More

    ಮಾಡೆಲ್​ಗಳಿಬ್ಬರ ದುರ್ಮರಣ: ರಹಸ್ಯ ಮಾಹಿತಿ ಇರೋ ಸಿಸಿಟಿವಿ ಡಿವಿಆರ್​ನೊಂದಿಗೆ​ ಹೋಟೆಲ್​ ಮಾಲೀಕ ನಾಪತ್ತೆ

    ಕೊಚ್ಚಿ: ಕೇರಳದ ಇಬ್ಬರು ಮಾಡೆಲ್​ಗಳ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅಪಘಾತಕ್ಕೂ ಮುನ್ನ ಹೋಟೆಲ್​ನಲ್ಲಿ ನಡೆದಿದೆ ಎನ್ನಲಾದ ಡಿಜೆ ಪಾರ್ಟಿಗೆ ಸಂಬಂಧಿಸಿದ ಸಿಸಿಟಿವಿಯ ಡಿಜಿಟಲ್​ ವಿಡಿಯೋ ರೆಕಾರ್ಡರ್​ (ಡಿವಿಆರ್​) ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಡಿಜೆ ಪಾರ್ಟಿಯು ಪೋರ್ಟ್​ ಕೊಚ್ಚಿಯ ಹೋಟೆಲ್​ ನಂಬರ್​ 18 ಅಲ್ಲಿ ನಡೆದಿತ್ತು. ಪಾರ್ಟಿಯಲ್ಲಿ ಮಿಸ್​ ಕೇರಳ ವಿಜೇತರಾಗಿದ್ದ ಮಾಡೆಲ್​ಗಳಿಬ್ಬರು ಕೂಡ ಭಾಗವಹಿಸಿದ್ದರು. ಪಾರ್ಟಿಯ ನಂತರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ದುರಂತ ಸಾವಿಗೀಡಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹೋಟೆಲ್​ ಮೇಲೆ ದಾಳಿ ಮಾಡಿದಾಗ ಸಿಸಿಟಿವಿ ವಿಡಿಯೋ ಲಭ್ಯವಾಗಿರಲಿಲ್ಲ. ಸಿಸಿಟಿವಿ ದೃಶ್ಯಗಳಿರುವ ಡಿವಿಆರ್​ ಅನ್ನು ಹೋಟೆಲ್​ ಮಾಲೀಕರು ತೆಗೆದುಕೊಂಡು ಹೋಗಿದ್ದಾರೆಂಬ ಮಾಹಿತಿ ಪೊಲೀಸರಿಗೆ ದೊರೆತಿದೆ. ಹೋಟೆಲ್​ ಕೆಲಸಗಾರರ ವಿಚಾರಣೆ ವೇಳೆ ಇದು ಬಯಲಿಗೆ ಬಂದಿದೆ.

    ಇನ್ನು ಅಪಘಾತ ಸ್ಥಳದ ಬಳಿ ವಶಕ್ಕೆ ಪಡೆದಿರುವ ಸಿಸಿಟಿವಿ ಫುಟೇಜ್​ನಲ್ಲಿ ಮೃತ ಅನ್ಸಿ ಕಬೀರ್​ ಮತ್ತು ಅಂಜನಾ ಶಾಜನ್ ಸವಾರಿ ಮಾಡಿದ್ದ ಕಾರಿನ ಹಿಂದೆ ಮತ್ತೊಂದು ಕಾರು ಚೇಸ್​ ಮಾಡಿರುವುದು ಪೊಲೀಸರಿಗೆ ಗೊತ್ತಾಗಿದೆ. ಬಳಿಕ ಚೇಸ್​ ಮಾಡಿದ ಕಾರನ್ನು ಪತ್ತೆ ಹಚ್ಚಿ, ಅದರಲ್ಲಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅನ್ಸಿ ಮತ್ತು ಆಕೆಯ ಸ್ನೇಹಿತರು ತುಂಬಾ ಕುಡಿದಿದ್ದರು ಎಚ್ಚರಿಕೆ ನೀಡಲು ಅವರನ್ನು ಹಿಂಬಾಲಿಸಿದೆವು ಎಂದು ಹೇಳಿದ್ದಾರೆ. ಆದಾಗ್ಯೂ ಚೇಸ್​ ಮಾಡಿದವರು ಅದೇ ಪಾರ್ಟಿಯಲ್ಲಿ ಭಾಗವಹಿಸಿದ್ದರಾ? ಮತ್ತು ಅನ್ಸಿ ಮತ್ತು ಸ್ನೇಹಿತರ ನಡುವೆ ಏನಾದರೂ ಜಗಳ ನಡೆದಿದೆಯಾ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

    ಬಾರ್​ ಮತ್ತು ಇತರೆ ಏರಿಯಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ಆದರೆ, ಹೋಟೆಲ್​ ಮಾಲೀಕನ ಮೇಲೆ ಅನುಮಾನ ದಟ್ಟವಾಗಿದೆ. ಏಕೆಂದರೆ, ಡಿಜೆ ಪಾರ್ಟಿಯ ಸಿಸಿಟಿವಿ ಡಿವಿಆರ್​ ಅನ್ನು ಮಾಲೀಕ ಮುಚ್ಚಿಟ್ಟಿದ್ದಾನೆ. ಅದರಲ್ಲೂ ಪಾರ್ಟಿ ಹಾಲ್​ ಮತ್ತು ಪಾರ್ಕಿಂಗ್​ ಹಾಲ್​ ವಿಡಿಯೋ ತುಣಕಗಳೇ ಪ್ರಮುಖವಾಗಿ ಕಾಣೆಯಾಗಿವೆ. ಪಾರ್ಟಿ ಮುಗಿದ ತಕ್ಷಣವೇ ಅನ್ಸಿ ಮತ್ತು ಸ್ನೇಹಿತರು ಅಲ್ಲಿಂದ ಬೇಗ ಹೊರಟರು. ಇದುವರೆಗೂ ಎರಡು ಬಾರಿ ಹೋಟೆಲ್​ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ, ಈವರೆಗೂ ಡಿವಿಆರ್​ ಪತ್ತೆಯಾಗಿಲ್ಲ. ಹೀಗಾಗಿ ಪ್ರಕರಣದಲ್ಲಿ ಹೋಟೆಲ್​ ಮಾಲೀಕನ ಪಾತ್ರ ಇರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.


    ಪೋರ್ಟ್​ ಕೊಚ್ಚಿ ಪೊಲೀಸ್​ ಠಾಣೆ ಎದುರೇ ಹೋಟೆಲ್​ ಇದೆ. ಪಾರ್ಟಿ ಮುಗಿಸಿಕೊಂಡು ಅನ್ಸಿ ಕಬೀರ್​, ಅಂಜನಾ ಶಾಜನ್​, ಆಶಿಕ್​ ಮತ್ತು ಅಬ್ದುಲ್​ ರೆಹಮಾನ್ ಅಕ್ಟೋಬರ್​ 31ರಂದು​ ಮನೆಗೆ ಬರುತ್ತಿದ್ದರು. ಈ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಿಸ್​ ಕೇರಳ ವಿಜೇತರಾದ ಅನ್ಸಿ ಕಬೀರ್​ ಮತ್ತು ಅಂಜನಾ ಶಾಜನ್​ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಶಿಕ್​ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್​ ರೆಹಮಾನ್​ನನ್ನು ಮೊನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೀಗಾಗಿ ರೆಹಮಾನ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಜಗಮೆಚ್ಚಿದ ‘ಪುನೀತ್​’ಗೆ ಇದೆಂಥಾ ಅವಮಾನ? ಅಪ್ಪು ಫೋಟೋ ಮುಂದೆ ಹುಚ್ಚಾಟ ಮೆರೆದ ಚಿತ್ರತಂಡ!

    ತಾಯಿಗೆ ಪಂಗನಾಮ ಹಾಕಿದ ಮಗಳು: ಮಾಡಬಾರದ್ದನ್ನು ಮಾಡಿ ಎಸ್ಕೇಪ್​ ಆದವಳಿಗಾಗಿ ಪೊಲೀಸರ ಹುಡುಕಾಟ

    ಅದ್ಧೂರಿ ಜೀವನಶೈಲಿಯ ನಡುವೆಯು ಸರಳವಾಗಿ ಬದುಕಿದ ಪುನೀತ್​ ಕುರಿತು ನಿಮಗೆ ಗೊತ್ತಿರದ ಸಂಗತಿ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts