More

    ಪ್ರಧಾನಿ ನರೇಂದ್ರ ಮೋದಿಯವರು ಕ್ವಾರಂಟೈನ್​​ಗೆ ಒಳಗಾಗಲಿದ್ದಾರಾ?

    ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದ ಒಂದು ವಾರದ ಬಳಿಕ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​​ನ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್​ ದಾಸ್​ ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಭೂಮಿಪೂಜೆಯ ದಿನ ಗೋಪಾಲ ದಾಸ್​ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

    ಈಗ ಶಿವಸೇನೆ ಮುಖಂಡ ಸಂಜಯ್​ ರಾವತ್​ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕ್ವಾರಂಟೈನ್​​ಗೆ ಒಳಗಾಗಲಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗೋಶಾಲೆಗಳಿಗೆ 200 ಕೋಟಿ ರೂ.ಸಾಂತ್ವನ ನಿಧಿ ವಿತ್ತ ಸಚಿವರಿಗೆ ಪೇಜಾವರ ಶ್ರೀ ಪತ್ರ

    ಆಗಸ್ಟ್​ 5ರಂದು ನಡೆದ ಅಯೋಧ್ಯೆ ರಾಮಮಂದಿರ ಭೂಮಿಪೂಜೆಯಂದು ಟ್ರಸ್ಟ್​ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ ದಾಸ್​ ಅವರೂ ಪಾಲ್ಗೊಂಡಿದ್ದರು. ನಂತರ ಅವರಲ್ಲಿ ಕರೊನಾ ದೃಢಪಟ್ಟಿದೆ. ಅಂದು ಮೋದಿಯವರೂ ಸಹ ಗೋಪಾಲ್​ ದಾಸ್​ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದರು ಎಂದು ರಾವತ್​ ಹೇಳಿದ್ದಾರೆ.

    ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಬರೆದ ಲೇಖನದಲ್ಲಿ ಈ ವಿಚಾರವನ್ನು ಉಲ್ಲೇಖಿಸಿದ್ದಾರೆ. ರಾಮಮಂದಿರ ಭೂಮಿಪೂಜೆಯ ದಿನ ಇಬ್ಬರೂ ಒಂದೇ ವೇದಿಕೆಯಲ್ಲಿದ್ದರು. ಮಹಾಂತ ನೃತ್ಯ ಗೋಪಾಲದಾಸ್​ ಅವರು ಮಾಸ್ಕ್​ ಧರಿಸಿರಲಿಲ್ಲ. ಇದೇ ವೇದಿಕೆಯಲ್ಲಿ ಆರ್​ಎಸ್ಎಸ್​ ಮುಖಂಡ ಮೋಹನ್​ ಭಾಗವತ್​ ಕೂಡ ಇದ್ದರು. ಅಂದು ಮೋದಿಯವರು ಗೋಪಾಲದಾಸ್​ ಅವರ ಕೈಯನ್ನೂ ಹಿಡಿದುಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ ಪ್ರಧಾನಿಯವರೂ ಕ್ವಾರಂಟೈನ್​ಗೆ ಒಳಗಾಗಬೇಕಲ್ಲವೇ? ಆಗುತ್ತಾರಾ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​​)

    ಎಫ್‌ಐಆರ್‌ ದಾಖಲಿಸಿಕೊಳ್ಳಬೇಕೆಂದರೆ ಡಾನ್ಸ್‌ ಮಾಡು: ನೋವು ಬಿಚ್ಚಿಟ್ಟ 16ರ ಬಾಲಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts