ನವದೆಹಲಿ: ಕೊವಿಡ್-19 ರೋಗಿಗಳ ಚಿಕಿತ್ಸೆಗಾಗಿ ಮಾರ್ಚ್ನಲ್ಲಿಯೇ ರೈಲ್ವೆ ಬೋಗಿಗಳನ್ನು ಐಸೋಲೇಶನ್ ವಾರ್ಡ್ಗಳನ್ನಾಗಿ ಪರಿವರ್ತಿಸಲಾಗಿದೆ.
ಭಾರತೀಯ ರೈಲ್ವೆಯ ಒಟ್ಟು 17 ವಲಯಗಳಿಂದಲೂ ತಲಾ 10 ಬೋಗಿಗಳನ್ನು ಐಸೋಲೇಶನ್ ವಾರ್ಡ್ ಆಗಿ ಪರಿವರ್ತನೆ ಮಾಡಲಾಗಿತ್ತು. ಇದು ತುಂಬ ಒಳ್ಳೆಯ ಐಡಿಯಾ ಎಂದು ಕೂಡ ಮೆಚ್ಚುಗೆ ಪಡೆದಿತ್ತು.
ಹೀಗೆ ರೈಲ್ವೆ ಬೋಗಿಗಳನ್ನು ಐಸೋಲೇಶನ್ ವಾರ್ಡ್ ಆಗಿ ಪರಿವರ್ತನೆ ಮಾಡಲು ಐಡಿಯಾ ಕೊಟ್ಟಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದು ರೈಲ್ವೆ ಇಲಾಖೆ ಸಚಿವ ಪಿಯುಷ್ ಗೋಯೆಲ್ ತಿಳಿಸಿದ್ದಾರೆ. ಲಾಕ್ಡೌನ್ ಗೂ ಮುಂಚಿತವಾಗಿಯೇ ಈ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನ್ನ ಎದುರು ಇಟ್ಟಿದ್ದರು ಎಂದು ಹೇಳಿದ್ದಾರೆ.
ಲಾಕ್ಡೌನ್ಗೂ ಮುಂಚೆ ಒಂದು ದಿನ ಪ್ರಧಾನಿಯವರು ನನ್ನನ್ನು ಕರೆದರು. ಕೊವಿಡ್ 19 ರೋಗಿಗಳಿಗಾಗಿ ರೈಲ್ವೆ ಕೋಚ್ಗಳನ್ನು ಐಸೋಲೇಶನ್ ವಾರ್ಡ್ಗಳಾಗಿ ಬದಲಿಸಬಹುದಾ ಎಂದು ಕೇಳಿದರು. ನಾನದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ನನಗೆ ಯಾವತ್ತೂ ಇಂಥದ್ದೊಂದು ಯೋಚನೆ ಬಂದಿರಲಿಲ್ಲ. ನಿಜಕ್ಕೂ ಮೋದಿಯವರ ಈ ಐಡಿಯಾ ಹೊಸತನದಿಂದ ಕೂಡಿತ್ತು. ಹಾಗೇ ಐಸೋಲೇಶನ್ ವಾರ್ಡ್ ಆಗಿ ಪರಿವರ್ತನೆ ಮಾಡಲು ರೈಲ್ವೆ ಇಲಾಖೆ ಉದ್ಯೋಗಿಗಳು ಆರೋಗ್ಯ ಇಲಾಖೆಯೊಂದಿಗೆ ಸೇರಿ ಕಠಿಣ ಶ್ರಮ ವಹಿಸಿದ್ದಾರೆ ಎಂದು ಪಿಯುಷ್ ಗೋಯೆಲ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾವಿರದ ಗಡಿ ದಾಟಿದ ಚೇತರಿಕೆ ಸಂಖ್ಯೆ; ರಾಜ್ಯದಲ್ಲಿ 1,142 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್
ಇದೀಗ 5000 ಬೋಗಿಗಳಿಂದ ಒಟ್ಟು 80,000 ಐಸೋಲೇಶನ್ ಬೆಡ್ಗಳು ರೈಲ್ವೆ ಇಲಾಖೆಯಿಂದ ಸಿದ್ಧವಾಗಿದೆ ಎಂದಿದ್ದಾರೆ.
ಕರೊನಾ ವೈರಸ್ ಕಾಲದಲ್ಲಿ ರೈಲ್ವೆ ಇಲಾಖೆ ಉದ್ಯೋಗಿಗಳು ಅವಿರತವಾಗಿ ದುಡಿದಿದ್ದಾರೆ. ಯಾರೊಬ್ಬರೂ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿಲ್ಲ. 4611 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಒಟ್ಟು 63 ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲಾಗಿದೆ ಎಂದು ಹೇಳಿದರು.
ತಮ್ಮ ಊರುಗಳಿಗೆ ತೆರಳಲು ಶ್ರಮಿಕ್ ರೈಲಿನಲ್ಲಿ ಪ್ರಯಾಣ ಮಾಡಿದ ವಲಸೆ ಕಾರ್ಮಿಕರಿಗೆ ಊಟ, ತಿಂಡಿ, ನೀರಿನ ವ್ಯವಸ್ಥೆಯನ್ನು ರೈಲ್ವೆ ಇಲಾಖೆಯಿಂದ ಮಾಡಲಾಗಿದೆ. ಜೂ.18ರವರೆಗೆ ಒಟ್ಟು 3.12 ಕೋಟಿ ಕುಡಿಯುವ ನೀರಿನ ಪ್ಯಾಕೆಟ್ಗಳನ್ನು ವಸಲೆ ಕಾರ್ಮಿಕರಿಗೆ ಒದಗಿಸಲಾಗಿದೆ ಎಂದು ಹೇಳಿದರು.(ಏಜೆನ್ಸೀಸ್)
ರಾಮ್ ರಾಮ್..! ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಎಂದ ಸಚಿನ್ ಪೈಲಟ್