ಧಾರವಾಡ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು 10 ನಿಮಿಷ ಧ್ಯಾನ ಮಾಡಬೇಕಿರುವುದು ಕಡ್ಡಾಯ ಎಂಬ ಸುತ್ತೋಲೆ ಹೊರಡಿಸಿದ ನಂತರದ ಬೆಳವಣಿಗೆಗಳು, ದಿನಕ್ಕೊಂದು ತಿರುವು ಪಡೆಯತೊಡಗಿವೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ಗಳ ಮೂಲಕ ಧ್ಯಾನಕ್ಕಿಂತ ಶಿಕ್ಷಣ ಮುಖ್ಯ ಎಂದು ಸಚಿವ ಬಿ.ಸಿ. ನಾಗೇಶ್ರ ನಡೆಯನ್ನು ಎರಡು ದಿನಗಳ ಹಿಂದೆ ಟೀಕಿಸಿದ್ದರು. ಹೀಗೆ ಧ್ಯಾನ ಕುರಿತ ಪರ-ವಿರೋಧದ ಚರ್ಚೆಗಳ ನಡುವೆ, ಇದೀಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ಗೆ ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್ನವರು ದುಡ್ಡು, ಅಧಿಕಾರ ಮತ್ತು ಭ್ರಷ್ಟಾಚಾರದ ಧ್ಯಾನ ಮಾಡುತ್ತಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ, ಇಟಲಿ ಧ್ಯಾನ ಮಾತ್ರ ಮಾಡುತ್ತಾರೆ ಕಾಂಗ್ರೆಸ್ನವರು ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಭಗವದ್ಗೀತೆಯನ್ನೂ ವಿರೋಧಿಸುತ್ತದೆ, ತ್ರಿವಳಿ ತಲಾಖ್ ಆದೇಶ ಸಹ ತಿರುವು-ಮುರುವು ಮಾಡಿದ್ದರು, ಯೋಗಕ್ಕೂ ಕಾಂಗ್ರೆಸ್ ವಿರೋಧವಿತ್ತು, ಮಕ್ಕಳಲ್ಲಿ ಏಕಾಗ್ರತೆ ಬೆಳೆಸಲು ಮಾತ್ರ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಧ್ಯಾನದಿಂದ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುವುದೇ ಹಾಸ್ಯಾಸ್ಪದ; ಸಿದ್ದು ಟ್ವೀಟ್ಗೆ ಶಿಕ್ಷಣ ಸಚಿವರ ತಿರುಗೇಟು
ಶಾಲಾ ಮಕ್ಕಳಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗೆ ಯೋಗ, ಧ್ಯಾನದ ಅವಶ್ಯಕತೆಯಿದೆ ಎಂದ ಸಿದ್ದರಾಮಯ್ಯ…