ಬಳ್ಳಾರಿ: ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ಜೋಡಿ ಮಸಣ ಸೇರಿರುವ ದುರಂತ ಘಟನೆ ನಡೆದಿದ್ದು, ಸಂಭ್ರಮ ಮನೆ ಮಾಡಿದ್ದ ಮನೆಯಲ್ಲೂ ದುಃಖದ ಕಾರ್ಮೋಡ ಆವರಿಸಿದೆ.
ಸಿರಗುಪ್ಪ ತಾಲೂಕಿನ ರಾರಾವಿ ಬಳಿ ನವಜೋಡಿಗಳು ಅಪಘಾತಕ್ಕೆ ಬಲಿಯಾಗಿದ್ದಾರೆ. ವಿನಯ (28) ಹಾಗೂ ಸೌಜನ್ಯ( 24) ಮೃತ ದುರ್ದೈವಿಗಳು. ಕುರುಗೋಡು ನಿವಾಸಿ ವಿನಯ್ ಹಾಗೂ ವೀರಾಪುರದ ಸೌಜನ್ಯಗೆ ಕಳೆದ ವಾರ ನಿಶ್ಚಿತಾರ್ಥವಾಗಿತ್ತು.
ನಿನ್ನೆ ನವಜೋಡಿ ಮಂತ್ರಾಲಯಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ರಾತ್ರಿ ಅಪಘಾತವಾಗಿದೆ. ರಾರಾವಿ ಬಳಿ ಡಿವೈಡರ್ಗೆ ಕಾರ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಇಡೀ ಗ್ರಾಮವೇ ಕಣ್ಣಿರಿಟ್ಟಿದೆ. (ದಿಗ್ವಿಜಯ ನ್ಯೂಸ್)
ಮೊಬೈಲ್ ಜಪ್ತಿಯಾದ್ರೆ ಅವನ ಪತ್ನಿಯು ಮುಖ ನೋಡೋದಿಲ್ಲ: ಸಂಬರಗಿ ರಹಸ್ಯ ಬಿಚ್ಚಿಟ್ಟ ಚಂದ್ರಚೂಡ್!
ವೈರಲ್ ಆಯ್ತು ಸಮಂತಾರ ಹಾಟೆಸ್ಟ್ ಫೋಟೋ: ಒಳಉಡುಪಿನಲ್ಲಿ ಸೌತ್ ಬ್ಯೂಟಿಯ ಪೋಸ್!
ಡ್ರಾಪ್ ಕೇಳಿದಳೆಂದು ಬೈಕ್ ನಿಲ್ಲಿಸಿದ ಯುವಕ: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಶಾಕ್ ಕೊಟ್ಟ ಯುವತಿ!