More

    ನಟ ಅಜಯ್​ ದೇವಗನ್​ ವಿರುದ್ಧ ಪೊಲೀಸ್​ಗೆ ದೂರು, ಹಿಂದೂಗಳ ಭಾವನೆಗೆ ಧಕ್ಕೆ ಆರೋಪ..

    ನವದೆಹಲಿ: ಬಾಲಿವುಡ್ ನಟರು ಆಗಾಗ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವುದು ಹೊಸದೇನಲ್ಲ. ಇದೀಗ ನಟರಾದ ಅಜಯ್ ದೇವಗನ್ ಹಾಗೂ ಸಿದ್ಧಾರ್ಥ್​ ಮಲ್ಹೋತ್ರ ಕೂಡ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದು, ಅವರ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.

    ಅಜಯ್​ ದೇವಗನ್ ಮತ್ತು ಸಿದ್ಧಾರ್ಥ್​ ಮಲ್ಹೋತ್ರ ಅಭಿನಯದ ನೂತನ ಸಿನಿಮಾ ‘ಥ್ಯಾಂಕ್​ ಗಾಡ್​’ನಲ್ಲಿ ಇವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ಮಾತ್ರವಲ್ಲ, ನಿರ್ಮಾಣ ಸಂಸ್ಥೆಯಾದ ಟಿ-ಸೀರಿಸ್ ವಿರುದ್ಧವೂ ದೂರು ನೀಡಲಾಗಿದೆ.

    ಸಿನಿಮಾದಲ್ಲಿ ಪುರಾಣ ಪುರುಷ ಚಿತ್ರಗುಪ್ತನ ಅಸಭ್ಯವಾಗಿ ಬಿಂಬಿಸಲಾಗಿದೆ. ಚಿತ್ರಗುಪ್ತನನ್ನು ಆಧುನಿಕ ಉಡುಪಿನಲ್ಲಿ ತೋರಿಸಿರುವುದಷ್ಟೇ ಅಲ್ಲದೆ, ಆತನನ್ನು ಅರೆಬೆತ್ತಲೆ ಮಹಿಳೆಯರು ಸುತ್ತುವರಿದಿರುವಂತೆ ಕೂಡ ಚಿತ್ರೀಕರಿಸಿರುವುದು ಟ್ರೇಲರ್​ನಲ್ಲಿ ಕಂಡುಬಂದಿದೆ ಎಂಬುದಾಗಿ ಕಾಯಸ್ಥ ಸಮಾಜದ ಪ್ರತಿನಿಧಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

    ಕಾಯಸ್ಥ ಸಮಾಜದ ಮುಖಂಡ, ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ್ ಸಕ್ಸೇನ ನಿಹಲ್​ಗಂಜ್​ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಯಸ್ಥ ಮಹಾಸಭಾದ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಸಂಜೀವ್ ಶ್ರೀವಾಸ್ತವ ಈ ಸಂಬಂಧವಾಗಿ ಡಿಸಿಗೆ ಮನವಿ ಕೂಡ ನೀಡಿದ್ದಾರೆ.

    ಚಿತ್ರಗುಪ್ತರನ್ನು ಅಸಭ್ಯವಾಗಿ ಚಿತ್ರಿಸಿರುವುದು ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವುದಷ್ಟೇ ಅಲ್ಲದೆ, ಸಾಮಾಜಿಕ ಸಾಮರಸ್ಯವನ್ನು ಕೆಡಿಸುವಂಥದ್ದು. ಹೀಗಾಗಿ ಈ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. – ಏಜೆನ್ಸೀಸ್

    ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್ ಬಿಲ್​​ಬೋರ್ಡ್​ನಲ್ಲಿ ಮಿಂಚಿದ ಮೊದಲ ಸ್ಯಾಂಡಲ್​ವುಡ್​ ನಟಿ ಈಕೆ..

    ಕಾಂಗ್ರೆಸಿಗರಿಗೆ ಕಾನೂನು ಸಂಕಷ್ಟ?; ಪೇಸಿಎಂ ಪೋಸ್ಟರ್​ನಲ್ಲಿ ಫೋಟೋ, ಕೋರ್ಟ್​ ಮೆಟ್ಟಿಲೇರಲಿರುವ ನಟ..

    ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts