More

    ಸಂಹಾರಕ್ಕೆ ಸಜ್ಜಾದ ಸಂಹಾರಿಣಿ; ಮೂರು ವರ್ಷಗಳ ನಂತರ ಪೂಜಾ ಗಾಂಧಿ ರಿ-ಎಂಟ್ರಿ

    ಬೆಂಗಳೂರು: 2017ರಲ್ಲಿ ಬಿಡುಗಡೆ ಆದ ‘ದಂಡುಪಾಳ್ಯ 2’ ಸಿನಿಮಾದ ಬಳಿಕ ಕಾಣಿಸಿಕೊಳ್ಳದ ಮಳೆ ಹುಡುಗಿ ಪೂಜಾ ಗಾಂಧಿ, ಇದೀಗ ಸಂಹಾರಕ್ಕೆ ಸಜ್ಜಾಗಿದ್ದಾರೆ. ಅವರೀಗ ‘ಸಂಹಾರಿಣಿ’ ಎಂಬ ಕ್ರೖೆಂ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರವು ಏಪ್ರಿಲ್​ನಲ್ಲಿ ತೆರೆಗೆ ಬರಲು ತಯಾರಿ ನಡೆಸಿದೆ.

    ವಿನೋದ್ ನಿರ್ವಣದ ಕೆ. ಜಾವಹರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಕೋವಿಡ್​ನಿಂದಾಗಿ ಬಿಡುಗಡೆ ಸಾಧ್ಯವಾಗಲಿಲ್ಲ. ಇದೀಗ ಎಲ್ಲವೂ ಮೊದಲಿನ ಲಯಕ್ಕೆ ಮರಳುತ್ತಿರುವುದರಿಂದ ಏಪ್ರಿಲ್​ಗೆ ಬರುವುದಾಗಿ ಘೋಷಣೆ ಮಾಡಿದ್ದಾರೆ ನಿರ್ವಪಕರು. ಮೊದಲ ಬಾರಿ ನಾಯಕಿ ಪ್ರಧಾನ ಸಿನಿಮಾದಲ್ಲಿ ನಟಿಸಿರುವ ಪೂಜಾ, ಆ ಬಗ್ಗೆಯೂ ಮಾತನಾಡಿದ್ದಾರೆ. ‘‘ದಂಡುಪಾಳ್ಯ ಸಿನಿಮಾ ಬಳಿಕ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಆದರೆ, ಯಾವುದೂ ಅಷ್ಟಾಗಿ ಇಷ್ಟವಾಗಿರಲಿಲ್ಲ. ಆ ಹೊತ್ತಲ್ಲಿ ‘ಸಂಹಾರಿಣಿ’ ಸಿನಿಮಾ ಸಿಕ್ಕಿತು. ತುಂಬ ಪವರ್​ಫುಲ್ ಪಾತ್ರ. ರಿಯಾಲಿಟಿಗೆ ಹತ್ತಿರವಾಗಿದೆ. ಸಮಾಜದೊಳಗಿನ ತಪು್ಪ ತಿದ್ದಲು ನಾಯಕಿ ಮುಂದಾದಾಗ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ? ಆ ಸಮಸ್ಯೆಯ ವಿರುದ್ಧ ನಾಯಕಿಯ ಹೋರಾಟ ಹೇಗಿರುತ್ತದೆ ಎಂಬುದೇ ಸಿನಿಮಾ. ಇದೊಂದು ಸೇಡಿನ ಕಥೆ. ನಾಲ್ಕು ಫೈಟ್​ಗಳನ್ನೂ ನನ್ನಿಂದ ಮಾಡಿಸಿದ್ದಾರೆ’ ಎಂಬುದು ಪೂಜಾ ಮಾತು. ಇನ್ನು ‘ಸಂಹಾರಿಣಿ’ಯಲ್ಲಿ ಮಾಸ್ ಅವತಾರದಲ್ಲಿ ಪೂಜಾ ಎದುರಾಗಿದ್ದಾರೆ. ಆ ಬಗ್ಗೆ ಮಾತನಾಡುವ ಅವರು, ‘ಆಕ್ಷನ್ ಸಿನಿಮಾ ಅಂತ ಬಂದರೆ, ಮೊದಲಿಗೆ ಕಾಣಿಸುವುದು ಮಾಲಾಶ್ರೀ. ಅವರ ಆಕ್ಷನ್ ಚಿತ್ರಗಳನ್ನು ನೋಡಿದ್ದೇನೆ. ನನ್ನ ಈ ‘ಸಂಹಾರಿಣಿ’ಯ ಚಿತ್ರಕ್ಕೂ ಮಾಲಾಶ್ರೀ ಅವರೇ ಸ್ಪೂರ್ತಿ’ ಎಂದಿದ್ದಾರೆ ಪೂಜಾ. ಇನ್ನು ಪಾತ್ರವರ್ಗದಲ್ಲಿ ಪೂಜಾ ಜತೆಗೆ, ಕಿಶೋರ್, ರವಿ ಕಾಳೆ, ರಾಹುಲ್ ದೇವ್ ನಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts