ಚೆನ್ನೈ: ಕಿರುತೆರೆ ನಟಿ ದಿವ್ಯಾ ಶ್ರೀಧರ್ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾಗೂ ಖ್ಯಾತ ಕಿರುತೆರೆ ನಟ ಅರ್ನವ್ನನ್ನು ಕೆಲ ದಿನಗಳ ಹಿಂದೆ ತಮಿಳುನಾಡು ಪೊಲೀಸರು ಶೂಟಿಂಗ್ ಸ್ಥಳದಲ್ಲೇ ಬಂದಿದ್ದಾರೆ.
ಗಂಡನಿಗೆ ಬೇರೆ ನಟಿಯರ ಜೊತೆ ವಿವಾಹೇತರ ಸಂಬಂಧವಿದೆ ಮತ್ತು ನನಗೆ ಸಾಕಷ್ಟು ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾನೆ ಎಂದು ಗರ್ಭಿಣಿ ಪತ್ನಿ ದಿವ್ಯಾ ಶ್ರೀಧರ್ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿ ಅರ್ನವ್ನನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಅರ್ನವ್ನನ್ನು ಪುಳಲ್ ಜೈಲಿನಲ್ಲಿ ಇರಿಸಲಾಗಿದೆ. ದಿವ್ಯಾ, ಆಕೆಯ ಬಾಯ್ಫ್ರೆಂಡ್ ಜೊತೆ ಸೇರಿ ನನ್ನ ಮಗುವನ್ನು ಗರ್ಭಪಾತ ಮಾಡಿಸಲು ಪ್ಲಾನ್ ಮಾಡಿದ್ದಾರೆ ಎಂದು ದಿವ್ಯಾ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ. ಆದರೆ, ದಿವ್ಯಾ ಬಿಡುಗಡೆ ಮಾಡಿದ ಆಡಿಯೋವು ಅರ್ನವ್ ಅಪರಾಧಿ ಎಂಬುದನ್ನು ಸಾಬೀತು ಮಾಡಿದೆ.
ಇದೀಗ ಅರ್ನವ್ನ ಮತ್ತೊಂದು ವಂಚನೆ ಬಯಲಾಗಿದೆ. ಮಲೇಷಿಯಾ ಮೂಲದ ತೃತೀಯಲಿಂಗಿ ಒಬ್ಬರು ದಿವ್ಯಾಳ ವಕೀಲರಿಗೆ ಆಡಿಯೋ ಫೈಲ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. 10 ವರ್ಷಗಳ ಹಿಂದೆ ಅರ್ನವ್ ನನ್ನನ್ನು ಮದುವೆ ಆಗಿದ್ದರು. ಆದರೆ, ಬೇರೆ ಹುಡುಗಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಮೂಲಕ ನನಗೆ ಮೋಸ ಮಾಡಿದರು ಎಂದು ತಾನು ಕಳುಹಿಸಿಕೊಟ್ಟಿರುವ ಆಡಿಯೋದಲ್ಲಿ ತೃತೀಯಲಿಂಗಿ ಆರೋಪಿಸಿದ್ದಾರೆ. ಅಲ್ಲದೆ, ಇದಕ್ಕೆ ಸಾಕ್ಷಿಯಾಗಿ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅರ್ನವ್ ಜೊತೆ ಮದುವೆಯಾಗಿದ್ದ ತೃತೀಯಲಿಂಗಿ, ನನ್ನ ಮೇಲೆ ಮಾಲ್ನಲ್ಲಿ ಅರ್ನವ್ ಹಲ್ಲೆ ನಡೆಸಿದ್ದ ಮತ್ತು ದಿವ್ಯಾ ಆತನ ವಿರುದ್ಧ ಮಾಡಿದ ಎಲ್ಲಾ ಆರೋಪಗಳು ಸಹ ಸತ್ಯ ಎಂದು ಹೇಳಿದ್ದಾರೆ.ನ ಇದೀಗ ದಿವ್ಯಾ ಮತ್ತು ಅರ್ನವ್ ವಿವಾದಕ್ಕೆ ಈ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕಿರುತೆರೆ ಉದ್ಯಮವನ್ನು ಮತ್ತಷ್ಟು ದಂಗುಬಡಿಸಿದೆ.
ದಿವ್ಯಾ ಮಾಡಿರುವ ಆರೋಪವೇನು?
ಕನ್ನಡದ ಆಕಾಶ ದೀಪ ಧಾರಾವಾಹಿ ಮೂಲಕ ದಿವ್ಯಾ ಶ್ರೀಧರ್ ಮನೆ ಮಾತಾಗಿದ್ದಾರೆ. ತಮಿಳು ಧಾರಾವಾಹಿ ಮಾಡುವಾಗ ನಟ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದ ದಿವ್ಯಾ, ವೈವಾಹಿಕ ಜೀವನ ಸಹ ಆರಂಭಿಸಿದರು. ಇದೀಗ ಪತಿ ಆರ್ನವ್ ವಿರುದ್ಧ ಸಾಲು ಆರೋಪ ಮಾಡಿದ್ದಾರೆ. ತನ್ನ ಗಂಡನಿಗೆ ಅನೈತಿಕ ಸಂಬಂಧವಿದೆ. ಹೀಗಾಗಿ ನನ್ನನ್ನು ದೂರ ಇಟ್ಟಿದ್ದಾರೆ ಎಂದು ಮಾಧ್ಯಮಗಳ ಮುಂದೆ ಅಳಲು ತೊಡಿಕೊಂಡಿದ್ದಾರೆ.
‘2017ರಲ್ಲಿ ನಾವಿಬ್ಬರೂ ಒಂದೇ ಸೀರಿಯಲ್ನಲ್ಲಿ ಆ್ಯಕ್ಟಿಂಗ್ ಮಾಡ್ತಿದ್ವಿ. ಆಗ ನಾವಿಬ್ಬರೂ ಫ್ರೆಂಡ್ಸ್ ಆದ್ವಿ. ಆಮೇಲೆ ಪ್ರೀತಿಸಿ ಮದ್ವೆ ಆದ್ವಿ. 2 ವರ್ಷದ ಹಿಂದೆ ಒಂದು ಮನೆ ಖರೀದಿಸಿದೆವು. ಮನೆ ತೆಗೆದುಕೊಳ್ಳುವಾಗ ನಾನು ಅವನಿಗೆ ಹಣದ ಸಹಾಯ ಮಾಡಿದ್ದೇನೆ. ಕರೊನಾ ಲಾಕ್ಡೌನ್ ವೇಳೆ ಅವನು 2 ವರ್ಷ ಮನೆಯಲ್ಲೇ ಇದ್ದ. ಆಗ ಅವನಿಗೆ ಏನು ಬೇಕೋ ಎಲ್ಲವನ್ನೂ ತಂದು ಕೊಟ್ಟೆ. ಏನೂ ಕಷ್ಟ ಬಾರದಂತೆ ಚೆನ್ನಾಗಿ ನೋಡಿಕೊಂಡೆ. ಕೆಲಸ ಇಲ್ಲ ಅನ್ನೋ ನೋವು ಕಾಡದಂತೆ ನನ್ನ ಗಂಡನನ್ನು ಮಗು ಥರ ನೋಡಿಕೊಂಡೆ. ನಾನು ಅವನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಇದೀಗ ನನ್ನ ಪತಿ ನನ್ನನ್ನು ದೂರ ಇಟ್ಟಿದ್ದಾನೆ. ನನಗೆ ಅವನು ಬೇಕು. ನನ್ನ ಗಂಡ ನನ್ನನ್ನು ದೂರ ಮಾಡಿದ್ರೂ ನನಗೆ ಅವನೇ ಬೇಕು. ನನ್ನ ಹಾಗೂ ನನ್ನ ಮಗುವಿಗಾಗಿ ನೀವೆಲ್ಲರೂ ಪ್ರಾರ್ಥಿಸಿ’ ಎಂದು ನಟಿ ದಿವ್ಯಾ ಕಣ್ಣೀರಿಟ್ಟಿದ್ದಾರೆ.
ಮಗು ಮಾಡಿಕೊಳ್ಳುವ ವಿಚಾರಕ್ಕೆ ನಮ್ಮಿಬ್ಬರ ಮಧ್ಯೆ ಜಗಳ ಆರಂಭವಾಯಿತು. ನನಗೆ ಮಗು ಬೇಕು. ಆದರೆ, ನನ್ನ ಗಂಡ ಗರ್ಭಪಾತ ಮಾಡಿಸಿ ಕೊಳ್ಳಲು ಒತ್ತಾಯ ಮಾಡಿದ್ದಾರೆ ಎಂದು ದಿವ್ಯಾ ದೂರು ನೀಡಿದ್ದಾರೆ. ದಿವ್ಯಾರನ್ನು ಪರಿಚಯ ಮಾಡಿಕೊಳ್ಳುವಾಗ ತನ್ನ ಹೆಸರು ಅರ್ನವ್ ಎಂದು ಹೇಳಿಕೊಂಡಿದ್ದನಂತೆ. ಅಸಲಿ ಹೆಸರು ಅಮ್ಜದ್ ಖಾನ್. ಆದರೂ ಹೆಸರನ್ನು ಏಕೆ ಮುಚ್ಚಿಟ್ಟರು ಎಂಬ ಪ್ರಶ್ನೆ ಮೂಡಿದ್ದು, ಇದು ಲವ್ ಜಿಹಾದ್ ಇರಬಹುದಾ ಎಂಬ ಅನುಮಾನ ಹುಟ್ಟುಹಾಕಿದೆ. (ದಿಗ್ವಿಜಯ ನ್ಯೂಸ್)
ದಿವ್ಯಾ ಶ್ರೀಧರ್ ಮೇಲೆ ಗಂಡನಿಂದ ಹಲ್ಲೆ ಪ್ರಕರಣ: ನಟಿಯ ಬೆನ್ನಿಗೆ ನಿಂತ ಕರ್ನಾಟಕ ಮಹಿಳಾ ಆಯೋಗ
VIDEO| ಲೋಕಲ್ ಟ್ರೈನ್ನಲ್ಲಿ ಜುಟ್ಟು ಹಿಡಿದು ಕಿತ್ತಾಡಿಕೊಂಡ ಮಹಿಳೆಯರು: ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದಿಷ್ಟು…
ಬದಲಾಗದಿದ್ರೆ ಬದಲಿಸ್ತೀವಿ!; ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಖಡಕ್ ಎಚ್ಚರಿಕೆ