವಿಶ್ವೇಶರ ಹೆಗಡೆ ಕಾಗೇರಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಅತ್ಯುತ್ತಮ ಶಾಸಕರಾಗಿ ಆಯ್ಕೆ ಮಾಡಿದರು. ಲೋಕಸಭಾ ಸ್ಪೀಕರು ಬಿಎಸ್​ವೈಗೆ ಪ್ರಶಸ್ತಿ ಪ್ರದಾನ ಮಾಡಿದರು.

    ಪ್ರಶಸ್ತಿ ಬಗ್ಗೆ ಮಾತನಾಡಿದ ಸ್ಪೀಕರ್​ ಕಾಗೇರಿ ಅವರು ಈ ವರ್ಷದಿಂದ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡ್ತಿದ್ದೇವೆ. ಲೋಕಸಭೆಯ ಮಾದರಿಯಲ್ಲಿ ಅತ್ಯುತ್ತಮ ಮಾದರಿ ಶಾಸಕ ಪ್ರಶಸ್ತಿ ಕೊಡಿ ಎಂದು ಓಂ ಬಿರ್ಲಾ ಅವರು ಹೇಳಿದರು. ಅದರಂತೆ ಈ ವರ್ಷದಿಂದ ಪ್ರಶಸ್ತಿ ನೀಡುತ್ತಿದ್ದೇವೆ. ಇದು ಶಾಸಕರ ಜವಾಬ್ದಾರಿ ಹೆಚ್ಚಿಸುವ ಕೆಲಸವಾಗಿದೆ ಎಂದರು.

    ಯಡಿಯೂರಪ್ಪ ಅವರನ್ನ ಆಯ್ಕೆ ಮಾಡಿದ ಅವಕಾಶ ನನಗೆ ಸಿಕ್ಕಿದ್ದು ಅತ್ಯಂತ ಗೌರವದ ವಿಚಾರ ಎಂದು ಭಾವಿಸಿದ್ದೇನೆ. ರೈತ ಮುಖಂಡನಾಗಿ, ವಿಪಕ್ಷ ನಾಯಕರಾಗಿ ಮತ್ತು ಸಿಎಂ ಆಗಿ ಅತ್ಯಂತ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿಎಸ್​ವೈ ಅವರನ್ನು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಕಾಗೇರಿ ಅವರು ಆಯ್ಕೆ ಮಾಡಿದರು.

    ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರು ಯಡಿಯೂರಪ್ಪಗೆ ಬೆಳ್ಳಿ ಫಲಕ ನೀಡಿ ಗೌರವಿಸುವ ಮೂಲಕ ಪ್ರಶಸ್ತಿ ಪ್ರಧಾನ ಮಾಡಿದರು. ಇದೇ ವೇಳೆ ಯಡಿಯೂರಪ್ಪ ಅವರನ್ನ ಹೊಗಳಿದ ಓಂ ಬಿರ್ಲಾ, ರಾಜ್ಯದಲ್ಲಿ ನಾಲ್ಕು ಬಾರಿ ಸಿಎಂ ಆಗಿ ಆಳ್ವಿಕೆ ಮಾಡಿದ ಬಿಎಸ್​ವೈ ಸಂಸದೀಯ ಮೌಲ್ಯಗಳನ್ನ ಎತ್ತಿಹಿಡಿದಿದ್ದಾರೆ ಎಂದರು.

    ಕಾಂಗ್ರೆಸ್​ ಶಾಸಕರಿಂದ ಬಹಿಷ್ಕಾರ
    ಅತ್ಯುತ್ತಮ ಪ್ರಶಸ್ತಿ ಪ್ರದಾನ ಮತ್ತು ಜಂಟಿ ವಿಧಾನಸಭೆ ಉದ್ದೇಶಿಸಿ ಸ್ಪೀಕರ್​ ಓ ಬಿರ್ಲಾ ಅವರ ಭಾಷಣವನ್ನು ಕಾಂಗ್ರೆಸ್​ ಶಾಸಕರು ಬಹಿಷ್ಕರಿಸಿದರು. ಈ ಬಗ್ಗೆ ಕಾಗೇರಿ ಅವರು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕರು ಗೈರು ಹಾಜರಾಗಿರುವುದು ಬೇಸರ ತರಿಸಿದೆ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರು ಗೈರಾಗಿದ್ದು ಬೇಸರ ತರಿಸಿದೆ ಎಂದರು.

    ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಪ್ರಯಾಣವು ರೋಮಾಂಚಕ ಮತ್ತು ಸ್ಪೂರ್ತಿದಾಯಕವಾಗಿದೆ:​ ಓಂ ಬಿರ್ಲಾ

    ತಾತನಾದೆ ಎಂದು ಹೇಳಲು ಸಂತಸವಾಗ್ತಿದೆ: ನಮ್ಮ ಕಂದನಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಅಂದ್ರು HDK

    PHOTOS| ಹಗಲು-ರಾತ್ರಿ ಪ್ರಯಾಣ, 18 ಪಾರಂಪರಿಕ ತಾಣ, 33 ಸಾವಿರ ಕಿ.ಮೀ: ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts