ಬೆಂಗಳೂರು: ಬಿಗ್ಬಾಸ್ ಕನ್ನಡದ ಒಟಿಟಿ ಮೂರು ವಾರ ಪೂರ್ಣಗೊಳಿಸಿ ನಾಲ್ಕನೇ ವಾರಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್ ಯೋಗೇಶ್ವರ್ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು, ಮೂರನೇ ವಾರದಲ್ಲಿ ಉದಯ್ ಸೂರ್ಯ ಮನೆಯಿಂದ ಹೊರಬಂದಿದ್ದಾರೆ. ಇದೀಗ ನಾಲ್ಕನೇ ವಾರ ಯಾರು ನಿರ್ಗಮಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಇನ್ನೊಂದೆಡೆ ಬಿಗ್ಬಾಸ್ ಕನ್ನಡದ ಒಟಿಟಿ ಸೀಸನ್ ಅಂತಿಮ ಘಟಕ್ಕೆ ಬಂದು ತಲುಪಿದೆ. ಇದು ಮಿನಿ ಸೀಸನ್ ಆಗಿದ್ದು, ಒಟ್ಟು 42 ದಿನಗಳ ಶೋ ಇದಾಗಿದೆ. ಶೂ ಮುಗಿಯಲು ಇನ್ನು 17 ದಿನಗಳು ಮಾತ್ರ ಬಾಕಿ ಇವೆ. ಒಟಿಟಿ ಶೋ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡ, ಬಿಗ್ಬಾಸ್ ಸೀಸನ್ 9 ಅನ್ನು ಘೋಷಣೆ ಮಾಡಲಿದೆ. ಇದು ಟಿವಿಯಲ್ಲಿ ಪ್ರಸಾರವಾಗಲಿದೆ. ಬಿಗ್ಬಾಸ್ ಒಟಿಟಿ ನಿಯಮಗಳ ಪ್ರಕಾರ ಐದು ಸ್ಪರ್ಧಿಗಳು ಓಟಿಟಿಯಿಂದ ಬಿಗ್ಬಾಸ್ ಸೀಸನ್ 9ಗೆ ಪ್ರವೇಶ ಪಡೆಯಲಿದ್ದಾರೆ.
ಇದೀಗ ಬಿಗ್ಬಾಸ್ ಒಟಿಟಿ ಸೀಸನ್ ವಿನ್ನರ್ ಯಾರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಇದೀಗ ವೀಕ್ಷಕರು ಒಬ್ಬರನ ಹೆಸರನ್ನು ತುಂಬಾ ಚರ್ಚೆ ಮಾಡ ತೊಡಗಿದ್ದಾರೆ. ಆ ಹೆಸರೇ ರೂಪೇಶ್ ರಾಜಣ್ಣ. ಒಟಿಟಿ ಸೀಸನ್ 1ರಲ್ಲಿ ರೂಪೇಶ್ ವಿಜೇತರಾಗಲಿದ್ದಾರೆ ಎಂದು ವೀಕ್ಷಕರು ಅಂದಾಜಿಸಿದ್ದಾರೆ. ಟಾಸ್ಕ್ ಮತ್ತು ಮನರಂಜನೆ ವಿಚಾರದಲ್ಲಿ ರೂಪೇಶ್ ಇತರೆ ಸ್ಪರ್ಧಿಗಳಿಂದ ಮುಂದಿರುವುದರಿಂದ ರೂಪೇಶ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ರೂಪೇಶ್ಗೆ ರಾಕೇಶ್ ಅಡಿಗ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇಬ್ಬರು ಕೂಡ ಜಾಲತಾಣದಲ್ಲಿ ಟ್ರೆಂಡ್ ಸಹ ಆಗಿದ್ದಾರೆ.
ರೂಪೇಶ್ ಶೆಟ್ಟಿ ಸದ್ಯ ಬಿಗ್ಬಾಸ್ ಮನೆಯ ಹೊಸ ನಾಯಕನಾಗಿದ್ದಾರೆ. ರೂಪೇಶ್ ಅವರು ಬಿಗ್ಬಾಸ್ ಒಟಿಟಿ ಮನೆಯ ಮೊದಲ ಮತ್ತು ಕೊನೆಯ ನಾಯಕ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕನ್ನಡ OTT ಸೀಸನ್ 1 ರ ಅಂತಿಮ ವಾರ ತಲುಪಿದ ಮೊದಲ ಸ್ಪರ್ಧಿ ಎಂಬ ಕಾರಣಕ್ಕೆ ಬಿಗ್ಬಾಸ್ ರೂಪೇಶ್ ಅವರಿಗೆ ಬಂಪರ್ ಆಫರ್ ನೀಡಿದ್ದು, ರೂಪೇಶ್ ಶೆಟ್ಟಿ ಐದನೇ ವಾರದ ನಾಮನಿರ್ದೇಶನದಿಂದ ಪಾರಾಗುತ್ತಾರೆ ಮತ್ತು ನೇರವಾಗಿ ಆರನೇ ವಾರಕ್ಕೆ ಪ್ರವೇಶಿಸುತ್ತಾರೆ, ಅದು ಅಂತಿಮ ವಾರವಾಗಿರುತ್ತದೆ.
ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ಮತ್ತು ರೂಪೇಶ್ ಶೆಟ್ಟಿ ನಾಯಕತ್ವ ಸ್ಪರ್ಧೆಯಲ್ಲಿ ಭಾಗವಹಿಸಿದರು, ಅಂತಿಮವಾಗಿ ರೂಪೇಶ್ ಟಾಸ್ಕ್ ಅನ್ನು ಗೆದ್ದರು. ಹೀಗಾಗಿ ರೂಪೇಶ್ ಅಭಿಮಾನಿಗಳು ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಬಿಗ್ಬಾಸ್ ಒಟಿಟಿ ವಿನ್ನರ್ ಇವರೇ ಆಗಲಿದ್ದಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಮತ್ತೊಂದೆಡೆ, ಫೈನಲ್ನಲ್ಲಿ ರೂಪೇಶ್ ಶೆಟ್ಟಿಗೆ ರಾಕೇಶ್ ಅಡಿಗ ತೀವ್ರ ಪೈಪೋಟಿ ನೀಡಬಹುದು. ಏಕೆಂದರೆ, ರಾಕೇಶ್ ಅಡಿಗ ಅವರಿಗೆ ಹೊರಗಡೆ ಅಪಾರ ಅನುಯಾಯಿಗಳಿದ್ದು, ವೋಟಿಂಗ್ ಪೋಲ್ನಲ್ಲಿ ರೂಪೇಶ್ ಅವರನ್ನು ಸೋಲಿಸಿದ್ದಾರೆ. ಬಿಗ್ ಬಾಸ್ OTT ಕನ್ನಡ ವಿಜೇತರ ಬಗ್ಗೆ ನಿಮ್ಮ ಭವಿಷ್ಯವೇನು? ಕಾಮೆಂಟ್ ಮಾಡಿ ತಿಳಿಸಿ… (ಏಜೆನ್ಸೀಸ್)
ಜನಾಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದ ಲಂಕಾದ ಮಾಜಿ ಅಧ್ಯಕ್ಷ ತವರಿಗೆ ವಾಪಸ್!
ಸಿಎಂಗೆ ಐಟಿ ಕಂಪನಿಗಳಿಂದ ಶಾಕಿಂಗ್ ಪತ್ರ! ಬೆಂಗಳೂರನ್ನು ತೊರೆಯಲು ಐಟಿ ಕಂಪನಿಗಳ ನಿರ್ಧಾರ?