More

    ಹಾಸನ ಟಿಕೆಟ್​ ದಂಗಲ್​​; ಮತ್ತೊಬ್ಬ ಆಕಾಂಕ್ಷಿ ಮುನ್ನೆಲೆಗೆ

    ಬೆಂಗಳೂರು: ಜೆಡಿಎಸ್​ ಪಾಳಯದಲ್ಲಿ ತೀವ್ರ ತಲೆನೋವಾಗಿ ಪರಿಣಮಿಸಿರುವ ಹಾಸನ ಟಿಕೆಟ್​ ದಂಗಲ್​ಗೆ ಈಗ ಮತ್ತೊಂದು ಹೆಸರು ಸೇರ್ಪಡೆಯಾಗಿದ್ದು ಪ್ರಸಾದ್​ ಗೌಡ ಎಂಬುವವರು ತಮ್ಮಗೂ ಒಂದು ಅವಕಾಶ ಕೊಡಿ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

    ಜೆಪಿ ಭವನದಲ್ಲಿ ಈ ಕುರಿತು ಮಾತನಾಡಿರುವ ಪ್ರಸಾದ್​ ಗೌಡ ನಾನು ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಕೋವಿಡ್​ ಸಂದರ್ಭದಲ್ಲಿ ಜನತೆಯ ಜೊತೆ ಇದ್ದೇನೆ ನಾನು ಕೂಡ ಹಾಸನ ವಿಧಾನಸಭಾ ಕ್ಷೇಥ್ರದ ಟಿಕೆಟ್​ ಆಕಾಂಕ್ಷಿ ಎಂದು ಹೇಳಿದ್ದಾರೆ.

    ಹಾಸನ ಟಿಕೆಟ್​ ದಂಗಲ್​​; ಮತ್ತೊಬ್ಬ ಆಕಾಂಕ್ಷಿ ಮುನ್ನೆಲೆಗೆ

    ಭವಾನಿ ರೇವಣ್ಣ ಹಾಗೂ ಸ್ವರೂಪ್​ ಗೌಡ ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ. ಮೂಲತಃ ನಾನು ಮುಳ್ಳು ಒಕ್ಕಲಿಗ ನನ್ನ ಪತ್ನಿ ದಾಸ ಒಕ್ಕಲಿಗ ನಮ್ಮ ಕುಟುಂಬದಲ್ಲಿ ಎರಡು ಪಂಗಡಗಳಿವೆ ಸಮುದಾಯದ ಬೆಂಬಲ ನನಗಿದೆ ಎಂದು ತಿಳಿಸಿದ್ದಾರೆ

    ಸ್ವರೂಪ್​ ವಿರುದ್ದ ಹಾಸನದಲ್ಲಿ ಮೊದಲು ಧ್ವನಿ ಎತ್ತಿದವನು ನಾನು. ಟಿಕೆಟ್​ ವಿಚಾರವಾಗಿ ಈಗಾಗಲೇ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ರೇವಣ್ಣ ಅವರ ಜೊತೆಗೆ ಚರ್ಚಿಸಿದ್ದೇನೆ ವರಿಷ್ಠರು ಭರವಸೆ ನೀಡಿದ್ದಾರೆ ಪಕ್ಷ ಅವಕಾಶ ಕೊಟ್ಟರೆ ಪ್ರೀತಂ ಗೌಡರನ್ನ ಮಣಿಸೋದು ಶತಃಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರಾಹುಲ್​ ಗಾಂಧಿ ಅವರ ಪ್ರಶ್ನೆಗಳಿಗೆ ಉತ್ತರಿಸಲು ಮೋದಿಗೆ ಭಯವೇ?: ಸಿದ್ದರಾಮಯ್ಯ ಪ್ರಶ್ನೆ

    ಇದನ್ನೂ ಓದಿ: ಮೋದಿ ಬಳಿಕ ಗೌಡ ವಿವಾದ: ‘ಗೌಡ’ರನ್ನು ಅವಮಾನಿಸಿದ್ದಾರೆ ಎಂದು ಪ್ರಶಾಂತ್ ಸಂಬರಗಿ ವಿರುದ್ಧ ಪೊಲೀಸರಿಗೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts