More

    ಶುದ್ಧ ಮನಸ್ಸಿನಿಂದ ಜಗತ್ತಿನಲ್ಲಿ ಶಾಂತಿ

    ರಾಯಬಾಗ: ಮನಸ್ಸು ಹಿಡಿತದಲ್ಲಿದ್ದರೆ ಅಂದುಕೊಂಡಿದ್ದನ್ನು ಯಶಸ್ವಿಯಾಗಿ ಸಾಧಿಸಬಹುದು ಎಂದು ಸುಕ್ಷೇತ್ರ ಹಿಪ್ಪರಗಿ ಪ್ರಭು ಮಹಾರಾಜರು ಹೇಳಿದರು.

    ತಾಲೂಕಿನ ಮೊರಬ ಗ್ರಾಮದ ಬಾನೆಸರಕಾರ ತೋಟದಲ್ಲಿ ಎಸ್.ಆರ್.ಬಾನೆಸರಕಾರ ಅವರ 15ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮನಸ್ಸಿನ ನಿಯಂತ್ರಣಕ್ಕಾಗಿ ದೇವರ ಧ್ಯಾನ ಮಾಡಬೇಕು. ಆತ್ಮಧ್ಯಾನಕ್ಕಿಂತ ಶ್ರೇಷ್ಠವಾದ ಧ್ಯಾನ ಇನ್ನೊಂದಿಲ್ಲ. ಮನಸ್ಸು ಶುದ್ಧವಾದರೆ ಜಗತ್ತೇ ಶುದ್ಧವಾಗಿ ಶಾಂತಿ ನೆಲೆಸುತ್ತದೆ. ಭಾರತ ಅಧ್ಯಾತ್ಮದಲ್ಲಿ ವಿಶ್ವಕ್ಕೆ ಗುರುವಾಗಿದೆ ಎಂದರು. ಹಿರಿಯ ಧುರೀಣ ಡಿ.ಎಸ್.ನಾಯಿಕ ಮಾತನಾಡಿ, ಸತ್ಕರ್ಮಗಳೇ ನಮ್ಮನ್ನು ಕಾಪಾಡುತ್ತವೆ ಹೊರತು ನಮ್ಮ ಸಂಪತ್ತು, ಅಧಿಕಾರ ಹಾಗೂ ಸಂಬಂಧಗಳಲ್ಲ. ಸದ್ಗುರುಗಳ ಮಾತುಗಳನ್ನು ಆಲಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

    ವಕೀಲ ಅರವಿಂದ ಮಗದುಮ್ಮ, ಯುವಧುರೀಣ ಸಂಜೀವಕುಮಾರ ಬಾನೆಸರಕಾರ, ಡಾ.ಎಸ್.ಎಸ್.ಬಾನೆಸರಕಾರ, ಅರವಿಂದ ಬಾನೆಸರಕಾರ, ಹಾಲಪ್ಪ ಘಾಳಿ, ಎಸ್.ಕೆ.ರೆಂಟೆ, ಾರೂಕ್ ಮೊಮಿನ್, ಸತ್ಯಪ್ಪ ಚಂದರಗಿ, ರಾಜು ಬಡೋರೆ, ಶರದ ಪಾಟೀಲ, ಶಿವಾನಂದ ಹೆಗಡೆ, ಮಾರ್ತಂಡ ಕಾರತಗಿ, ಅಜಿತ ಹೆಗಡೆ, ಎನ್.ಡಿ.ಶಿಂಧೆ, ರಾಜೇಂದ್ರ ಈರಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts