More

    ಕಾಬುಲ್​ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ವಿಜಯೋತ್ಸವ: ಮಕ್ಕಳು ಸೇರಿ 17 ಸಾವು

    ಕಾಬುಲ್​: ಖುಷಿಯಾಗಲಿ ಅಥವಾ ದುಃಖವಾಗಲಿ ತಾಲಿಬಾನಿಗಳು ಅದನ್ನು ಬಂದೂಕಿನ ಮೂಲಕವೇ ವ್ಯಕ್ತಪಡಿಸುವುದನ್ನು ನೋಡಿದ್ರೆ ಆಫ್ಘಾನ್​ ಜನರ ಮುಂದಿನ ಭವಿಷ್ಯ ಚಿಂತಾಜನಕವಾಗಿರುವಂತೆ ಗೋಚರಿಸುತ್ತಿದೆ.

    ಹೌದು, ತಾಲಿಬಾನಿಗಳ ವಿಜಯೋತ್ಸವಕ್ಕೆ 17 ಮಂದಿ ಬಲಿಯಾಗಿದ್ದು, 41 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಬುಲ್​ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಕಾಬುಲ್​ ಸುತ್ತ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.

    ನಿನ್ನೆ ಭಾರೀ ಪ್ರಮಾಣದಲ್ಲಿ ಗನ್​ ಸೌಂಡ್​ ಕಾಬುಲ್​ ಸುತ್ತಲೂ ಕೇಳಿಬಂದಿತು. ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧದ ಪಡೆ (NRFA) ಯನ್ನು ಸೋಲಿಸುವ ಮೂಲಕ ಪಂಜ್​ಶೀರ್​ ಪ್ರಾಂತ್ಯವನ್ನು ತೆಕ್ಕೆಗೆ ಹಾಕೊಂಡಿದ್ದೇವೆ. ಈ ಮೂಲಕ ಇಡೀ ಆಫ್ಘಾನಿಸ್ತಾನ ಇದೀಗ ನಮ್ಮ ಕೈವಶವಾಗಿದೆ ಎಂದು ತಾಲಿಬಾನ್​ ಘೋಷಣೆ ಮಾಡಿಕೊಂಡಿರು. ಇದರ ಬೆನ್ನಲ್ಲೇ ಕಾಬುಲ್​ ಸುತ್ತಲೂ ವಿಜಯೋತ್ಸವ ಆಚರಿಸಿದ ತಾಲಿಬಾನ್​ ಗಾಳಿಯಲ್ಲಿ ಗುಂಡಿನ ಸುರಿಮಳೆಗೈದಿತು.

    ಆದರೆ, ವಿಜಯೋತ್ಸವದಲ್ಲಿ ಮಕ್ಕಳು ಸೇರಿದಂತೆ 17 ಮಂದಿ ಮೃತಪಟ್ಟರೆ, 40 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪಂಜ್​ಶೀರ್​ ವಶಕ್ಕೆ ಪಡೆದುಕೊಂಡಿರುವುದಾಗಿ ತಾಲಿಬಾನ್​ ಹೇಳಿದ್ರೆ, ಪ್ರತಿರೋಧ ಪಡೆಯ ನಾಯಕ ಅಹ್ಮದ್​ ಮಸೌದ್ ಅದು ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿದ್ದಾರೆ. ಪಂಜ್​ಶೀರ್​ ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿ ಪಾಕಿಸ್ತಾನ ಮಾಧ್ಯಮಗಳಲ್ಲೂ ಸಹ ಹರಿದಾಡಿದೆ. ಇದು ಸುಳ್ಳು. ಪಂಜಶೀರ್ ಅನ್ನು ವಶಪಡಿಸಿಕೊಂಡರೇ ಅಂದೇ ನನ್ನ ಕೊನೆಯ ದಿನವಾಗಿರುತ್ತದೆ ಎಂದು ಮಸೌದ್ ಹೇಳಿದ್ದಾರೆ.

    ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಪುತ್ರ ಎಬಾದುಲ್ಲಾ ಸಲೇಹ್ ಕೂಡ ತಾಲಿಬಾನ್​ ವಾದವನ್ನು ತಳ್ಳಿಹಾಕಿದ್ದು, ಪಂಜ್​ಶೀರ್​ ನಮ್ಮ ಹಿಡಿತದಲ್ಲೇ ಇದೆ ಎಂದಿದ್ದಾರೆ. ಪಂಜ್​ಶೀರ್​ನ ಪ್ರತಿರೋಧ ಪಡೆಗಳ ನಾಯಕರಲ್ಲಿ ಒಬ್ಬರು. ತಾಲಿಬಾನಿಗಳು ಹೇಳಿದಂತೆ ನಾನು ಪಂಜ್​ಶೀರ್​ ಬಿಟ್ಟು ಓಡಿ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಸಂಧಾನದ ಮಾತುಕತೆ ವಿಫಲವಾದ ಬಳಿಕ ಪಂಜ್​ಶೀರ್​ ಮೇಲೆ ತಾಲಿಬಾನ್​ ನಿರಂತರವಾಗಿ ದಾಳಿ ಮಾಡುತ್ತಿದ್ದು, ಮುಂದೆ ಏನಾಗಲಿದೆಯೋ ಅಂತಾ ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಒಳಉಡುಪಿನ ಬಗ್ಗೆ ಪ್ರಶ್ನಿಸಿದ ನೆಟ್ಟಿಗನಿಗೆ ನಟಿ ಅನಿಕಾ ಸುರೇಂದ್ರನ್​ ಕೊಟ್ಟ ಉತ್ತರ ಹೀಗಿದೆ…

    ಹಾಸ್ಟೆಲ್​ ರಹಸ್ಯ ಮುಚ್ಚಿಕೊಳ್ಳಲು ಯುವತಿಯ ನಾಟಕ: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಕೇಸ್​ಗೆ ಟ್ವಿಸ್ಟ್!

    ಅನುಮಾನ ಬಂದ ಕೂಡಲೇ ಸಬ್​ ಇನ್ಸ್​ಪೆಕ್ಟರ್​ನನ್ನು ತಡೆದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts