More

    ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ: ಮಾಹಿತಿ ತಿದ್ದುಪಡಿಗೆ ಸೂಚನೆ

    ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹತೆ ಹೊಂದಿರುವ ಪ್ರೌಢಶಾಲಾ ಶಿಕ್ಷಕರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಪೂರ್ಣ ಮಾಹಿತಿಯನ್ನು ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

    ಶಿಕ್ಷಕರು ನೀಡಿರುವ ಪಟ್ಟಿಯಲ್ಲಿ ಕೆಲವು ಸಹ ಶಿಕ್ಷಕರ ಜನ್ಮ ದಿನಾಂಕವನ್ನೇ ಸೇವೆಗೆ ದಿನಾಂಕವನ್ನಾಗಿ ನಮೂದು ಮಾಡಲಾಗಿದೆ. ಇದರಿಂದ ಸಾಕಷ್ಟು ಗೊಂದಲವಾಗಿದೆ. ಶಿಕ್ಷಕರ ಸೇವಾ ಪುಸ್ತಕವನ್ನು ಪರಿಶೀಲಿಸಿ ನಿಖರ ದಿನಾಂಕವನ್ನು ದಾಖಲಿಸಿ ತಿದ್ದುಪಡಿ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

    ವಿದ್ಯಾರ್ಹತೆ ಕಾಲಂನಲ್ಲಿ ಸ್ನಾತಕೋತ್ತರ ಪದವಿ ಎಂದು ನಮೂದಿಸಿದ್ದು, ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಾಗಿದೆ ಎಂದು ನಮೂದಿಸಿಲ್ಲ. ಆದ್ದರಿಂದ ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಾಗಿದೆ ಎಂಬುದನ್ನು ತಿಳಿಸಬೇಕು.

    ಹಾಗೆಯೇ ಇತ್ತೀಚೆಗೆ ವರ್ಗಾವಣೆಯಾದ ಶಿಕ್ಷಕರು ವರ್ಗಾವಣೆಗೊಂಡಿರುವ ಜಿಲ್ಲೆಯ ಉಪ ನಿರ್ದೇಶಕರು ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕು. ಕೆಜಿಐಡಿ ಸಂಖ್ಯೆಯನ್ನು ದಾಖಲಿಸಿ ಎಕ್ಸೆಲ್ ಾರ್ಮೆಟ್ ಜತೆಗೆ ಪಿಡಿಎ್ನಲ್ಲಿಯೂ ತಿದ್ದುಪಡಿಗಳನ್ನು ದೃಢೀಕರಿಸಿ ಡಿ.23ರೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts