ಉತ್ತರಪ್ರದೇಶ: ತಾಯಿಯೊಬ್ಬಳು ತನ್ನ ಹಿರಿಮಗನನ್ನು ಕಿರಿಯ ಮಗ ಹಾಗೂ ಇನ್ನೊಬ್ಬನ ಸಹಾಯದಿಂದ ಕೊಲೆ ಮಾಡಿದ ಪ್ರಕರಣವೊಂದು ನಡೆದಿದ್ದು, ಪೊಲೀಸರು ತಾಯಿ-ಮಗ ಇಬ್ಬರನ್ನೂ ಬಂಧಿಸಿದ್ದಾರೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ.
ತಾಯಿ ಕೃಷ್ಣಾದೇವಿ, ಮಗ ಅಭಿಷೇಕ ಬಂಧಿತ ಆರೋಪಿಗಳು. ಕೃಷ್ಣಾದೇವಿಯ ಸೊಸೆ ಅಂಜಲಿ ಎಂಬಾಕೆಯ ದೂರಿನ ಮೇರೆಗೆ ಉತ್ತರಪ್ರದೇಶದ ಮೋದಿ ನಗರದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅನುಜ್ ಕುಮಾರ್ ಅಲಿಯಾಸ್ ಸಮರ್ (27) ಕೊಲೆಗೀಡಾದ ಪುತ್ರ.
ತನ್ನ ಪತಿ ಅನುಜ್ ಜುಲೈ 18ರಿಂದ ಕಾಣೆಯಾಗಿದ್ದಾರೆ ಎಂದು ಅಂಜಲಿ ಜು. 21ರಂದು ಪೊಲೀಸರಿಗೆ ದೂರು ನೀಡಿದ್ದರು. ಆಗಸ್ಟ್ 3ರಂದು ಅನುಜ್ ಶವ ಮಂದಿರವೊಂದರ ಹಿಂಭಾಗದಲ್ಲಿ ಕಂಡಿರುವುದಾಗಿ ಅಂಜಲಿಯ ಸಹೋದರ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಈ ಮೇರೆಗೆ ತನಿಖೆಗಿಳಿದ ಪೊಲೀಸರಿಗೆ ತಮ್ಮ ಹಾಗೂ ತಾಯಿಯೇ ಕೊಲೆಗಾರರು ಎಂಬುದು ಗೊತ್ತಾಗಿದೆ. ಆ ಬಳಿಕ ಅಂಜಲಿ ತನ್ನ ಸೊಸೆ, ಗಂಡನ ತಮ್ಮನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ ದೇವೇಂದ್ರ ಎಂಬ ಇನ್ನೊಬ್ಬನ ಹೆಸರನ್ನೂ ಉಲ್ಲೇಖಿಸಿದ್ದಳು. ಅದರನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ನಂತರ ಪೊಲೀಸರು ಕೃಷ್ಣಾದೇವಿ, ಅಭಿಷೇಕ್ರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಿವರ ಬಹಿರಂಗಗೊಂಡಿದೆ. ದೇವೇಂದ್ರ ಎಂಬಾತನ ಜತೆ ಅನೈತಿಕ ಸಂಬಂಧ ಇದ್ದ ಬಗ್ಗೆ ಕೃಷ್ಣಾದೇವಿ ಬಾಯ್ಬಿಟ್ಟಿದ್ದಳು. ಈ ವಿಷಯ ಗೊತ್ತಾಗಿ ಹಿರಿಯ ಮಗ ಅನುಜ್ ಆಕ್ಷೇಪ ವ್ಯಕ್ತಪಡಿಸಿದ್ದ. ಆದರೆ ಪ್ರಿಯಕರನನ್ನು ಬಿಟ್ಟು ಬದುಕಲಾಗದ ಕೃಷ್ಣಾದೇವಿ, ತನ್ನ ಮಗ ಹಾಗೂ ಪ್ರಿಯಕರನ ಜತೆ ಸೇರಿ ಅನುಜ್ನನ್ನು ಉಸಿರುಗಟ್ಟಿಸಿ ಸಾಯಿಸಿ ದೇಗುಲವೊಂದರ ಹಿಂಭಾಗ ಶವ ಎಸೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣಾದೇವಿ ಮತ್ತು ಅಭಿಷೇಕ್ನನ್ನು ಪೊಲೀಸರು ಶುಕ್ರವಾರ ರಾಜ್ ಟಾಕೀಸ್ ಬಳಿ ಪತ್ತೆ ಹಚ್ಚಿ ಬಂಧಿಸಿದ್ದು, ಅವರನ್ನು ಜೈಲಿಗೆ ಕಳಿಸಿದ್ದಾರೆ. ದೇವೇಂದ್ರನ ಪತ್ತೆಗೆ ಬಲೆ ಬೀಸಿದ್ದು, ಹುಡುಕಾಟ ಮುಂದುವರಿಸಿದ್ದಾರೆ. ತಲೆಮರೆಸಿಕೊಂಡಿರುವ ದೇವೇಂದ್ರನನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ನಿಮ್ಮೂರಿಗೀಗ ಅವರಲ್ಲ, ಇವರೇ ಇನ್ಸ್ಪೆಕ್ಟರ್; 13 ಡಿವೈಎಸ್ಪಿಗಳೂ ಟ್ರಾನ್ಸ್ಫರ್..