More

    ಲೇಡಿ ಕಾನ್ಸ್​ಟೇಬಲ್​ ವಿರುದ್ಧವೇ ಹನಿಟ್ರ್ಯಾಪ್ ಆರೋಪ! ಸಂತ್ರಸ್ತ ಯುವಕನಿಂದ ಸುಂದರಿಯ ಕರಾಳ ಮುಖ ಬಯಲು

    ಹೈದರಾಬಾದ್​: ನಂಬಿಸಿ ಮದುವೆಯಾದ ಯುವಕ ವಂಚನೆ ಮಾಡಿದ್ದಾನೆಂದು ದೂರು ದಾಖಲಿಸಿರುವ ಹೈದರಬಾದ್​​ನ ಮಹಿಳಾ ಕಾನ್ಸ್​ಟೇಬಲ್​ ಪ್ರಕರಣವೀಗ ತಿರುವು ಪಡೆದುಕೊಂಡಿದ್ದು, ಇಡೀ ಪ್ರಕರಣದಲ್ಲಿ ಆಕೆಯೇ ಖಳನಾಯಕಿ ಎನ್ನಲಾಗಿದೆ.

    ಪ್ರೀತಿಯ ಹೆಸರಲ್ಲಿ ಹನಿಟ್ರ್ಯಾಪ್​ ಮಾಡಿ ಹಣ ಪೀಕಿರುವ ಆರೋಪ ಮಹಿಳಾ ಕಾನ್ಸ್​ಟೇಬಲ್​ ವಿರುದ್ಧವೇ ಕೇಳಿಬಂದಿದೆ. ಎಆರ್​ ಮುಖ್ಯಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಾನ್ಸ್​ಟೇಬಲ್​ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಂತ್ರಸ್ತರನ್ನು ಹೆದರಿಸುತ್ತಿದ್ದರು ಎಂದು ಹೇಳಲಾಗಿದೆ.

    ಆರೋಪಿ ಕಾನ್ಸ್​ಟೇಬಲ್​ನನ್ನು ಸಂಧ್ಯಾರಾಣಿ (28) ಎಂದು ಗುರುತಿಸಲಾಗಿದೆ. ಈ ಹಿಂದೆಯೇ ಈಕೆಗೆ ಮೂರು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದಾಳೆ. ಓರ್ವ ಪತಿ ಈಕೆಯ ಕಿರುಕುಳವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇದನ್ನೂ ಓದಿರಿ: ಬೀದಿ ನಾಯಿಗಳ ಬೊಗಳುವ ಶಬ್ದದಿಂದ ಉಳಿಯಿತು ಒಂದೇ ಕುಟುಂಬದ ಮೂವರ ಪ್ರಾಣ!

    ಇತ್ತೀಚೆಗೆ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದ ಚರಣ್​ತೇಜ ಎಂಬಾತನನ್ನು ಸಂಧ್ಯಾರಾಣಿ ತನ್ನ ಬಲೆಗೆ ಕೆಡವಿದ್ದಳು. ಬಳಿಕ ಆತನನ್ನು ಬಲವಂತವಾಗಿ ಒಪ್ಪಿಸಿ ಮದುವೆ ಸಹ ಆಗಿದ್ದಳು. ಮದುವೆ ಆಗದಿದ್ದರೆ, ಎಸ್​ಸಿ-ಎಸ್​ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದಳು.

    ಇದಾದ ಬಳಿಕ ಚರಣ್​ ಶಮ್ಶಾಬಾದ್​ ಡಿಸಿಪಿ ಮತ್ತು ಶಬಾದ್​ ಪೊಲೀಸ್​ ಠಾಣೆಗೆ ಈಮೇಲ್​ ಮೂಲಕ ದೂರು ನೀಡಿದ್ದನು. ಈ ಹಿಂದೆಯೇ ಮದುವೆ ಆಗಿದ್ದ ವಿಚಾರವನ್ನು ಮುಚ್ಚಿಟ್ಟು ಬೆದರಿಸಿ ಮದುವೆ ಆಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೆ, ಮದುವೆಯಾಗದ ಯುವಕರನ್ನು ಟಾರ್ಗೆಟ್​ ಮಾಡಿ ಪ್ರೀತಿಯ ಹೆಸರಲ್ಲಿ ಹನಿಟ್ರ್ಯಾಪ್​ ಮಾಡಿದ ಬಳಿಕ ಬೆದರಿಸಿ ಹಣ ಕಸಿಯುತ್ತಿದ್ದಳು ಎಂದು ದೂರಿದ್ದಾನೆ.

    ಈ ಹಿಂದೆಯು ಒಮ್ಮೆ ಸಂಧ್ಯಾರಾಣಿ ವಿರುದ್ಧ ಇದೇ ರೀತಿಯ ದೂರು ಸಹ ದಾಖಲಾಗಿದೆ. ಇನ್ನು ಸಂಧ್ಯಾಗೆ ಮನೆಯಿದ್ದರೂ ಪ್ರತ್ಯೇಕವಾಗಿ ಒಂದು ಕೊಠಡಿಯನ್ನು ಬಾಡಿಗೆ ಪಡೆದುಕೊಂಡಿದ್ದಳು. ಅಲ್ಲಿಯೇ ಸಂತ್ರಸ್ತರೊಂದಿಗೆ ಸಮಯ ಕಳೆಯುತ್ತಾ ತನ್ನ ಕಾರ್ಯ ಸಾಧಿಸುತ್ತಿದ್ದಳು ಎಂದು ತಿಳಿದುಬಂದಿದೆ.

    ಇದನ್ನೂ ಓದಿರಿ: ರಾಕೆಟ್​ ದಾಳಿಯಲ್ಲಿ ಮೃತಪಟ್ಟ ಕೇರಳದ ಸೌಮ್ಯ ಕುಟುಂಬಕ್ಕೆ ಕರೆ ಮಾಡಿ ಇಸ್ರೇಲ್​ ಅಧ್ಯಕ್ಷರು ಕೊಟ್ಟ ಮಾತಿದು..!

    ಇದೀಗ ಆಕೆಯಿಂದ ಮೋಸ ಹೋಗಿರುವ ಚರಣ್​, ದೂರು ನೀಡಿದ್ದು, ಆಕೆಯನ್ನು ಜವಬ್ದಾರಿಯುತ ಪೊಲೀಸ್​ ಕೆಲಸದಿಂದ ತೆಗೆಯುವಂತೆ ಒತ್ತಾಯಿಸಿದ್ದಾನೆ.

    ಭಾನುವಾರವಷ್ಟೇ ಜುಬಿಲಿಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದ ಸಂಧ್ಯಾರಾಣಿ, ನನಗೆ ಮದುವೆಯಾಗಿ 7 ವರ್ಷದ ಮಗಳಿರುವ ವಿಚಾರ ತಿಳಿದು, ಬಾಂಡ್​ ಪೇಪರ್​ ಸಹಿ ಹಾಕಿಯೇ ಚರಣ್​ ಮದುವೆ ಆಗಿದ್ದರು. ಜತೆಯಲ್ಲಿಯೇ ಇದ್ದ ಅವರು ನಾಲ್ಕು ದಿನಗಳಿಂದ ಮನೆಗೆ ಬಂದಿಲ್ಲ ಎಂದು ಆರೋಪಿಸಿದ್ದಳು. (ಏಜೆನ್ಸೀಸ್​)

    ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್​ಟೇಬಲ್​ಗೆ ಕಾದಿತ್ತು ಬಿಗ್​ ಶಾಕ್​!

    ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮಂಗಳಸೂತ್ರ ಕದ್ದು ಪುರೋಹಿತ ಪರಾರಿ! ಮುಂದಾಗಿದ್ದು ರೋಚಕ

    ಓಕೆ ಅನ್ನದಿದ್ರೆ ವಾಟ್ಸ್‌ಆ್ಯಪ್‌ ಬಂದ್‌: ಐಟಿ ಸಚಿವಾಲಯ ಕಿಡಿ- ಗೋಪ್ಯತೆ ನೀತಿ ಹಿಂಪಡೆಯಲು ನೋಟಿಸ್‌ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts