ಬೆಂಗಳೂರು: ಅಯೋಧ್ಯೆಯಲ್ಲಿನ ಸುದೀರ್ಘ ವಿವಾದ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು, ಅದಕ್ಕಾಗಿ ಟ್ರಸ್ಟ್ ನಿರ್ಮಿಸಿ, ಯೋಜನೆಗಳನ್ನು ರೂಪಿಸಿರುವುದು ಈಗ ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯವೇ.
ಇತ್ತೀಚಿನ ಬೆಳವಣಿಗೆ ಎಂದರೆ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದಲೂ ದೇಣಿಗೆ ಸಂಗ್ರಹಿಸುತ್ತಿರುವುದು. ಆ ನಿಟ್ಟಿನಲ್ಲಿ ವಿಶ್ವಹಿಂದೂಪರಿಷತ್ ಕೂಡ ಕಾರ್ಯನಿರತವಾಗಿದೆ. ಮಾತ್ರವಲ್ಲ ಶ್ರೀರಾಮಮಂದಿರಕ್ಕಾಗಿ ನಿಧಿ ಸರ್ಮಪಣೆ ಎಂಬ ಅಭಿಯಾನ ನಡೆಯುತ್ತಿದ್ದು, ಈಗಾಗಲೇ ಹಲವರು ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ತಮ್ಮ ಕೈಲಾದ ನೆರವು ನೀಡಲಾರಂಭಿಸಿದ್ದಾರೆ.
ಈಗ ನಟಿ ಪ್ರಣೀತಾ ಸುಭಾಷ್ ಶ್ರೀರಾಮಮಂದಿರಕ್ಕಾಗಿ ನಿಧಿ ಸರ್ಮಪಣೆ ಮಾಡಿರುವುದಲ್ಲದೆ, ಇತರರೂ ನಿಧಿ ಸಮರ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನಾನು ಅಯೋಧ್ಯೆಯ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ, ರಾಮ ಮಂದಿರ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ 1 ಲಕ್ಷ ರೂ. ನೀಡಿದ್ದೇನೆ. ಶ್ರೀರಾಮ ಮಂದಿರ ನಿರ್ಮಾಣದಂಥ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೂ ನಿಧಿ ಸಮರ್ಪಿಸುವ ಮೂಲಕ ಕೈಜೋಡಿಸಬೇಕು ಎಂದು ಪ್ರಣೀತಾ ಕೋರಿಕೊಂಡಿದ್ದಾರೆ.
I’m making a humble initial pledge of Rs 1 lakh for the Ayodhya Ram Mandir nidhi samarpana abhiyaana. Requesting all of you to come join hands and be a part of this historic movement #RamMandirNidhiSamarpan pic.twitter.com/1mpTGan9q8
— Pranitha Subhash (@pranitasubhash) January 12, 2021
ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ಚಿನ್ನದ ಪದಕ ಪಡೆದಿದ್ದ ಸ್ವಾಮಿ ಹರ್ಷಾನಂದ
ಹಿಂದು ಧರ್ಮ ಕುರಿತ ವಿಶ್ವಕೋಶದ ಸಂಕಲ್ಪ ಕೈಗೊಂಡಿದ್ದ ಸ್ವಾಮಿ ಹರ್ಷಾನಂದ