ಹೈದರಾಬಾದ್: ‘ಪುಷ್ಪ’ ಚಿತ್ರದಲ್ಲಿ ಗಮನಸೆಳೆದ ಕಲಾವಿದರ ಪೈಕಿ ದಾಕ್ಷಾಯಿಣಿ ಪಾತ್ರ ಮಾಡಿರುವ ಅನಸೂಯ ಭಾರದ್ವಾಜ್ ಸಹ ಒಬ್ಬರು. ಮೂಲತಃ ನಟಿ-ನಿರೂಪಕಿಯಾಗಿರುವ ಅನಸೂಯ ತಮ್ಮ ಗ್ಲಾಮರಸ್ನಿಂದಲೇ ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಅಲ್ಲದೆ, ಆಗಾಗ ವಿವಾದಗಳನ್ನು ಹುಟ್ಟುಹಾಕುತ್ತಿರುತ್ತಾರೆ. ಇತ್ತೀಚೆಗೆ ಅನಸೂಯ ಅವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಹಿ ಅನುಭವ ಆಗಿದ್ದು, ಅದನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ.
ಅನಾರೋಗ್ಯಕರ ಶಿಷ್ಟಾಚಾರವನ್ನು ಅಲಯನ್ಸ್ ಏರ್ ಪಾಲಿಸುತ್ತಿದೆ. ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಡಬೇಕಿದ್ದ ವಿಮಾನ ಸಂಖ್ಯೆ 91517 6 ಗಂಟೆ 55 ನಿಮಿಷಕ್ಕೆ ಹೊರಡುತ್ತದೆ ಎಂದು ವೇಳಾಪಟ್ಟಿಯಲ್ಲಿ ಮುದ್ರಿಸಲಾಗಿದೆ. ಆದರೆ, 6.20ಕ್ಕೆ ಕೊನೆಯ ಕರೆ ಎಂದು ಹೇಳಿ 6.10ಕ್ಕೆ ನಿಲ್ದಾಣಕ್ಕೆ ಓಡುವಂತೆ ಮಾಡಿದರು. ಆದರೆ, ವಿಮಾನ ಹೊರಟಿದ್ದು ಮಾತ್ರ 7.25ಕ್ಕೆ. ಸುಮಾರು ಅರ್ಧ ಗಂಟೆ ಕಾಯಿಸಿದರು.
Sick sick protocol by @allianceair Flight no.9I517 origin BLR to HYD .. they made us run at 6:10pm and called it a last call at 6:20pm whereas the boarding time was given as 18:55 on the ticket.. the take off time is at 7:25.. made us wait in the bus for half an hour.. (1/4)
— Anasuya Bharadwaj (@anusuyakhasba) October 17, 2022
ವಿಮಾನ ಹತ್ತುವ ಮುನ್ನ ಮಾಸ್ಕ್ ಇಲ್ಲದಿದ್ದಕ್ಕೆ ನಮ್ಮನ್ನು ಒಳಗಡೆ ಬಿಡದೆ ಗೇಟ್ನಲ್ಲಿಯೇ ತಡೆದರು. ಮಾಸ್ಕ್ ಕಡ್ಡಾಯವಲ್ಲ ಎಂದು ಗದರಿದಾಗ ನಮ್ಮನ್ನು ಒಳಗಡೆ ಬಿಟ್ಟರು. ಆದರೆ, ಮಾಸ್ಕ್ ಧರಿಸದಿದ್ದಕ್ಕೆ ನಮ್ಮನ್ನು ಗೌರವಯುತ ಸೀಟಿನಲ್ಲಿ ಕೂರಿಸುವ ಬದಲು ಪ್ರತ್ಯೇಕ ಸೀಟಿನಲ್ಲಿ ಕೂರಿಸಿದರು. ನಾವು ಇಡೀ ಕುಟುಂಬ ಹೊಗಿದ್ದವು. ಎಲ್ಲರನ್ನು ಬೇರೆ ಬೇರೆ ಸೀಟಿನಲ್ಲಿ ಕೂರಿಸಿದರು. ಆ ಸೀಟು ಸರಿಯಿಲ್ಲದ ಕಾರಣ ನನ್ನ ಬಟ್ಟೆ ಹರಿಯಿತು. ಪ್ರಯಾಣಿಕರನ್ನು ಸರಿಯಾಗಿ ನಡೆಸಿಕೊಳ್ಳಿ ಎನ್ನುವ ಮೂಲಕ ಅಲಯನ್ಸ್ ಏರ್ ಸಂಸ್ಥೆಗೆ ಟ್ವೀಟ್ ಮೂಲಕ ಅನಸೂಯ ತಿಳಿ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಭಾರದ್ವಾಜ್ ಇದುವರೆಗೂ ‘ಕ್ಷಣಂ’, ‘ರಂಗಸ್ಥಲಂ’ ಇತ್ತೀಚೆಗಷ್ಟೇ ರಿಲೀಸ್ ಆದ ‘ಪಕ್ಕಾ ಕಮರ್ಷಿಯಲ್’ ಸೇರಿದಂತೆ 15 ಚಿತ್ರಗಳಲ್ಲಿ ನಟಿಸಿದ್ದಾರೆ. ‘ಪುಷ್ಪ ದಿ ರೂಲ್’ಮತ್ತು ‘ರಂಗಮಾರ್ತಾಂಡ’ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. (ಏಜೆನ್ಸೀಸ್)
ಪಡಿತರ ಅಧಿಕಾರಿಗಳಿಗೆ ಹಫ್ತಾ: ನ್ಯಾಯಬೆಲೆ ಅಂಗಡಿಗಳು ಟಾರ್ಗೆಟ್; ಪ್ರತಿ ಮಳಿಗೆಗೆ 4ರಿಂದ 5 ಸಾವಿರ ರೂ. ನಿಗದಿ
ಶಶಿಕಲಾ ಇತರರ ವಿರುದ್ಧ ತನಿಖೆಗೆ ಶಿಫಾರಸು; ಜಯಲಲಿತಾ ಸಾವಿನ ಕುರಿತ ತನಿಖಾ ಆಯೋಗದ ವರದಿ ಬಹಿರಂಗ