ಸಾಗರ: ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ 1ರಿಂದ 3ರವರೆಗೆ ಹ್ಮಮಿೊಂಡಿದೆ ಎಂದು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ವಿ.ಹಿತಕರ ಜೈನ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಗರದ ಬ್ರಾಸಂ ಸಭಾಂಗಣದಲ್ಲಿ ಶಾಸಕ ಹರತಾಳು ಹಾಲಪ್ಪ ಗೌರವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಸಲು ತೀರ್ವನಿಸಲಾಗಿದೆ ಎಂದರು.
ಕಳೆದ ವರ್ಷ ಸಮ್ಮೇಳನ ನಡೆಸಿದ ಬಾಬ್ತು ಕರೊನಾದಿಂದಾಗಿ ತಾಲೂಕು ಸಮಿತಿಗೆ 1 ಲಕ್ಷ ರೂ. ಬಂದಿರುವುದಿಲ್ಲ. ಆದ್ದರಿಂದ ಈ ವರ್ಷದ ಸಮ್ಮೇಳನದ ಬಾಬ್ತು ಕೇಂದ್ರ ಸಮಿತಿಯಿಂದ ಬಿಡುಗಡೆ ಮಾಡುವ ಭರವಸೆ ಪಡೆದ ಕಾರಣ ಸಮ್ಮೇಳನ ಆಯೋಜಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಅಧಿಕಾರದಲ್ಲಿರುವ ಕಸಾಪ ಸಮಿತಿಯ ಅಧಿಕಾರ 5 ವರ್ಷವಾಗಿದ್ದು ಮುಂಬರುವ ಏಪ್ರಿಲ್ಗೆ ಅಧಿಕಾರ ಮುಕ್ತಾಯವಾಗಲಿದೆ. ಹೊಸ ಸಮಿತಿಗಳ ರಚನೆಗೆ ಚುನಾವಣೆಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಸಮ್ಮೇಳನ ಮುಗಿದ ತಕ್ಷಣ ಖರ್ಚುವೆಚ್ಚ ಕುರಿತು ಸಭೆ ನಡೆಸಲಾಗುತ್ತದೆ ಎಂದರು.