ಮಸ್ಕಿ: ತಾಲೂಕಿನ ಹಸಮಕಲ್ ಗ್ರಾಮದ ಹಜರತ್ ಮಹ್ಮದ ಷರೀಫ್ ಖಾನ್ ಸಾಹೇಬ್ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಗಮವಾಗಿದೆ ಎಂದು ಮಸ್ಕಿ ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯ ಹೇಳಿದರು.
ಇದನ್ನೂ ಓದಿ: ನೃತ್ಯ ವಿಲಾಸ ಕಾರ್ಯಕ್ರಮ; ದಶಾವತಾರ ನೃತ್ಯ ರೂಪಕ
ಹಜರತ್ ಮಹ್ಮದ ಷರೀಫ್ ಖಾನ್ ಸಾಹೇಬ್ ಉರುಸ್ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಜಾತಿ ತಾರತಮ್ಯವಿಲ್ಲಾದೆ ಎಲ್ಲರೂ ಒಂದೇ ಎಂಬ ಭಾವ ಕಾಣಬಹುದಾಗಿದೆ ಎಂದರು.
ಉರುಸ್ ನಿಮಿತ್ತ ಗಂಧವನ್ನ ಸಂತೇಕೆಲ್ಲೂರಿನ ಘನಮಠೇಶ್ವರ ಮಠದಿಂದ ಹಾಗೂ ಗ್ರಾಮಸ್ಥ ಹೊಸಮನಿ ಖಾನ ಸಾಹೇಬರ ಮನೆಯಿಂದ ತರಲಾಯಿತು. ಗ್ರಾಮದ ಹೊರವಲಯ ಕಟ್ಟೆಯಿಂದ ದರ್ಗಾದವರೆಗೂ ಅದ್ದೂರಿಯಾಗಿ ಮೆರವಣಿಗೆ ಜರುಗಿತು. ಡೊಳ್ಳು ಕುಣಿತ, ಹಗಲು ವೇಷಗಾರರ ನೃತ್ಯ ಗಮನಸೆಳೆಯಿತು.