More

    ಈ ಸಾವು ನ್ಯಾಯವೇ? ಗಂಡನ ಈ ಕೆಟ್ಟ ಚಟದಿಂದ ನೊಂದು ಸಾವಿನ ಹಾದಿ ಹಿಡಿದ 8 ತಿಂಗಳ ಗರ್ಭಿಣಿ

    ತಿರುವನಂತಪುರಂ: ಎಂಟು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕೇರಳದ ಕಲ್ಲಾರದಲ್ಲಿರುವ ಆಕೆಯ ಮನೆಯಲ್ಲಿ ನಡೆದಿದೆ.

    ಮೃತ ಗರ್ಭಿಣಿಯನ್ನು ಭಾಗ್ಯ (21) ಎಂದು ಗುರುತಿಸಲಾಗಿದೆ. ಗಂಡನ ಮದ್ಯ ವ್ಯಸನದ ಕಾಟದಿಂದ ಖಿನ್ನತೆಗೆ ಜಾರಿದ್ದ ಭಾಗ್ಯ, ಅದರಿಂದ ಹೊರಬರಲಾಗದೇ ಇನ್ನು ಕೆಲವೇ ದಿನಗಳಲ್ಲಿ ಹೊರ ಜಗತ್ತಿಗೆ ಕಾಲಿಡಬೇಕಾಗಿದ್ದ ಕಂದಮ್ಮ ಜತೆಗೆ ಭಾಗ್ಯ ಸಾವಿನ ಹಾದಿ ಹಿಡಿದಿದ್ದಾಳೆ.

    ಭಾನುವಾರ ಸಂಜೆ 4 ಗಂಟೆಗೆ ಭಾಗ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು. ಪತಿ ತನ್ನ ಸ್ನೇಹಿತರೊಂದಿಗೆ ಯಾವಾಗಲೂ ಮದ್ಯ ಸೇವಿಸಲು ಹೋಗುತ್ತಿದ್ದರಿಂದ ಇಬ್ಬರ ನಡುವೆ ಇದೇ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದ ಭಾಗ್ಯ ಖಿನ್ನತೆಗೆ ಜಾರಿದ್ದಳು.

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಲ್ಲಾರ ಪೊಲೀಸರು ಭಾಗ್ಯಳ ಮೃತದೇಹವನ್ನು ಸರ್ಕಾರಿ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರಿಸಿದ್ದು, ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

    ಸಿಎಂ ಬೊಮ್ಮಾಯಿ ಅವರನ್ನು ಎಂ.ಎಸ್​. ಧೋನಿಗೆ ಹೋಲಿಸಿ ಸಂಸದೆ ಸುಮಲತಾ ಕೊಟ್ಟ ಕಾರಣ ಹೀಗಿದೆ…

    ಸಮಂತಾ ಬೊಲ್ಡ್​ನೆಸ್​ ಗುಟ್ಟು ಸಂಭಾವನೆಯಿಂದ ರಟ್ಟು: ಎಲ್ಲರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಸ್ಯಾಮ್​

    ಬಾಲಕಿ ಪರ ಹೈಕೋರ್ಟ್ ನೀಡಿದ ತೀರ್ಪಿಗೆ ಹೆದರಿ ಮೇಲ್ಮನವಿಯಲ್ಲಿ ಅಳಲು ತೋಡಿಕೊಂಡ ಕೇರಳ ಸರ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts