ಗೋರಖ್ಪುರ: ನಟ ಸುದೀಪ್ ಅಭಿನಯದ ಹೆಬ್ಬಲಿ ಸಿನಿಮಾದಲ್ಲಿ ಖಡಕ್ ವಿಲ್ಲನ್ ಆಗಿ ಕಾಣಿಸಿಕೊಂಡಿದ್ದ ನಟ ಹಾಗೂ ಸಂಸದ ರವಿ ಕಿಶನ್ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, 3.25 ಕೋಟಿ ರೂಪಾಯಿ ವಂಚನೆ ಆಗಿರುವುದಾಗಿ ದೂರು ದಾಖಲಿಸಿದ್ದಾರೆ.
ಗೋರಖ್ಪುರ ಸರ್ದಾರ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಕಿಶನ್, ಗೋರಖ್ಪುರ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಬಿಲ್ಡರ್ ಒಬ್ಬರ ವಿರುದ್ಧ 3.25 ಕೋಟಿ ವಂಚನೆ ಮಾಡಿರುವ ಸಂಬಂಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಮಾಹಿತಿ ನೀಡಿದರು.
ಆರೋಪಿ ಹೆಸರು ಜೈನ್ ಜಿತೇಂದ್ರ ರಮೇಶ್. ಇವರಿಗೆ 2012ರಲ್ಲಿ ಕಿಶನ್ ಅವರು ಹಣವನ್ನು ನೀಡಿದ್ದರು. ಆದರೆ, ಕಿಶನ್ ಹಣ ವಾಪಸ್ ಕೇಳಿದಾಗ ಬಿಲ್ಡರ್ ತಲಾ 34 ಲಕ್ಷ ರೂ.ಗಳ 12 ಚೆಕ್ಗಳನ್ನು ನೀಡಿದ್ದು, ಕೆಲವು ಬೌನ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಬಿಲ್ಡರ್ ರಮೇಶ್ ವಿರುದ್ಧ ಕಿಶನ್ ಇದೀಗ ವಂಚನೆ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)
ಪಿಎಫ್ಐ ಜತೆ ಎಂಟು ಉಗ್ರ ಸಂಘಟನೆ ಬ್ಯಾನ್: ಕಾಂಗ್ರೆಸ್ ಸಂಸದನ ಪ್ರತಿಕ್ರಿಯೆ ಹೀಗಿದೆ ನೋಡಿ….
ದೇಶದಲ್ಲಿ PFI ಬ್ಯಾನ್: ಮುಂದಿನ ಕ್ರಮಗಳೇನು? ಕಾರ್ಯಕರ್ತರು, ಮುಖಂಡರ ಕತೆ ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್