More

    ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮುದ್ರಣ ಉದ್ಯಮಿ ಎಂ. ಗಿರೀಶ್ ನಿಧನ

    ಬೆಂಗಳೂರು: ಸೋಮವಾರ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪುಸ್ತಕ ಪ್ರಕಾಶಕ ಹಾಗೂ ಶುಭೋದಯ ಪ್ರಿಂಟರ್ಸ್‌ ಮಾಲೀಕ ಎಂ. ಗಿರೀಶ್ (50) ಮಂಗಳವಾರ ನಿಧನರಾಗಿದ್ದಾರೆ.

    ಸಂಜೆವಾಣಿ, ಉದಯವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ನಂತರ ಸ್ವಂತ ಮುದ್ರಣ ಉದ್ಯಮವನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದರು. ಇವರು ಪತ್ನಿ-ಪುತ್ರಿಯನ್ನು ಅಗಲಿದ್ದಾರೆ.

    ನಿನ್ನೆ ಸಂಜೆ ಬನಶಂಕರಿ ಆರನೇ ಹಂತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಗಿರೀಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಾಳೆ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಬನಶಂಕರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ

    ಹಿಜಾಬ್​ ಸಂಘರ್ಷಕ್ಕೆ ಇಂದು ಕೂಡ ಬೀಳಲಿಲ್ಲ ತೆರೆ, ಹೆಚ್ಚಾಯಿತು ನಾಳೆ ಏನಾಗಬಹುದು ಎಂಬ ಕೌತುಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts