More

    ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

    ಮೈಸೂರು: ಬೆಂಗಳೂರು, ಮೈಸೂರಿನಲ್ಲಿನ ಕಾರ್ಯಕ್ರಮಗಳ ಬಳಿಕ ತಮ್ಮ ಕರ್ನಾಟಕ ಪ್ರವಾಸದ ಮೊದಲ ದಿನದ ಅಧಿಕೃತ ಷೆಡ್ಯೂಲನ್ನು ತಾಯಿ ಶ್ರೀಚಾಮುಂಡೇಶ್ವರಿ ದರ್ಶನದೊಂದಿಗೆ ಸಮಾಪ್ತಿಗೊಳಿಸಿರುವ ಪ್ರಧಾನಮಂತ್ರಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.

    ಸಾಂಪ್ರದಾಯಿಕ ದಿರಿಸಿನೊಂದಿಗೆ ದೇವಳಕ್ಕೆ ಆಗಮಿಸಿದ ಮೋದಿ ಭಕ್ತಿಪೂರ್ವಕವಾಗಿ ಒಂದಷ್ಟು ಕ್ಷಣಗಳನ್ನು ದೇವಸ್ಥಾನದಲ್ಲಿ ಕಳೆದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಹಳಷ್ಟು ಸಚಿವರು, ಶಾಸಕರು, ಸಂಸದರು ಮತ್ತಿತರರ ಜನಪ್ರತಿನಿಧಿಗಳು ಜೊತೆಗಿದ್ದರು.

    ಇದಕ್ಕೂ ಮೊದಲು ಅವರು ಮೈಸೂರಿನ ಸುತ್ತೂರು ಮಠ, ಅದಕ್ಕೂ ಮುನ್ನ ಮೈಸೂರು ಮಹಾರಾಜಾ ಕಾಲೇಜು ಮೈದಾನದಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಕಾನ್ವೆ ಮೂಲಕ ಪ್ರಧಾನಿ ಚಾಮುಂಡಿಬೆಟ್ಟಕ್ಕೆ ಆಗಮಿಸಿದರು. ಇಂದು ಐಷಾರಾಮಿ ಖಾಸಗಿ ಹೋಟೆಲ್​ನಲ್ಲಿ ತಂಗಲಿರುವ ಮೋದಿ, ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ; ಒಂದು ಮನೆಯಲ್ಲಿ 6, ಇನ್ನೊಂದು ಮನೆಯಲ್ಲಿ 3 ಶವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts