ವಿಜಯವಾಡ: ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರು ಸ್ನಾನ ಮಾಡುವುದನ್ನು ಗೊತ್ತಿಲ್ಲದಂತೆ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ ಮತ್ತು ಸಮುದಾಯವೊಂದರ ನಾಯಕನನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ಅಪ್ರಾಪ್ತನೊಬ್ಬನನ್ನು ಸಹ ಬಾಲಾಪರಾಧಿ ನ್ಯಾಯಮಂಡಳಿಯ ವಶಕ್ಕೆ ಒಪ್ಪಿಸಲಾಗಿದೆ.
ಪೆದ್ದಪುರಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಕನಕರಾವ್, ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಸೂರ್ಯನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ್ದ. ಈ ವೇಳೆ ದೇವಸ್ಥಾನದ ಪುರೋಹಿತ ಸಂಬಂಧಿ ಅಪ್ರಾಪ್ತನ ಬಾಲಕನಿಗೆ ಹಣದ ಆಮಿಷವೊಡ್ಡಿದ ಕನಕರಾವ್, ಮಹಿಳೆಯರು ಸ್ನಾನ ಮಾಡುವುದನ್ನು ಫೋಟೋ ಮತ್ತು ವಿಡಿಯೋ ಮಾಡಿ ವಾಟ್ಸ್ಆ್ಯಪ್ ಮೂಲಕ ಕಳುಹಿಸಿಕೊಡಲು ಹೇಳಿದ್ದ.
ಕನಕರಾವ್ ಹೇಳಿದಂತೆ ಬಾಲಕ ಫೋಟೋ ಮತ್ತು ವಿಡಿಯೋ ರೆಕಾರ್ಟ್ ಮಾಡಿ ಕಳುಹಿಸುತ್ತಿದ್ದ. ಬಳಿಕ ಕನಕರಾವ್ ಅವುಗಳನ್ನು ಪೆದ್ದಪುರಂನ ಸಮುದಾಯದ ನಾಯಕ ರೊಕ್ಕಮ್ ಶ್ಯಾಮ್ ದಯಾಕರ್ಗೆ ಕಳೆಹಿಸುತ್ತಿದ್ದ. ಬಳಿಕ ಇಬ್ಬರು ಸೇರಿ ದೇವಸ್ಥಾನ ಆಡಳಿತ ಮಂಡಳಿಯ ಕುಟುಂಬಕ್ಕೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. 5 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ, ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿ ದೇವಸ್ಥಾನದ ಗೌರವ ಹಾಳು ಮಾಡುವುದಾಗಿ ಹೆದರಿಸಿದ್ದರು.
ಇದಾದ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ತೆರಳಿ ಕೇಸು ದಾಖಲಿಸಿದ ಬಳಿಕ ಹೆಡ್ ಕಾನ್ಸ್ಟೇಬಲ್ ಕನಕರಾವ್ ಮತ್ತು ರೊಕ್ಕ ಶ್ಯಾಮ್ ದಯಾಕರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನನ್ನು ಬಾಲಾಪರಾಧಿ ನ್ಯಾಯಮಂಡಳಿಗೆ ಹಸ್ತಾಂತರಿಸಲಾಗಿದೆ. (ಏಜೆನ್ಸೀಸ್)
ಯಾರೂ ಇಲ್ಲದ ವೇಳೆ ಯುವತಿ ಮನೆಗೆ ಎಂಟ್ರಿ ಕೊಟ್ಟ ಪಾಗಲ್ ಪ್ರೇಮಿ! ಮುಂದೆ ನಡೆದಿದ್ದೆಲ್ಲ ಬೆಚ್ಚಿಬೀಳಿಸೋ ಘಟನೆ
‘ಅತ್ಯಾಚಾರಿ ಬಿಲ್ ಕ್ಲಿಂಟನ್ ಬಹುದಿನಗಳ ನಂತರ ತಮ್ಮ ಹಾಸಿಗೆ ಮೇಲೆ ಮಲಗಿದರು’ ಎಂದ ಬಿಬಿಸಿ ನಿರೂಪಕಿ!
2021ನೇ ಸಾಲಿನ ಇನ್ಸ್ಟಾಗ್ರಾಂ ಶ್ರೀಮಂತರ ಪಟ್ಟಿ ಬಿಡುಗಡೆ: ಪ್ರತಿ ಪೋಸ್ಟ್ಗೆ ಕೊಹ್ಲಿಗೆ ಸಿಗುವ ಹಣ ಇಷ್ಟೊಂದಾ?