More

    ಅರ್ಜುನ್ ಗೌಡ ಚಿತ್ರದಲ್ಲಿ ರಾಮುಗೆ ಶ್ರದ್ಧಾಂಜಲಿ; ಡಿ.31ಕ್ಕೆ ರಾಜ್ಯಾದ್ಯಂತ ಬಿಡುಗಡೆ

    ಬೆಂಗಳೂರು: ‘ಅವರು ನಿರ್ಮಾಣ ಶುರುಮಾಡಿದ್ದು ತಂದೆ ಜತೆಗೆ, ಅವರ ಕೊನೆಯ ಚಿತ್ರ ನನ್ನ ಜತೆಗೆ …’

    – ಹೀಗೆ ಸ್ವಲ್ಪ ಬೇಸರದಿಂದಲೇ ಹೇಳಿಕೊಂಡರು ಪ್ರಜ್ವಲ್ ದೇವರಾಜ್. ಅವರು ಹೀಗೆ ಹೇಳಿದ್ದು ದಿವಂಗತ ನಿರ್ಮಾಪಕ ರಾಮು ಕುರಿತು. ರಾಮು ನಿರ್ವಣದಲ್ಲಿ ಪ್ರಜ್ವಲ್ ಅಭಿನಯಿಸಿರುವ ‘ಅರ್ಜುನ್ ಗೌಡ’ ಚಿತ್ರವು ಡಿ. 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂಬಂಧ ಚಿತ್ರತಂಡದವರು ಚಿತ್ರದ ಕುರಿತು ಹಲವು ವಿಷಯಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ.

    ‘ಸಿನಿಮಾ ನೋಡಿದಾಗ ಇದು ನಾನು ಮಾಡಿದ ಸಿನಿಮಾನ ಅನಿಸಿತ್ತು. ಚಿತ್ರೀಕರಣದಲ್ಲಿ ಆಗಿದ್ದೇ ಬೇರೆ. ಎಡಿಟಿಂಗ್ ಟೇಬಲ್​ನಲ್ಲಿ ಶಂಕರ್ ಬೇರೆ ತರಹ ಮಾಡಿದ್ದಾರೆ. ರಾಮು ಅವರು ಈ ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಚಿತ್ರದ ನಂತರ ಯಾರಿಗೂ ಡೇಟ್ ಕೊಡಬೇಡಿ. ನಾವು ಒಟ್ಟಿಗೆ ಇನ್ನಷ್ಟು ಸಿನಿಮಾ ಮಾಡೋಣ ಅಂತ ಹೇಳಿದ್ದರು. ಆದರೆ, ಇಂದು ಅವರಿಲ್ಲ. ನಾನು ರಾಮು ಅವರ ಬ್ಯಾನರ್ ಜತೆಗೆ ಖಂಡಿತಾ ಇರುತ್ತೇನೆ. ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುತ್ತೇವೆ’ ಎನ್ನುತ್ತಾರೆ ಪ್ರಜ್ವಲ್.

    ಈ ಚಿತ್ರವನ್ನು ಮಾಲಾಶ್ರೀ ಅವರೇ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನುವ ಪ್ರಜ್ವಲ್, ‘ನಾನು ಮತ್ತು ಮಾಲಾಶ್ರೀ ಅವರು ಒಟ್ಟಿಗೇ ಸಿನಿಮಾ ನೋಡಿದೆವು. ಸಿನಿಮಾ ಕೊನೆಯಲ್ಲಿ ರಾಮು ಅವರಿಗೆ ಐದು ನಿಮಿಷಗಳ ಒಂದು ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಅದನ್ನು ನೋಡಿದರೆ ಎಲ್ಲರೂ ಎಮೋಷನಲ್ ಆಗುತ್ತಾರೆ. ಅವರ ಮಕ್ಕಳು ಸಹ ಇದ್ದರು. ಮಾಲಾಶ್ರೀ ಅವರ ಕಣ್ಣಲ್ಲಿ ನೀರಿತ್ತು. ಜತೆಗೆ ಒಳ್ಳೆಯ ಸಿನಿಮಾ ಮಾಡಿದ ಖುಷಿಯೂ ಇತ್ತು. ಅವರೇ ಈಗ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ಖಂಡಿತವಾಗಿಯೂ ಮಾಲಾಶ್ರೀ ಅವರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಪ್ರಜ್ವಲ್.

    ಈ ಚಿತ್ರ ರಾಮು ಅವರ ಕೊನೆಯ ಚಿತ್ರವಾಗಬಹುದು ಎಂದು ನಿರೀಕ್ಷಿಸಿರಲಿಲ್ಲ ಎನ್ನುವ ಪ್ರಿಯಾಂಕಾ, ‘ರಾಮು ನಿರ್ವಣದ ಚಿತ್ರಗಳಲ್ಲಿ ಅವಕಾಶ ಸಿಗುವುದು ಸಾಮಾನ್ಯ ಅಲ್ಲ. ಅಂಥದ್ದೊಂದು ಅವಕಾಶ ನನಗೂ ಸಿಕ್ಕಿದೆ. ಅವರ ಬ್ಯಾನರ್​ನಲ್ಲಿ ಅವಕಾಶಗಳು ಸಿಕ್ಕರೆ ಖಂಡಿತಾ ಮಾಡುತ್ತೀನಿ’ ಎನ್ನುತ್ತಾರೆ. ಅರ್ಜುನ್ ಗೌಡ’ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದು, ಧರ್ಮ ವಿಶ್ ಸಂಗೀತ ಸಂಯೋಜಿಸಿದ್ದಾರೆ.

    ಮೂರು ವರ್ಷದ ಅವಳಿ ಮಕ್ಕಳ ಸಾವಿನ ಬೆನ್ನಿಗೆ ತಾಯಿಯೂ ನಿಧನ; ತಂದೆ ಇನ್ನೂ ಆಸ್ಪತ್ರೆಯಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts