ಸ್ನಾನಕ್ಕೆ ಹೋಗಿದ್ದವನನ್ನು ಹಾಗೇ ಠಾಣೆಗೆ ಕರೆದೊಯ್ದ ಪೊಲೀಸರು; ಪಕ್ಕದ ಮನೆಯವರ ಜತೆ ಜಗಳವಾಡಿದ್ದ ರೌಡಿಶೀಟರ್​ ಮರ್ಯಾದೆ ಬೀದಿಪಾಲು

ಚಿತ್ರದುರ್ಗ: ಪಕ್ಕದ ಮನೆಯವರ ಜತೆ ಜಗಳವಾಡಿದ್ದ ವ್ಯಕ್ತಿಯ ಮರ್ಯಾದೆ ಬೀದಿಪಾಲಾಗಿದೆ. ಏಕೆಂದರೆ ಆತ ಸ್ನಾನಕ್ಕೆ ಹೋಗಿದ್ದರೂ ಹಾಗೇ ರಸ್ತೆಯಲ್ಲಿ ನಡೆಸಿಕೊಂಡು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಕೋಟೆನಾಡು ಚಿತ್ರದುರ್ಗದಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ವೇಣುಗೋಪಾಲ ಎಂಬಾತ ಪಕ್ಕದ ಮನೆಯವರ ಜತೆ ಜಗಳವಾಡಿದ್ದಕ್ಕೇ ಇಷ್ಟೆಲ್ಲ ರಾದ್ಧಾಂತವಾಗಿದೆ. ವಿಗ್ರಹ ವ್ಯಾಪಾರಿ ಆಗಿರುವ ಈತ ರೌಡಿಶೀಟರ್ ಕೂಡ ಆಗಿರುತ್ತಾನೆ. ಇದನ್ನೂ ಓದಿ: ಉಡುಪಿಗೂ ಪ್ರವೇಶಿಸಿದ ಒಮಿಕ್ರಾನ್​; ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ರೂಪಾಂತರಿ ಸೋಂಕು.. ಪಕ್ಕದ ಮನೆಯವರ … Continue reading ಸ್ನಾನಕ್ಕೆ ಹೋಗಿದ್ದವನನ್ನು ಹಾಗೇ ಠಾಣೆಗೆ ಕರೆದೊಯ್ದ ಪೊಲೀಸರು; ಪಕ್ಕದ ಮನೆಯವರ ಜತೆ ಜಗಳವಾಡಿದ್ದ ರೌಡಿಶೀಟರ್​ ಮರ್ಯಾದೆ ಬೀದಿಪಾಲು