ಮುಂಬೈ: ಭಾರತದ ಯುವ ಬ್ಯಾಟ್ಸ್ಮನ್ ಪೃಥ್ವಿ ಷಾ ಪಾಲಿಗೆ 2019ರಲ್ಲಿ ಕಹಿ ಘಟನೆಯೊಂದು ನಡೆದಿತ್ತು. ನಿಷೇಧಿತ ಮದ್ದು ಸೇವಿಸಿದ ಹಿನ್ನೆಲೆಯಲ್ಲಿ 8 ತಿಂಗಳ ಕಾಲ ಬಿಸಿಸಿಐನಿಂದ ಅಮಾನತು ಶಿಕ್ಷೆ ಎದುರಿಸಿದ್ದರು. ಶಿಕ್ಷೆ ವಿಧಿಸುವುದಕ್ಕೂ ಮೊದಲೇ ನಾಲ್ಕೂ ತಿಂಗಳು ಕಳೆದಿದ್ದ ಕಾರಣ ಕೇವಲ 4 ತಿಂಗಳಿಗೆ ವಾಪಸಾದರು. ಈ ಕುರಿತು ಬಹುದಿನಗಳ ಬಳಿಕ ಮಾಹಿತಿ ಹಂಚಿಕೊಂಡಿರುವ 21 ವರ್ಷದ ಪೃಥ್ವಿ ಷಾ, ಈ ಘಟನೆಗೆ ನಾನು ಹಾಗೂ ನನ್ನ ತಂದೆಯೇ ಕಾರಣ. ಅತಿಯಾದ ಕೆಮ್ಮು ಭಾದಿಸಿದ ಹಿನ್ನೆಲೆಯಲ್ಲಿ ಔಷಧಿ ತೆಗೆದುಕೊಳ್ಳಲಾಯಿತು. ಆದರೆ, ಈ ಔಷಧಿ ಬಿಸಿಸಿಐ ನಿಷೇಧಿಸಿರುವ ಪಟ್ಟಿಯಲ್ಲಿದೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ಪೃಥ್ವಿ ಷಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನೆಚ್ಚಿನ ತಂಡ ಗೆದ್ದ ಸಂಭ್ರಮಾಚರಣೆ ವೇಳೆ ಪ್ರಾಣತೆತ್ತ ಫುಟ್ಬಾಲ್ ಅಭಿಮಾನಿ,
ಇಂದೋರ್ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂನಿರ್ಯಲ್ಲಿ ಆಡುತ್ತಿದ್ದೆ, ಈ ವೇಳೆಗೆ ನನಗೆ ಅತಿಯಾದ ಕೆಮ್ಮು ಹಾಗೂ ಶೀತ ಕಾಡಿತು. ಪಂದ್ಯ ಮುಗಿಸಿ ರಾತ್ರಿ ಹೋಟೆಲ್ಗೆ ಊಟಕ್ಕೆ ಹೋದಾಗ ಕೆಮ್ಮು ಅತಿಯಾಗಿ ಕಾಡಿತು. ಈ ವೇಳೆ ತಂದೆಯೊಂದಿಗೆ ಮಾತನಾಡಿದೆ. ನನ್ನ ತಂದೆ ಒಂದು ಸಿರಪ್ ತೆಗೆದುಕೊಳ್ಳಲು ಹೇಳಿದರು. ನಾನು ತಂಡದ ಫಿಸಿಯೋ ಅವರನ್ನು ಸಂಪಕಿರ್ಸದೆ ಔಷಧ ಕುಡಿದದ್ದು ನನ್ನಿಂದಾದ ದೊಡ್ಡ ತಪ್ಪು ಎಂದು ಪೃಥ್ವಿ ಷಾ ಕ್ರಿಕೆಟ್ ವೆಬ್ಸೈಟ್ವೊಂದಕ್ಕೆ ಹೇಳಿಕೊಂಡಿದ್ದಾರೆ. ಮದ್ದು ತೆಗೆದುಕೊಂಡ ಮೂರನೇ ದಿನಕ್ಕೆ ಡೋಪಿಂಗ್ ಟೆಸ್ಟ್ ಎದುರಿಸಬೇಕಾಯಿತು. ನಿಷೇಧಿತ ಮದ್ದು ತೆಗೆದುಕೊಂಡಿರುವುದು ಪತ್ತೆಯಾಯಿತು. ಬಳಿಕ ನನಗೆ ಶಿಕ್ಷೆಯೂ ಆಯಿತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಯಾರಾದರೂ ತಂಡಕ್ಕೆ ಪ್ರಾಯೋಜಕತ್ವ ನೀಡಿ ಎಂದು ಅಳಲು ತೋಡಿಕೊಂಡ ಜಿಂಬಾಬ್ವೆ ಆಲ್ರೌಂಡರ್
ಪೃಥ್ವಿ ಷಾ ಅನುಪಸ್ಥಿತಿಯಲ್ಲಿ ಶುಭಮಾನ್ ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಗಿಟ್ಟಿಸಿಕೊಂಡರು. ರೋಹಿತ್ ಶರ್ಮ ಜತೆಗೂಡಿ ಇನಿಂಗ್ಸ್ ಆರಂಭಿಸಿದರು. ಕಳೆದ ವರ್ಷ ಆಸ್ಟ್ರೆಲಿಯಾದಲ್ಲೂ ಸಿಕ್ಕ ಅವಕಾಶವನ್ನು ಪೃಥ್ವಿ ಷಾ ಸೂಕ್ತವಾಗಿ ಬಳಸಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ತಂಡದಿಂದ ಕೈಬಿಡಲಾಗಿತ್ತು. ಬಳಿಕ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ನಿರ್ವಹಣೆ ತೋರಿದ್ದರು.
ಜಿಂಬಾಬ್ವೆ ಆಲ್ರೌಂಡರ್ ಮನವಿಗೆ ಸ್ಪಂದಿಸಿದ ಪೂಮಾ ಕ್ರಿಕೆಟ್, ತಂಡಕ್ಕೆ ಕಡೆಗೂ ದಕ್ಕಿದ ಪ್ರಾಯೋಜಕರು