ರಾಮನಗರ: ನೀರಿನ ಸಂಪಿಗೆ ಬಿದ್ದು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ರವಿ ಬಿರಾದಾರ್(30) ಮೃತ ಕಾನ್ಸ್ಟೇಬಲ್. ಬಿಜಾಪುರ ಮೂಲದ ರವಿ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದರು. ಇದೀಗ ಗ್ರಾಮಾಂತರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಪೊಲೀಸ್ ವಸತಿಗೃಹದ ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: VIDEO| ಏಲಿಯನ್ ರೀತಿಯ ಮೇಕೆ: ಮೂಗಿಲ್ಲ ಆದ್ರೆ ಬಾಯಿಯೊಳಗಿದೆ ಕಣ್ಣು, ವಿಚಿತ್ರ ಹುಟ್ಟಿಗೆ ಕಾರಣವೇನು?
ರವಿ ಎರಡು ವರ್ಷದ ಹಿಂದಷ್ಟೆ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಮೊಬೈಲ್ ಕದ್ದ ಹುಡುಗಿಯನ್ನು ಪೊಲೀಸರಿಗೆ ಹಿಡಿದುಕೊಡಲು ಹೋದ; ಆಕೆಯ ಸ್ಥಿತಿಗೆ ಮರುಗಿ ಸಹಾಯ ಮಾಡಿ ಬಂದ