More

    ಇಂಗ್ಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ರುತುರಾಜ್​ಗೆ ಅವಕಾಶ ಸಿಗುವುದಿಲ್ಲ: ಆಕಾಶ್ ಚೋಪ್ರಾ

    ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಇಂಗ್ಲೆಂಡ್​ನ ಸೌತಂಪ್ಟನ್​ನಲ್ಲಿ ಗುರುವಾರ (ಜುಲೈ 7) ಆರಂಭವಾಗಲಿದ್ದು, ಬ್ಯಾಟ್ಸ್​ಮನ್ ರುತುರಾಜ್ ಗಾಯಕ್ವಾಡ್ ಅವರಿಗೆ ಭಾರತ ಪರ ಆರಂಭಿಕ ಆಟವಾಡಲು ಅವಕಾಶ ಸಿಗುವುದಿಲ್ಲ ಎಂದು ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

    ನಾಯಕ ರೋಹಿತ್ ಶರ್ಮಾ ಕೋವಿಡ್-19ನಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿರುವುದರಿಂದ ಆಟಗಾರರ ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ರುತುರಾಜ್ ಗಾಯಕ್ವಾಡ್ ಟಿ20 ಪಂದ್ಯಗಳಲ್ಲಿ ತನ್ನ ಕೌಶಲ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರೂ ಇಂಗ್ಲೆಂಡ್​ ವಿರುದ್ಧ ಸ್ಥಾನ ಸಿಗುವುದು ಸಂದೇಹವಾಗಿದೆ.

    ರೋಹಿತ್ ಟಿ20 ಗೆ ಹಿಂತಿರುಗಿದ್ದಾರೆ. ಈಗ ಯಾರು ಹೊರಗುಳಿಯುತ್ತಾರೆ? ರುತುರಾಜ್ ಅವರಿಗೆ ಮತ್ತೊಂದು ಅವಕಾಶ ಸಿಗುವುದಿಲ್ಲ. ಸಂಜು ಸ್ಯಾಮ್ಸನ್​ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆಯೇ? ಹೂಡಾ ಬಗ್ಗೆ ಏನು? ನಾಳೆ ಭಾರತವು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುತ್ತದೆ ಎಂದು ಆಕಾಶ್ ಚೋಪ್ರಾ ಕೂ ಮಾಡಿದ್ದಾರೆ.

    ಇಂಗ್ಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ರುತುರಾಜ್​ಗೆ ಅವಕಾಶ ಸಿಗುವುದಿಲ್ಲ: ಆಕಾಶ್ ಚೋಪ್ರಾ

    ಟಿ20ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋ ಪಟೇಲ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ ದೀಪ್ ಸಿಂಗ್, ಉಮ್ರಾನ್ ಮಲಿಕ್.

    ಇಂದು ಪಂಜಾಬ್​ ಸಿಎಂ ಮದುವೆ: ವಧು ಗುರುಪ್ರೀತ್​ ಕೌರ್​ ವಯಸ್ಸೆಷ್ಟು? ಇಲ್ಲಿದೆ ಅವರ ಸಂಪೂರ್ಣ ಪರಿಚಯ​

    ಚಿನ್ನಾಭರಣ ಮಳಿಗೆ ದೋಚಿ ರಾಜಸ್ಥಾನದಲ್ಲಿ ಅಡಗಿದ್ದ ದರೋಡೆಕೋರರ ಹೆಡೆಮುರಿ ಕಟ್ಟಿದ ಬೆಂಗ್ಳೂರು ಪೊಲೀಸರು!

    ಚಿನ್ನದ ಹೊಳಪಿನಲ್ಲಿ ರೂಪಾಯಿ ಕಳಾಹೀನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts