More

    ದುಡ್ಡು ಇಲ್ಲ, ಮನೆಯೂ ಸಿಗಲಿಲ್ಲ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ನಟ, ನಿರ್ದೇಶಕ ನಾಗಶೇಖರ್​

    ಬೆಂಗಳೂರು: ನಟ ಹಾಗೂ ಸ್ಟಾರ್​ ನಿರ್ದೇಶಕ ನಾಗಶೇಖರ್​ ಅವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, 50 ಲಕ್ಷ ರೂಪಾಯಿ ವಂಚನೆ ಆಗಿದೆ ಎಂದು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಆರ್.ಆರ್.ನಗರ ನಿವಾಸಿಗಳಾದ ಮೀನಾ ಹಾಗೂ ರಾಜ್​​ಕುಮಾರ್ ಎಂಬುವವರ ವಿರುದ್ದ ದೂರು ದಾಖಲಿಸಿದ್ದಾರೆ. ನಾಗಶೇಖರ್​ ಅವರು ಆರ್.ಆರ್.ನಗರದ ಜಯಣ್ಣ ಲೇಔಟ್​ನಲ್ಲಿ ಮನೆ ಖರೀದಿಸಲು ಮುಂದಾಗಿದ್ದರು. ಮೀನಾ ಎಂಬುವವರಿಂದ 2 ಕೋಟಿ 70 ಲಕ್ಷ ರೂ.ಗೆ ಮನೆ ಖರೀದಿಗೆ ಮಾತುಕತೆ ಆಗಿತ್ತು. ಕಳೆದ 2020ರ ಆಗಸ್ಟ್​ನಲ್ಲಿ ಮನೆ ಖರೀದಿ ಸಂಬಂಧ ಮೀನಾರ ಜೊತೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಅಗ್ರಿಮೆಂಟ್ ಆಗ್ತಿದ್ದಂತೆ ಹಂತ ಹಂತವಾಗಿ ಮೀನಾರ ಖಾತೆಗೆ ನಾಗಶೇಖರ್​ 50 ಲಕ್ಷ ರೂ. ವರ್ಗಾಯಿಸಿದ್ದರು.

    ಇದೀಗ ಸೇಲ್ ಅಗ್ರಿಮೆಂಟ್ ನಂತರವೂ ಮೀನಾ, ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿದ್ದು, ಅಗ್ರಿಮೆಂಟ್​ ನಂತರ ಪಾವತಿ ಮಾಡಿದ್ದ ಮುಂಗಡ ಹಣವನ್ನು ಹಿಂದಿರುಗಿಸುತ್ತಿಲ್ಲ ಎಂದು ನಾಗಶೇಖರ್​ ಆರೋಪ ಮಾಡಿದ್ದಾರೆ. ಈ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 420 ಸೆಕ್ಷನ್​ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

    ಇತ್ತ ಎಫ್.ಐ.ಆರ್ ದಾಖಲು ಆಗ್ತಿದ್ದಂತೆ ಮೀನಾ ಮತ್ತು ರಾಜ್​ಕುಮಾರ್​ ಎಂಬುವರು ನಾಪತ್ತೆಯಾಗಿದ್ದಾರೆ. ಇತ್ತ ದುಡ್ಡು ಇಲ್ಲದೇ, ಮನೆಯೂ ಸಿಗದೇ ರಾಜಶೇಖರ್​ ಕಂಗಾಲಾಗಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ನಾಗಶೇಖರ್​ ಅವರು ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಚಿತ್ರಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಅರಮನೆ, ಚೇತನ್ ನಟನೆಯ ಮೈನಾ, ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ ಸಂಜು ವೆಡ್ಸ್ ಗೀತಾ, ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ, ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸಿನಿಮಾ ನಿರ್ದೇಶನ ಮಾಡಿರು ನಾಗಶೇಖರ್, ವೀರಕನ್ನಡಿಗ ಹಾಗೂ ರಂಗ ಎಸ್​ಎಸ್​ಎಲ್​ಸಿ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕೇರಳಕ್ಕೆ ಕಾಫಿ ವರ, ಗಡಿ ಶಾಲೆಗೆ ಬರ!; ಗುಂಡ್ಲುಪೇಟೆಯಲ್ಲಿ ಹೆಚ್ಚಿದ ಗುಳೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ

    ಇಂದು ಜನ್ಮದಿನ; ಪಕ್ಷದ ಎಲ್ಲೆ ಮೀರಿದ ಮುತ್ಸದ್ದಿ ವಾಜಪೇಯಿ…

    ಕೆವೈಸಿ ಮಾಡದಿದ್ದರೆ ಖಾತೆ ಬಂದ್! ಹೊಸ ವರ್ಷಕ್ಕೆ ಆರ್​ಬಿಐ ಹೊಸ ನಿಯಮ ಗ್ರಾಹಕರು ಅಗತ್ಯ ದಾಖಲೆ ನೀಡುವುದು ಕಡ್ಡಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts