ತುಮಕೂರು: ಕರೊನಾ ಸೋಂಕಿನ ಅಬ್ಬರ ಮುಂದುವರಿಯುತ್ತಲೇ ಇದೆ. ಜನರು ಅನವಶ್ಯಕವಾಗಿ ತಿರುಗಾಡದೆ ಸೋಂಕಿನ ನಿಯಂತ್ರಣಕ್ಕೆ ಸಹಕರಿಸಿ ಎಂದು ಸರ್ಕಾರ ಜನರಲ್ಲಿ ಮನವಿ ಮಾಡುತ್ತಲೇ ಇದೆ. ಆದರೆ ಮಾತು ಕೇಳದ ಜನರು ಏನೇನೋ ಮೂಢನಂಬಿಕೆಗಳ ಬಲೆಗೆ ಬಿದ್ದು ಸೋಂಕು ಹೆಚ್ಚಾಗುವಲ್ಲಿ ಪ್ರಮುಖ ಕಾರಣವಾಗಿ ಹೊರಹೊಮ್ಮುತ್ತಿದ್ದಾರೆ.
ಈಗಾಗಲೇ ಅನೇಕ ಊರುಗಳಲ್ಲಿ ಕರೊನಾ ಹೋಗಲಾಡಿಸುವ ಸಲುವಾಗಿ ಚಿತ್ರ ವಿಚಿತ್ರ ಪೂಜೆಗಳನ್ನು ಮಾಡಿರುವ ಸುದ್ದಿಗಳು ಹರಿದಾಡಿದೆ. ಇದೀಗ ಅದೇ ರೀತಿ ತುಮಕೂರು ಜಿಲ್ಲೆಯ ಪಾವಗಡದ ಕೆ.ರಾಮಪುರದಲ್ಲೂ ನಡೆದಿದೆ. ಜನರು 101 ಬಿಂದಿಗೆ ಮತ್ತು 101 ನಿಂಬೆಹಣ್ಣುಗಳನ್ನಿಟ್ಟು ಪೂಜೆ ಮಾಡಿ, ಕರೊನಾ ಹೋಗಿಸುವ ಪ್ರಯತ್ನ ಮಾಡಿದ್ದಾರೆ.
ಕರೊನಾವನ್ನು ದೂರ ಕಳಿಸೋಕೆ ಗುಂಪು ಕಟ್ಟಿಕೊಂಡು ಪೂಜೆ ಮಾಡಿದ ಗ್ರಾಮಸ್ಥರು!
— Vijayavani (@VVani4U) May 25, 2021
ವಿವರಗಳಿಗೆ https://t.co/JCps2efeGV ನೋಡಿ pic.twitter.com/hHHcY9Bvau
ತಮ್ಮ ಗ್ರಾಮಕ್ಕೆ ಕರೊನಾ ಬರಬಾರದು ಎಂದು ಕೆ.ರಾಮಪುರ ಗ್ರಾಮಸ್ಥರು ಹನುಮನಬೆಟ್ಟದ ಅಕ್ಕಮ್ಮ ಗಾರ್ಲುದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕೆ ನೀರು ತಂದು ಮನೆಗೆ ಚಲ್ಲಿದರೆ ಕರೊನಾ ಹೋಗುತ್ತದೆ ಎಂದು ನಂಬಿರುವ ಜನರು, 101 ಬಿಂದಿಗೆ ನೀರು ಹಾಗೂ 101 ನಿಂಬೆಹಣ್ಣಿಟ್ಟು ಪೂಜಿಸಿ ಅದನ್ನು ಮನೆಗೆ ತಂದು ಚೆಲ್ಲಿದ್ದಾರೆ. ಈ ರೀತಿ ಪೂಜೆ ಮಾಡುವಾಗ ಯಾರೊಬ್ಬರೂ ಮಾಸ್ಕ್ ಅನ್ನು ತೊಟ್ಟಿಲ್ಲ. ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿಲ್ಲ ಎನ್ನುವುದನ್ನು ವಿಡಿಯೋದಲ್ಲಿ ಗಮನಿಸಬಹುದು.
ಕರೊನಾ ರೂಲ್ಸ್ ಬ್ರೇಕ್ ಮಾಡಿ ಮದುವೆ; ಅಧಿಕಾರಿಗಳನ್ನು ನೋಡುತ್ತಿದ್ದಂತೆ ವಧುವನ್ನು ಬಿಟ್ಟು ಕಾಲ್ಕಿತ್ತ ವರ!
ಅಶ್ಲೀಲ ಸಿಡಿ ಕೇಸ್ಗೆ ಬಿಗ್ ಟ್ವಿಸ್ಟ್! ವಿಡಿಯೋದಲ್ಲಿ ಇರುವುದು ನಾನೇ, ಸಹಮತದಿಂದ ಒಟ್ಟಿಗೆ ಇದ್ದೆವೆಂದ ಜಾರಕಿಹೊಳಿ
ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ