ಚಂಡಿಗಡ್: ಕರೊನಾ ಬಂದ ಮೇಲೆ ಪ್ರತಿಯೊಬ್ಬರೂ ಇಮ್ಯೂನಿಟಿ ಹೆಚ್ಚಿಸುವ ಹಣ್ಣು, ತರಕಾರಿ, ಕಷಾಯಗಳ ಮೊರೆ ಹೋಗುತ್ತಿದ್ದಾರೆ.
ಹಾಗೇ ಪಂಜಾಬ್ನ ಹಾಲು ಉತ್ಪಾದಕರ ಸಂಘವೂ ಕೂಡ ಈಗ ರೋಗನಿರೋಧಕ ಶಕ್ತಿ ಉತ್ತೇಜಕ ಹಾಲನ್ನು ಪರಿಚಯಿಸಿದ್ದು, ಅದನ್ನು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇಂದು ಬಿಡುಗಡೆ ಮಾಡಿದ್ದಾರೆ.
ಪಂಜಾಬ್ನ ಹಾಲು ಉತ್ಪಾದಕರ ಸಂಘ ತಯಾರಿಸುವ ವೆರ್ಕಾ ಶಕ್ತಿ ಹಾಲಿನ ಜತೆ ಇದೀಗ ವೆರ್ಕಾ ಹಳದಿ ಅಥವಾ ಅರಿಶಿಣ ಯುಕ್ತ ಹಾಲಿನ ಪೊಟ್ಟಣವೂ ಸೇರಿಕೊಂಡಿದ್ದು, ಜನರು ಇದನ್ನು ಖರೀದಿಸಿ ಉಪಯೋಗಿಸಬಹುದಾಗಿದೆ.
ಇಂದು ವೆರ್ಕಾ ಹಳದಿಯನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಲನ್ನು ಕೊಂಡು ಉಪಯೋಗಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಸೋನಿಯಾ ಗಾಂಧಿ ನಡೆಸಿದ ಸಭೆಯಲ್ಲೂ ಮತ್ತದೇ ‘ರಾಗಾ’: ರಾಹುಲ್ ಗಾಂಧಿ ನಿರ್ಧಾರವೊಂದೇ ಬಾಕಿ
ಈ ಬಗ್ಗೆ ಮಾತನಾಡಿದ ಸಹಕಾರ ಸಚಿವ ಸುಖ್ಜಿಂದರ್ ಸಿಂಗ್ ರಾಂಧವ ಅವರು, ಪಟಿಯಾಲಾದಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಅಭಿವೃದ್ಧಿ ಪಡಿಸಲಾದ ಮತ್ತು ಪೇಟೆಂಟ್ ಪಡೆದ ವಿಶಿಷ್ಟವಾದ ಹಲ್ದಿ (ಅರಿಶಿಣ) ಹಾಲು ಇದು. ಇಲ್ಲಿ ಬಳಸಲಾದ ಅರಿಶಿಣ ಸಾಮಾನ್ಯ ಅರಿಶಿಣಕ್ಕಿಂತ 10 ಪಟ್ಟು ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದ್ದಾರೆ.
ಪಂಜಾಬ್ನ ಎಲ್ಲ ವೆರ್ಕಾ ಹಾಲಿನ ಬೂತ್ಗಳು ಹಾಗೂ ಪ್ರಮುಖ ಮಳಿಗೆಗಳಲ್ಲಿ ಈ ಹಲ್ದಿ ಹಾಲು ಸಿಗಲಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಈದ್ಗಾ ಮೈದಾನದಲ್ಲಿ ಬೇಡ…ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ: ತೆಲಂಗಾಣ ವಕ್ಫ್ ಮಂಡಳಿ