ಬೆಂಗಳೂರು: ‘ಸಿಎಂ ಬೊಮ್ಮಾಯಿ ಅವರು ಜೇನುಗೂಡಿಗೆ ಕಲ್ಲುಹೊಡೆದಿದ್ದಾರೆ. ಸಿಕ್ಕಿರುವ ಜೇನನ್ನು ಎಸ್ಸಿ ಎಸ್ಟಿ ಸಮುದಾಯಕ್ಕೆ ಹಂಚಿದ್ದಾರೆ’ ಎಂದು ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಮೀಸಲಾತಿ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ ಪಡೆದ ಹಿನ್ನೆಲೆಯಲ್ಲಿ ಆರ್ ಅಶೋಕ್ ಫ್ರೀಡಂ ಪಾರ್ಕ್ಗೆ ಬಂದಿದ್ದರು. ಧರಣಿ ಕುಳಿತವರಿಗೆ ಆದೇಶದ ಮಾಹಿತಿ ನೀಡುವ ಸಮಯದಲ್ಲಿ ಮಾತನಾಡಿದ ಸಚಿವರು ‘ ಹಿಂದೆ ಬಂದ ಸರ್ಕಾರಗಳು ಮೀಸಲಾತಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ನಮ್ಮ ಸರ್ಕಾರ ಮೀಸಲಾತಿಯನ್ನು ನೀಡಿದ ಕಾರಣ ವಾಲ್ಮೀಕಿ ಸಮುದಾಯಕ್ಕೆ ಒಳ್ಳೆಯದಾಗಿದೆ’ ಎಂದು ಹೇಳಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿದ ಆರ್ ಅಶೋಕ್ ‘ನಮ್ಮ ಸಿಎಂ ಚಾಣಕ್ಯನ ಬುದ್ಧಿಯವರು. ಅವರು ಚಾಣಾಕ್ಷತನದಿಂದ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.