More

    ಹೆಬ್ಬುಲಿ ಚಿತ್ರದ ಖಳನಟ, ಬಿಜೆಪಿ ಸಂಸದ ರವಿ ಕಿಶನ್​ಗೆ 3.5 ಕೋಟಿ ರೂ. ವಂಚನೆ: ದೂರು ದಾಖಲು

    ಗೋರಖ್​ಪುರ: ನಟ ಸುದೀಪ್​ ಅಭಿನಯದ ಹೆಬ್ಬಲಿ ಸಿನಿಮಾದಲ್ಲಿ ಖಡಕ್​ ವಿಲ್ಲನ್​ ಆಗಿ ಕಾಣಿಸಿಕೊಂಡಿದ್ದ ನಟ ಹಾಗೂ ಸಂಸದ ರವಿ ಕಿಶನ್ ಅವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, 3.25 ಕೋಟಿ ರೂಪಾಯಿ ವಂಚನೆ ಆಗಿರುವುದಾಗಿ ದೂರು ದಾಖಲಿಸಿದ್ದಾರೆ.

    ಗೋರಖ್​ಪುರ ಸರ್ದಾರ್​ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಕಿಶನ್​, ಗೋರಖ್​ಪುರ ಕಂಟೋನ್ಮೆಂಟ್​ ಪೊಲೀಸ್​ ಠಾಣೆಯಲ್ಲಿ ಬಿಲ್ಡರ್​ ಒಬ್ಬರ ವಿರುದ್ಧ 3.25 ಕೋಟಿ ವಂಚನೆ ಮಾಡಿರುವ ಸಂಬಂಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಮಾಹಿತಿ ನೀಡಿದರು.

    ಆರೋಪಿ ಹೆಸರು ಜೈನ್ ಜಿತೇಂದ್ರ ರಮೇಶ್‌. ಇವರಿಗೆ 2012ರಲ್ಲಿ ಕಿಶನ್​ ಅವರು ಹಣವನ್ನು ನೀಡಿದ್ದರು. ಆದರೆ, ಕಿಶನ್ ಹಣ ವಾಪಸ್ ಕೇಳಿದಾಗ ಬಿಲ್ಡರ್ ತಲಾ 34 ಲಕ್ಷ ರೂ.ಗಳ 12 ಚೆಕ್‌ಗಳನ್ನು ನೀಡಿದ್ದು, ಕೆಲವು ಬೌನ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಬಿಲ್ಡರ್​ ರಮೇಶ್​ ವಿರುದ್ಧ ಕಿಶನ್​ ಇದೀಗ ವಂಚನೆ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

    ಪಿಎಫ್​ಐ ಜತೆ ಎಂಟು ಉಗ್ರ ಸಂಘಟನೆ ಬ್ಯಾನ್​: ಕಾಂಗ್ರೆಸ್​ ಸಂಸದನ ಪ್ರತಿಕ್ರಿಯೆ ಹೀಗಿದೆ ನೋಡಿ….

    ದೇಶದಲ್ಲಿ PFI ಬ್ಯಾನ್: ಮುಂದಿನ ಕ್ರಮಗಳೇನು? ಕಾರ್ಯಕರ್ತರು, ಮುಖಂಡರ ಕತೆ ಏನು? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

    ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬುಗೆ ಮಾತೃ ವಿಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts