ಶಾರ್ಜಾ: ಭಾರತ ಟೆಸ್ಟ್ ತಂಡದ ಸ್ಪಿನ್ನರ್ ಆರ್.ಅಶ್ವಿನ್ ಸೌಮ್ಯಸ್ವಭಾವದ ಆಟಗಾರ, ಶಿಸ್ತುಬದ್ಧ ಬೌಲಿಂಗ್ನಿಂದ ಗಮನಸೆಳೆಯುವ ಅಶ್ವಿನ್ ಮಂಗಳವಾರ ಮೈದಾನದಲ್ಲೇ ಸಿಟ್ಟಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಆರ್.ಅಶ್ವಿನ್ ಮೈದಾನದಲ್ಲೇ ಕೆಕೆಆರ್ ತಂಡದ ಟಿಮ್ ಸೌಥಿ ಹಾಗೂ ಇವೊಯಿನ್ ಮಾರ್ಗನ್ ವಿರುದ್ಧ ಗರಂ ಆದರು. ಅಶ್ವಿನ್ ಔಟಾಗಿ ನಿರ್ಗಮಿಸುತ್ತಿದ್ದ ವೇಳೆ, ಬೌಲರ್ ಸೌಥಿ ಅನಾವಶ್ಯಕವಾಗಿ ಕೆಣಕಿದರು. ಇದೇ ವೇಳೆ ಮಾರ್ಗನ್ ಕೂಡ ಮಧ್ಯಪ್ರವೇಶಿಸಿದರು. ಇದರಿಂದ ಸಿಟ್ಟಿಗೆದ್ದ ಅಶ್ವಿನ್, ಇಬ್ಬರ ವಿರುದ್ಧವೂ ಮುಗಿ ಬೀಳಲು ಯತ್ನಿಸಿದರು. ತಕ್ಷಣವೇ ಮಧ್ಯ ಪ್ರವೇಶಿಸಿದ ದಿನೇಶ್ ಕಾರ್ತಿಕ್, ತವರು ರಾಜ್ಯದ ಅಶ್ವಿನ್ ಅವರನ್ನು ಸಮಾಧಾನ ಪಡಿಸಿ ಪ್ರಕರಣವನ್ನು ತಿಳಿಗೊಳಿಸಿದರು.
ಅರಬ್ನಾಡಿನಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಹಾಲಿ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಆಘಾತ ಎದುರಿಸಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್-14ರ ಎರಡನೇ ಭಾಗದ ಹಣಾಹಣಿಯಲ್ಲಿ ಡೆಲ್ಲಿ ತಂಡ 3 ವಿಕೆಟ್ಗಳಿಂದ ಕೆಕೆಆರ್ ತಂಡಕ್ಕೆ ಶರಣಾಯಿತು. ಈ ಸೋಲಿನೊಂದಿಗೆ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡರೆ, ಯುಎಇಯಲ್ಲಿ ಆಡಿದ 4ನೇ ಪಂದ್ಯದಲ್ಲಿ 3ನೇ ಜಯ ದಾಖಲಿಸಿದ ಇವೊಯಿನ್ ಮಾರ್ಗನ್ ಬಳಗ ಪ್ಲೇಆಫ್ ಹಾದಿಗೆ ಮತ್ತಷ್ಟು ಸನಿಹವಾಯಿತು.
— 𝙋 🇮🇹 (@Pran33Th__18) September 28, 2021