ಬೆಂಗಳೂರು: ಬಿಗ್ಬಾಸ್ ಸೀಸನ್ 8ಕ್ಕೆ ವರ್ಣರಂಜಿತ ತೆರೆಬಿದ್ದಿದೆ. ಲ್ಯಾಂಗ್ ಮಂಜು ಖ್ಯಾತಿಯ ಮಂಜು ಪಾವಗಡ ವಿಜೇತರಾಗಿ ಹೊರಹೊಮ್ಮಿದ್ದು, ಟ್ರೋಫಿಯ ಜತೆಗೆ 53 ಲಕ್ಷ ರೂಪಾಯಿಗಳ ಒಡೆಯನಾಗಿದ್ದಾರೆ. ಅರವಿಂದ್ ಕೆ.ಪಿ. ರನ್ನರ್ ಅಪ್ ಆಗುವ ಮೂಲಕ 11 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ.
ಅರವಿಂದ್ ಕೆ.ಪಿ. ವಿನ್ನರ್ ಆಗದೇ ಇರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ. ಆದರೂ ಅಭಿಮಾನಿಗಳ ಪ್ರಕಾರ ಅರವಿಂದ್ ಅವರೇ ವಿನ್ನರ್. ಕಾರ್ಯಕ್ರಮ ಆಯೋಜಕರು ಅರವಿಂದ್ರನ್ನು ವಿನ್ನರ್ ಎಂದು ಘೋಷಿಸದೇ ಇರಬಹುದು. ಆದರೆ, ಲಕ್ಷಾಂತರ ಮಂದಿಯ ಹೃದಯದಲ್ಲಿ ಅರವಿಂದ್ ಅವರೇ ವಿನ್ನರ್ ಎಂದು ಜಾಲತಾಣದಲ್ಲಿ ಅಭಿಮಾನಿಗಳು ಮೀಮ್ಸ್ಗಳನ್ನು ಹರಿಬಿಡುತ್ತಿದ್ದಾರೆ.
ಅರವಿಂದ್ ಟ್ರೋಫಿಯನ್ನು ಗೆಲ್ಲದೇ ಇರಬಹುದು ಆದರೆ, ವಿನ್ನರ್ ಮಂಜು ಪಾವಗಡಗಿಂತಲೂ ಅರವಿಂದ್ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆ. ಮಂಜು ಪಾವಗಡ ಟ್ರೋಫಿಯ ಜತೆಗೆ 53 ಲಕ್ಷ ರೂ. ನಗದು ಬಹುಮಾನವನ್ನು ಪಡೆದುಕೊಂಡರು. ಹಾಗದರೆ, ಅರವಿಂದ್ ಎಷ್ಟು ಹಣ ಪಡೆದಿರಬಹುದು?
ಸಾಮಾಜಿಕ ಜಾಲತಾಣದದಲ್ಲಿ ಹರಿದಾಡುತ್ತಿರುವ ಪ್ರಕಾರ ಅರವಿಂದ್ ಪ್ರತಿ ವಾರಕ್ಕೆ 4 ಲಕ್ಷ ಸಂಭಾವನೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಸುಮಾರು 14 ವಾರಗಳ ಕಾಲ ಅರವಿಂದ್ ಮನೆಯಲ್ಲಿ ಉಳಿದುಕೊಂಡಿದ್ದರು. ಹೀಗಾಗಿ ಫೈನಲ್ನಲ್ಲಿ ಪಡೆದ 11 ಲಕ್ಷ ರನ್ನರ್ ಅಪ್ ಬಹುಮಾನದ ಜತೆಗೆ ಸಂಭಾವನೆ ರೂಪದಲ್ಲಿ 56 ಲಕ್ಷ ರೂ. ಸೇರಿದಂತೆ ಒಟ್ಟು 60 ಲಕ್ಷಕ್ಕೂ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆಂದು ತಿಳಿದುಬಂದಿದೆ.
ಇನ್ನು ನ್ಯೂಸ್ ಬಗ್ಗೆ ಶೋ ಆಯೋಜಕರಾಗಲಿ ಅಥವಾ ಅರವಿಂದ್ ಆಗಲಿ ಖಚಿತ ಪಡಸಿಲ್ಲ. ಆದರೂ, ಕೆಲವು ಮೂಲಗಳ ಪ್ರಕಾರ ಅರವಿಂದ್ಗೆ ಈ ಪ್ರಮಾಣದ ಹಣ ದೊರಕಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಅರವಿಂದ್ಗೆ ಬಂಪರ್ ಆಫರ್ ಒಂದನ್ನು ಕಲರ್ಸ್ ಕನ್ನಡ ನೀಡಿದೆ ಎನ್ನಲಾಗುತ್ತದೆ. ಪ್ರಖ್ಯಾತ ರಾಜ-ರಾಣಿ ಶೋಗೆ ಅರವಿಂದ್ ಮತ್ತು ದಿವ್ಯಾ ಉರುಡುಗ ಜೋಡಿಯಾಗಿ ಬರುವಂತೆ ಆಹ್ವಾನ ನೀಡಿದ್ದಾರೆನ್ನಲಾಗಿದೆ. ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಸಹ ನೀಡಲಿದ್ದಾರೆ ಎಂದು ಮಾಹಿತಿ ಇದೆ. (ಏಜೆನ್ಸೀಸ್)
ಬಿಗ್ಬಾಸ್ ಹೋದರೇನಂತೆ ಅರವಿಯಾ ಜೋಡಿಗೆ ಒಲಿದು ಬಂತು ಮತ್ತೊಂದು ಬಂಪರ್ ಆಫರ್..!
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡವುದಿಲ್ಲ ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣಗಳು..!