ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಚಿನ್ನದ ಪದಕ ಪಡೆದಿದ್ದ ಸ್ವಾಮಿ ಹರ್ಷಾನಂದ

ಬೆಂಗಳೂರು: ಮಂಗಳವಾರ ಬೆಂಗಳೂರಿನಲ್ಲಿ ವಿಧಿವಶರಾದ ಸ್ವಾಮಿ ಹರ್ಷಾನಂದಜೀ ಮಹಾರಾಜ್ (1930-2021), ರಾಮಕೃಷ್ಣ ಮಹಾಸಂಘದ ಹಿರಿಯ ಯತಿಗಳಲ್ಲಿ ಒಬ್ಬರು. ಮಹಾಸಂಘದ ಆರನೇ ಅಧ್ಯಕ್ಷರಾದ ಹಾಗೂ ಸ್ವಾಮಿ ವಿವೇಕಾನಂದರ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ವಿರಜಾನಂದಜಿ ಮಹಾರಾಜ್ ಇವರಿಂದ ಮಂತ್ರ ದೀಕ್ಷೆಯನ್ನು ಪಡೆದವರು. ಮೆಕಾನಿಕಲ್ ಇಂಜಿನಿಯರ್ ಪದವಿಯನ್ನು ಚಿನ್ನದ ಪದಕದೊಡನೆ ಮುಗಿಸಿ, 1954ನೇ ಇಸವಿಯಲ್ಲಿ ರಾಮಕೃಷ್ಣ ಮಠ, ಬಸವನ ಗುಡಿ, ಬೆಂಗಳೂರು ಶಾಖೆಯಲ್ಲಿ ಆಧ್ಯಾತ್ಮ ಜೀವನವನ್ನು ಪ್ರಾರಂಭಿಸಿದರು. 1962ನೇ ಇಸವಿಯಲ್ಲಿ ಅಂದಿನ ರಾಮಕೃಷ್ಣ ಮಹಾಸಂಘದ ಎಂಟನೇ ಅಧ್ಯಕ್ಷರಾಗಿದ್ದ, ಸ್ವಾಮಿ ವಿಶುದ್ಧಾನಂದಜಿ ಮಹಾರಾಜ್ ಅವರಿಂದ … Continue reading ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಚಿನ್ನದ ಪದಕ ಪಡೆದಿದ್ದ ಸ್ವಾಮಿ ಹರ್ಷಾನಂದ