ಚಿತ್ತೂರು: ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರಿ ಯೋಜನೆ ಹೆಸರಲ್ಲಿ ಕೆವೈಸಿ, ಬ್ಯಾಂಕ್ ಖಾತೆ ಮತ್ತು ಎಟಿಎಂ ವಿವರಗಳನ್ನು ಪಡೆಯುವ ಮೂಲಕ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸೈಬರ್ ಖದೀಮರು ಎಗರಿಸುತ್ತಿದ್ದಾರೆ. ಸೈಬರ್ ಖದೀಮರ ಮಾತಿಗೆ ಮರುಳಾಗಿ ಸ್ವಲ್ಪವೂ ಯೋಚಿಸಿದೇ ಜನರು ವಿವರಗಳನೆಲ್ಲ ನೀಡಿ ಮೋಸ ಹೋಗುತ್ತಿರುವ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ.
ಇತ್ತೀಚೆಗೆ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಒಂದು ನಡೆದಿದ್ದು, ಸೈಬರ್ ಠಾಣೆಗೆ ದೂರು ಸಹ ದಾಖಲಾಗಿದೆ. ಪೆದ್ದಪಂಜನಿ ವಲಯದ ನಾಗಿರೆಡ್ಡಿಪಲ್ಲಿ ಪಂಚಾಯಿತಿಯ ಚಲವರಿಪಲ್ಲಿ ಗ್ರಾಮದ ನಿವಾಸಿ ಮಂಜುಳ ರಾಯಲಪೇಟೆಯ ಇಂಡಿಯನ್ ಬ್ಯಾಂಕ್ನಲ್ಲಿ ಸೇವಿಂಗ್ಸ್ ಖಾತೆ ಹೊಂದಿದ್ದಾರೆ.
ಸಂತ್ರಸ್ತೆಯ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಗಂಡನ ಮೊಬೈಲ್ ನಂಬರ್ಗೆ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ನಾನು ಬ್ಯಾಂಕ್ ಮ್ಯಾನೇಜರ್ ಮಾತನಾಡುತ್ತಿದ್ದೇನೆ. ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಗಿದಿದೆ. ಹೀಗಾಗಿ ಆಧಾರ್ ನಂಬರ್ ಮತ್ತು ಅಕೌಂಟ್ ನಂಬರ್ ಅಪ್ಡೇಟ್ ಮಾಡಬೇಕಿದೆ ಎಂದು ಕೇಳಿದ್ದಾನೆ.
ಹಿಂದೆ-ಮುಂದೆ ಯೋಚಿಸದೇ ಕೇಳಿದ ವಿವರವನ್ನೆಲ್ಲ ಸಂತ್ರಸ್ತೆ ನೀಡಿದ್ದಾಳೆ. ಇದಾದ ಬಳಿಕ ಮತ್ತೆ ಕರೆ ಮಾಡಿ ಒಟಿಪಿ ನಂಬರ್ ಹೇಳುವಂತೆ ಕೇಳಿದ್ದಾನೆ. ಸರಿ ಓಕೆ ಅಂತಾ ಅದನ್ನು ಕೂಡ ಸಂತ್ರಸ್ತೆ ಹೇಳಿದ್ದಾಳೆ. ಇದಾದ ಕೆಲವೇ ಕ್ಷಣದಲ್ಲಿ ಆಕೆಯ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮ 74,571 ರೂಪಾಯಿ ಹಣವನ್ನು ಎಗರಿಸಿದ್ದಾನೆ. ಇದಾದ ನಂತರ ಸಂತ್ರಸ್ತೆಯ ಮೊಬೈಲ್ ಹಣ ಕಡಿತವಾಗಿರುವ ಸಂದೇಶ ಹೋಗಿದೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಸೈಬರ್ ಖದೀಮನಿಂದ ವಂಚನೆ ಆಗಿರುವುದು ಗೊತ್ತಾಗಿದೆ.
ಇದೀಗ ಸೈಬರ್ ಠಾಣೆಯ ಮೆಟ್ಟಿಲೇರಿರುವ ಮಹಿಳೆ ಪೆದ್ದಪಂಜನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊಬೈಲ್ ನಂಬರ್ ಆಧಾರದ ಮೇಲೆ ಸೈಬರ್ ಕ್ರಿಮಿನಲ್ ಜಾಡನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. (ಏಜೆನ್ಸೀಸ್)
ಈ ಫೋಟೋ ನಕಲಿ! ಕೆಟ್ಟದಾಗಿ ತಿರುಚಿದ ಫೋಟೋ ವಿರುದ್ಧ ಗುಡುಗಿದ ನಟಿ ಮಾಳವಿಕ ಮೋಹನನ್
U19 World Cup: ಯಶ್ ಧುಲ್-ಶೇಕ್ ರಶೀದ್ ಬ್ಯಾಟಿಂಗ್ ಅಬ್ಬರಕ್ಕೆ ಆಸಿಸ್ ಧೂಳೀಪಟ: ಫೈನಲ್ಗೆ ಲಗ್ಗೆಯಿಟ್ಟ ಭಾರತ
ಪಬ್ಜಿಗೆ ದಾಸನಾಗಿ ಕುಟುಂಬವನ್ನೆ ಕೊಂದ ಬಾಲಕನ ಮಾತು ಕೇಳಿ ಪಾಕ್ ಪೊಲೀಸರೇ ಶಾಕ್! PUBG ಬ್ಯಾನ್ಗೆ ಆಗ್ರಹ