More

    ಆರ್​ಸಿಬಿ ಗೆಲ್ಲುತ್ತಿದ್ದಂತೆ ವಿರಾಟ್​ ಕೊಹ್ಲಿ ಟೀಕಾಕಾರರ ಕಾಲೆಳೆದ ಪ್ರೀತಿ ಜಿಂಟಾ…!

    ದುಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)-2020ರ ನಿನ್ನೆಯ ಪಂದ್ಯ ರೋಚಕವಾಗಿತ್ತು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್​ ತಂಡ ಸಮಬಲದಲ್ಲಿ ಸ್ಕೋರ್​ ಗಳಿಸಿ, ಬಳಿಕ ಸೂಪರ್​ ಓವರ್​​ನಲ್ಲಿ ಕೊಹ್ಲಿ ಪಡೆ ಗೆದ್ದಿದೆ.

    ಕಳೆದ ಮ್ಯಾಚ್​​ನಲ್ಲಿ ಪಂಜಾಬ್​ ವಿರುದ್ಧ ಹೀನಾಯ ಸೋಲು ಕಂಡಿದ್ದ ಆರ್​ಸಿಬಿ ನಿನ್ನೆನ ಪಂದ್ಯದಲ್ಲಿ ಗೆದ್ದು ಬೀಗಿದೆ. ನಿನ್ನೆ ಆರ್​ಸಿಬಿ ವಿನ್​ ಆಗುತ್ತಿದ್ದಂತೆ ನಟಿ, ಕಿಂಗ್ಸ್​ ಇಲೆವೆನ್​ ತಂಡದ ಒಡತಿ ಪ್ರೀತಿ ಜಿಂಟಾ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ, ಆರ್​ಸಿಬಿ ಮತ್ತು ಕೊಹ್ಲಿಯ ಟೀಕಾಕಾರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ.
    ನಿನ್ನೆ ಸೂಪರ್​ ಓವರ್​​ನಲ್ಲಿ ಮುಂಬೈ ತಂಡ 7 ರನ್​​ಗಳನ್ನಷ್ಟೇ ಗಳಿಸಿತ್ತು. ಅದಕ್ಕೆ ಪ್ರತಿಯಾಗಿ ಆರ್​ಸಿಬಿಯ ಕ್ಯಾಪ್ಟನ್​ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಜೋಡಿ 11 ರನ್​ ಬಾರಿಸಿ ಮ್ಯಾಚ್​ ತಮ್ಮದಾಗಿಸಿಕೊಂಡರು. ಅದರಲ್ಲೂ ಕೊಹ್ಲಿ ಕೊನೇ ಬಾಲ್​​ನ್ನು ಬೌಂಡರಿಗೆ ಅಟ್ಟಿ, ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದನ್ನೂ ಓದಿ: ಶಾಲೆ ಪ್ರಾರಂಭವಾಗುವುದು ತಡವಾದಷ್ಟೂ ಬಾಲ್ಯ ವಿವಾಹಗಳು ಹೆಚ್ಚಾಗುತ್ತವೆ…!

    ಅದಾದ ಬಳಿಕ ಟ್ವೀಟ್​ ಮಾಡಿದ ಪ್ರೀತಿ ಜಿಂಟಾ, ಇದೊಂದು ಥ್ರಿಲ್​ ತಂದುಕೊಟ್ಟ ಸೂಪರ್​ ಓವರ್​ ಪಂದ್ಯ. ಎರಡೂ ತಂಡಗಳೂ ತುಂಬ ಉತ್ತಮವಾಗಿ ಆಟ ಆಡಿವೆ. ಮುಂಬೈನಲ್ಲಿ ಇಶಾನ್ ಕಿಶಾನ್ ಅತ್ಯುತ್ತಮ ಆಟವಾಡಿದರು. ಆದರೆ ಅವರ ಪಾಲಿಗೆ ಗೆಲುವು ಸಿಗಲಿಲ್ಲ. ಜಯ ಗಳಿಸಿದ ಆರ್​ಸಿಬಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೇ ವಿರಾಟ್ ಕೊಹ್ಲಿಯ ಟೀಕಾಕಾರರಿಗೂ ಅಭಿನಂದನೆಗಳು. ಯಾಕೆಂದರೆ ಕೊನೇ ಒಂದು ಬಾಲ್​ 4 ರನ್​ ಗೆದ್ದುಕೊಟ್ಟಿತು. ಅದೇ ಪಂದ್ಯ ಗೆಲ್ಲಲೂ ಕಾರಣವಾಯಿತು. ಫಾರ್ಮ್​​ ತಾತ್ಕಾಲಿಕ..ಆದರೆ ಕ್ಲಾಸ್​ ಎಂಬುದು ಶಾಶ್ವತ. ಹಾಗಾಗಿ ಎಲ್ಲರೂ ಶಾಂತ, ಸಮಾಧಾನವಾಗಿರಿ ಎಂದು ಹೇಳಿದ್ದಾರೆ.

    ಕಳೆದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿಗೆ ಆಹಾರವಾಗಿದ್ದ ವಿರಾಟ್​ ಕೊಹ್ಲಿಯಿಂದಲೇ ಈ ಪಂದ್ಯ ಆರ್​ಸಿಬಿಗೆ ಒಲಿಯಿತು. ಈಗ ಅದನ್ನೇ ಪ್ರೀತಿ ಜಿಂಟಾ ಕೂಡ ಹೇಳಿದ್ದಾರೆ. (ಏಜೆನ್ಸೀಸ್​)

    ಮುಂಬೈ ವಿರುದ್ಧ ‘ಸೂಪರ್​’ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts